This page has been fully proofread once and needs a second look.

೪೪೮. ಆಕಾಶದಂತೆ ತನ್ನ ಆತ್ಮನು ಅಸಂಗನೆಂದೂ ಉದಾಸೀನ-
ನೆಂದೂ ತಿಳಿದುಕೊಂಡ ಯತಿಯು ಆಗಾಮಿಕರ್ಮಗಳಿಂದ[^೧] ಸ್ವಲ್ಪವೂ
ಎಂದಿಗೂ ಲಿಪ್ತನಾಗುವುದಿಲ್ಲ.
 
[^೧] ಆತ್ಮಜ್ಞಾನವಾದಮೇಲೆ ಮುಂದೆ ಮಾಡತಕ್ಕ ಕರ್ಮಗಳಿಂದ.]
 
ನ ನಭೋ ಘಟಯೋಗೇನ ಸುರಾಗಂಧೇನ ಲಿಪ್ಯತೇ ।
ತಥಾತ್ಮೋಪಾಧಿಯೋಗೇನ ತದ್ಧರ್ಮೈರ್ನೈವ ಲಿಪ್ಯತೇ ॥ ೪೪೯ ॥
 
ನಭಃ = ಆಕಾಶವು, ಘಟ-ಯೋಗೇನ = ಗಡಿಗೆಯ ಸಂಬಂಧದ ಮೂಲಕ,
ಸುರಾಗಂಧೇನ = [ಅದರಲ್ಲಿರುವ] ಮದ್ಯದ ವಾಸನೆಯಿಂದ, ನ ಲಿಪ್ಯತೇ = ಲಿಪ್ತ-
ವಾಗುವುದಿಲ್ಲ, ತಥಾ = ಹಾಗೆಯೇ, ಆತ್ಮಾ = ಆತ್ಮನು, ಉಪಾಧಿಯೋಗೇನ = ಉಪಾಧಿ
ಸಂಬಂಧದ ಮೂಲಕ, ತತ್-ಧರ್ಮೈಃ = ಅದರ ಧರ್ಮಗಳಿಂದ, ನ ಏವ ಲಿಪ್ಯತೇ =
ಲಿಪ್ತನಾಗುವುದೇ ಇಲ್ಲ.
 
೪೪೯. ಹೇಗೆ ಆಕಾಶವು ಗಡಿಗೆಯ ಸಂಬಂಧದ ಮೂಲಕ (ಅದರಲ್ಲಿ-
ರುವ) ಮದ್ಯದ ವಾಸನೆಯಿಂದ ಲಿಪ್ತವಾಗುವುದಿಲ್ಲವೋ ಹಾಗೆಯೇ ಆತ್ಮನು
ಉಪಾಧಿಯ ಸಂಬಂಧದ ಮೂಲಕ ಅದರ ಧರ್ಮಗಳಿಂದ ಲಿಪ್ತನಾಗುವುದಿಲ್ಲ.
 
[ಸ್ಫೂಥೂಲ- ಸೂಕ್ಷ್ಮ ಶರೀರಗಳ ಸಂಬಂಧವಿದ್ದರೂ ಅವುಗಳ ಧರ್ಮಗಳಿಂದ
ಆತ್ಮನು ಲಿಪ್ತನಾಗುವುದಿಲ್ಲ.]
 
ಜ್ಞಾನೋದಯಾತ್ ಪುರಾರಬ್ಧಂ ಕರ್ಮ ಜ್ಞಾನಾನ್ನ ನಶ್ಯತಿ ।
ಅದತ್ವಾ ಸ್ವಫಲಂ ಲಕ್ಷ್ಯಮುದ್ದಿಶ್ಯೋತ್ಸೃಷ್ಟಬಾಣವತ್ ॥ ೪೫೦ ॥
 
ಜ್ಞಾನೋದಯಾತ್ = ಜ್ಞಾನವು ಉದಯವಾಗುವುದಕ್ಕಿಂತ, ಪುರಾ = ಮೊದಲೇ
ಆರಬ್ಧಂ = [ಫಲವನ್ನು ಕೊಡುವುದಕ್ಕೆ] ಪ್ರಾರಂಭವಾಗಿರುವ, ಕರ್ಮ = ಕರ್ಮವು,
ಜ್ಞಾನಾತ್ = ಜ್ಞಾನದಿಂದ, ಸ್ವಫಲಂ = ತನ್ನ ಫಲವನ್ನು, ಅದತ್ವಾ = ಕೊಡದೆ--
ಲಕ್ಷ್ಯಂ = ಗುರಿಯನ್ನು, ಉದ್ದಿಶ್ಯ = ಉದ್ದೇಶಿಸಿ, ಉತ್ಕೃಸೃಷ್ಟ-ಬಾಣವತ್ = ಬಿಡಲ್ಪಟ್ಟ
ಬಾಣದಂತೆ, ನ ನಶ್ಯತಿ = ನಾಶವಾಗುವುದಿಲ್ಲ.
 
೪೫೦. ಜ್ಞಾನೋದಯಕ್ಕೆ ಮೊದಲೇ ಫಲವನ್ನು ಕೊಡುವುದಕ್ಕೆ
ಆರಂಭವಾಗಿರುವ ಕರ್ಮವು--ಗುರಿಯನ್ನು ಉದ್ದೇಶಿಸಿ ಬಿಟ್ಟ ಬಾಣವು
(ಗುರಿಯನ್ನು ಹೊಡೆಯುವಂತೆ)--ತನ್ನ ಫಲವನ್ನು ಕೊಡದೆ ಜ್ಞಾನದಿಂದ
ನಾಶವಾಗುವುದಿಲ್ಲ.