This page has been fully proofread once and needs a second look.

ದೇಹಾತ್ಮಧೀರೇವ ನೃಣಾಮಸದ್ಧಿ ಯಾಂ
ಜನ್ಮಾದಿ-ದುಃಖ-ಪ್ರಭವಸ್ಯ ಬೀಜಮ್ ।
ಯತಸ್ತತಸ್ತ್ವಂ ಜಹಿ ತಾಂ ಪ್ರಯತ್ನಾತ್
ತ್ಯಕ್ತೇತು ಚಿತ್ತೇ ನ ಪುನರ್ಭವಾಶಾ || ೧೬೪ ॥
 
ಅಸತ್-ಧಿಯಾಂ = ಅವಿವೇಕ ಬುದ್ಧಿಯುಳ್ಳ, ನೃಣಾಂ = ಜನರಿಗೆ, ದೇಹ-
ಆತ್ಮ-ಧೀಃ ಏವ = ದೇಹದಲ್ಲಿ ಆತ್ಮಬುದ್ಧಿಯೇ, ಜನ್ಮಾದಿ-ದುಃಖ-ಪ್ರಭವಸ್ಯ =
ಜನ್ಮವೇ ಮೊದಲಾದ ದುಃಖದ ಉತ್ಪತ್ತಿಗೆ, ಯತಃ=ಯಾವ ಕಾರಣದಿಂದ, ಬೀಜಂ=
ಕಾರಣವೊ, ತತಃ =ಆ ಕಾರಣದಿಂದಲೇ, ತ್ವಂ=ನೀನು, ತಾಂ=ಅಂಥ ಬುದ್ಧಿಯನ್ನು,
ಪ್ರಯತ್ನಾತ್ = ಪ್ರಯತ್ನದಿಂದ, ಜಹಿ = ಬಿಡು; ಚಿತ್ತೇ ತು ತ್ಯಕ್ತೇ= ಅಂಥ ಬುದ್ಧಿ-
ಯನ್ನು ಬಿಟ್ಟರೆ, ನ ಪುನರ್ಭವ-ಆಶಾ = ಪುನರ್ಜನ್ಮದ ಆಶೆಯಿಲ್ಲ.
 
೧೬೪, ಅವಿವೇಕಬುದ್ಧಿಯುಳ್ಳ ಜನರಿಗೆ ದೇಹಾದಿಗಳಲ್ಲಿರುವ 'ನಾನು'
ಎಂಬ ಬುದ್ಧಿಯೇ ಜನ್ಮವೇ ಮೊದಲಾದ ದುಃಖಗಳಿಗೆ ಕಾರಣವಾಗಿರುತ್ತದೆ.
ಆದುದರಿಂದ ನೀನು ಪ್ರಯತ್ನಪೂರ್ವಕವಾಗಿ ಅಂಥ ದೇಹಾತ್ಮಬುದ್ಧಿಯನ್ನು
ತೊರೆ. ದೇಹಾತ್ಮ ಬುದ್ಧಿಯು ಹೋದರೆ ಪುನರ್ಜನ್ಮದ ಸಂಭವವೇ ಇಲ್ಲ.
[ಛಾಂದೋಗ್ಯಪನಿಷತ್ತಿನಲ್ಲಿ (೮. ೧೨. ೧) ಶರೀರವುಳ್ಳವನು ಪ್ರಿಯಾಪ್ರಿಯ-
ಗಳಿಂದ ಗ್ರಸ್ತನಾಗಿರುವನೆಂದು ಹೇಳಿದೆ.]
 
ಕರ್ಮೇಂದ್ರಿಯೈಃ ಪಂಚಭಿರಂಚಿತೋsಯಂ
ಪ್ರಾಣೋ ಭವೇತ್ ಪ್ರಾಣಮಯಸ್ತು ಕೋಶಃ ।ಯೇನಾತ್ಮವಾನನ್ನಮಯೋsನುಪೂರ್ಣಃ
ಪ್ರವರ್ತತೇsಸೌ ಸಕಲಕ್ರಿಯಾಸು || ೧೬೫ ||
 
ಪಂಚಭಿಃ ಕರ್ಮೇಂದ್ರಿಯೈಃ = ಪಂಚಕರ್ಮೇಂದ್ರಿಯಗಳಿಂದ, ಅಂಚಿತಃ=
ಕೂಡಿರುವ, ಅಯಂ ಪ್ರಾಣಃ ತು=ಈ ಪ್ರಾಣವಾದರೂ, ಪ್ರಾಣಮಯಃ ಕೋಶಃ=
ಪ್ರಾಣಮಯಕೋಶವು, ಭವೇತ್=ಆಗುತ್ತದೆ; ಅನ್ನಮಯಃ=ಅನ್ನಮಯಕೋಶವು,
ಯೇನ = ಯಾವ ಈ ಪ್ರಾಣಮಯಕೋಶದಿಂದ, ಅನುಪೂರ್ಣಃ = ತುಂಬಲ್ಪಟ್ಟು,
ಆತ್ಮವಾನ್ = ಆತ್ಮವಂತವಾಗಿ, ಅಸೌ = ಈ ಕೋಶವು, ಸಕಲಕ್ರಿಯಾಸು = ಎಲ್ಲಾ
ಕ್ರಿಯೆಗಳಲ್ಲಿಯೂ, ಪ್ರವರ್ತತೇ = ಪ್ರವರ್ತಿಸುತ್ತದೆಯೊ.
 
೧೬೫. ಪಂಚಕರ್ಮೇಂದ್ರಿಯಗಳೊಂದಿಗೆ ಕೂಡಿರುವ ಈ ಪ್ರಾಣವು
ಪ್ರಾಣಮಯಕೋಶವಾಗುತ್ತದೆ. ಅನ್ನಮಯಕೋಶವು ಈ ಪ್ರಾಣಮಯ