This page has been fully proofread once and needs a second look.

ವ್ಯಾಘ್ರಬುದ್ಧ್ಯಾ ವಿನಿರ್ಮುಕ್ತೋ ಬಾಣಃ ಪಶ್ಚಾತ್ತು ಗೋಮತೌ ।
ನ ತಿಷ್ಠತಿ ಛಿನತ್ತ್ಯೇವ ಲಕ್ಷ್ಯಂ ವೇಗೇನ ನಿರ್ಭರಮ್ ॥ ೪೫೧ ॥
 
ವ್ಯಾಘ್ರಬುದ್ಧ್ಯಾ = ಹುಲಿ ಎಂಬ ಬುದ್ಧಿಯಿಂದ, ವಿನಿರ್ಮುಕ್ತಃ = ಬಿಡಲ್ಪಟ್ಟ,
ಬಾಣಃ = ಬಾಣವು, ಪಶ್ಚಾತ್ = ಅನಂತರ, ಗೋಮತೌ ತು = ಹಸು ಎಂಬ ಬುದ್ಧಿ-
ಯುಂಟಾದರೂ, ನ ತಿಷ್ಠತಿ = ನಿಲ್ಲುವುದಿಲ್ಲ, ವೇಗೇನ = ವೇಗದಿಂದ, ನಿರ್ಭರಂ =
ಖಂಡಿತವಾಗಿ, ಲಕ್ಷ್ಯಂ = ಗುರಿಯನ್ನು, ಛಿನತ್ತಿ ಏವ = ಹೊಡೆದೇ ಹೊಡೆಯುತ್ತದೆ.
 
೪೫೧. ಹುಲಿಯೆಂಬ ಬುದ್ಧಿಯಿಂದ ಬಿಡಲ್ಪಟ್ಟ ಬಾಣವು ಅನಂತರ
'ಅದು ಹಸು' ಎಂಬ ಬುದ್ಧಿಯುಂಟಾದರೂ ನಿಲ್ಲುವುದಿಲ್ಲ; ವೇಗದಿಂದ
ತನ್ನ ಗುರಿಯನ್ನು ಖಂಡಿತವಾಗಿ ಹೊಡೆದೇಬಿಡುತ್ತದೆ.
 
ಪ್ರಾರಬ್ಧಂ ಬಲವತ್ತರಂ ಖಲು ವಿದಾಂ ಭೋಗೇನ ತಸ್ಯ ಕ್ಷಯಃ
ಸಮ್ಯಗ್ ಜ್ಞಾನಹುತಾಶನೇನ ವಿಲಯಃ ಪ್ರಾಕ್ಸಂಚಿತಾ-
ಗಾಮಿನಾಮ್ ।
 
ಬ್ರಹ್ಮಾತ್ಮೈಕ್ಯಮವೇಕ್ಷ್ಯ ತನ್ಮಯತಯಾ ಯೇ ಸರ್ವದಾ ಸಂಸ್ಥಿತಾ-
ಸ್ತೇಷಾಂ ತತ್ತ್ರಿತಯಂ ನ ಹಿ ಕ್ವಚಿದಪಿ ಬ್ರಹ್ಮೈವ ತೇ ನಿರ್ಗುಣಮ್ ॥ ೪೫೨ ॥
 
ಪ್ರಾರಬ್ಧಂ = ಪ್ರಾರಬ್ಧ ಕರ್ಮವು, ಬಲವತ್ತರಂ ಖಲು = ನಿಜವಾಗಿ ಅತ್ಯಂತ
ಬಲವಾದದ್ದು ; ವಿದಾಂ = ಜ್ಞಾನಿಗಳಿಗೂ, ತಸ್ಯ = ಅದರ, ಭೋಗೇನ = ಅನುಭವ-
ದಿಂದಲೇ, ಕ್ಷಯಃ = ನಾಶವು [ಆಗಬೇಕು]; ಪ್ರಾಕ್-ಸಂಚಿತ-ಆಗಾಮಿನಾಂ =
ಹಿಂದೆ ಸಂಪಾದಿಸಿದ ಮತ್ತು ಮುಂದೆ ಬರುವ, [ಕರ್ಮಗಳ] ವಿಲಯಃ = ನಾಶವು,
ಸಮ್ಯಗ್ ಜ್ಞಾನ-ಹುತಾಶನೇನ = ಸಮ್ಯಗ್ ಜ್ಞಾನವೆಂಬ ಅಗ್ನಿಯಿಂದ [ಆಗುತ್ತದೆ];
ಯೇ = ಯಾರು, ಬ್ರಹ್ಮ-ಆತ್ಮ-ಐಕ್ಯಂ = ಜೀವಾತ್ಮ-ಪರಮಾತ್ಮರ ಐಕ್ಯವನ್ನು, ಅವೇಕ್ಷ್ಯ =
ತಿಳಿದುಕೊಂಡು, ತನ್ಮಯತಯಾ = ತನ್ಮಯತೆಯಿಂದಲೇ, ಸರ್ವದಾ = ಯಾವಾಗಲೂ,
ಸಂಸ್ಥಿತಾಃ = ಇರುವರೋ, ತೇಷಾಂ = ಅವರಿಗೆ, ತತ್ ತ್ರಿತಯಂ = ಆ ಮೂರೂ,
ಕ್ವಚಿತ್ ಅಪಿ = ಸ್ವಲ್ಪವಾದರೂ, ನ = ಇರುವುದಿಲ್ಲ; ಹಿ = ಏಕೆಂದರೆ, ತೇ = ಅವರು
ನಿರ್ಗುಣಂ = ನಿರ್ಗುಣವಾದ, ಬ್ರಹ್ಮ ಏವ = ಬ್ರಹ್ಮವೇ ಆಗಿರುತ್ತಾರೆ.
 
೪೫೨. ಪ್ರಾರಬ್ಧ ಕರ್ಮವು ನಿಜವಾಗಿ ಅತ್ಯಂತ ಬಲವಾದದ್ದು. ಜ್ಞಾನಿ-
ಗಳು ಅದನ್ನು ಅನುಭವಿಸಿಯೇ ನಾಶಗೊಳಿಸಬೇಕು. ಸಮ್ಯಗ್ ಜ್ಞಾನ-
ವೆಂಬ ಅಗ್ನಿಯಿಂದ ಹಿಂದೆ ಸಂಪಾದಿಸಿದ ಮತ್ತು ಮುಂದೆ ಬರುವ ಕರ್ಮ
ಗಳೆಲ್ಲ ನಾಶವಾಗುತ್ತವೆ. ಆದರೆ ಯಾರು ಜೀವಾತ್ಮ -ಪರಮಾತ್ಮರ ಐಕ್ಯವನ್ನು