This page has been fully proofread once and needs a second look.

೧೫೮. ಮೂಳೆಗಳ ರಾಶಿಯಾದ ಮಾಂಸದಿಂದ ಮುಚ್ಚಲ್ಪಟ್ಟಿರುವ
ಮಲಪೂರ್ಣವಾಗಿ ಅತ್ಯಂತ ಕಶ್ಮಲವಾದ ಈ ಶರೀರವು ತನಗಿಂತ ವಿಲಕ್ಷಣ-
ವಾದ, ಅರಿಯುವವನಾದ ಆತ್ಮನು ಹೇಗಾದೀತು?
 
ತ್ವಙ್ಮಾಂಸ-ಮೇದೋsಸ್ಥಿ-ಪುರೀಷ-ರಾಶಾ-
ವಹಂಮತಿಂ ಮೂಢಜನಃ ಕರೋತಿ ।
ವಿಲಕ್ಷಣಂ ವೇತ್ತಿ ವಿಚಾರಶೀಲೋ
ನಿಜಸ್ವರೂಪಂ ಪರಮಾರ್ಥಭೂತಮ್ || ೧೫೯ ||
 
ಮೂಢ ಜನಃ = ಮೂಢಜನವು, ತ್ವಕ್ - ಮಾಂಸ- ಮೇದಃ-ಅಸ್ಥಿ-ಪುರೀಷ-
ರಾಶೌ = ಚರ್ಮ ಮಾಂಸ ಮೇದಸ್ಸು ಮೂಳೆ ಮಲ-ಇವುಗಳ ರಾಶಿಯಲ್ಲಿ, ಅಹಂ-
ಮತಿಂ='ನಾನು' ಎಂಬ ಬುದ್ಧಿಯನ್ನು, ಕರೋತಿ = ಮಾಡುತ್ತದೆ; ವಿಚಾರಶೀಲಃ=
ವಿವೇಕಿಯು, ನಿಜಸ್ವರೂಪಂ=ತನ್ನ ಸ್ವರೂಪವನ್ನು, ವಿಲಕ್ಷಣಂ = ವಿಲಕ್ಷಣವೆಂದೂ,
ಪರಮಾರ್ಥಭೂತಂ = ಸತ್ಯವೆಂದೂ, ವೇತ್ತಿ = ಅರಿತುಕೊಳ್ಳುತ್ತಾನೆ.
 
೧೫೯. ಚರ್ಮ ಮಾಂಸ ಮೇದಸ್ಸು ಮೂಳೆ ಮಲ-ಇವುಗಳ ರಾಶಿ-
ಯಾಗಿರುವ ಈ ಶರೀರದಲ್ಲಿ ಮೂಢಜನವು 'ನಾನು' ಎಂಬ ಬುದ್ಧಿಯನ್ನು[^೧]
ಮಾಡುತ್ತದೆ. ವಿವೇಕಿಯಾದವನು (ಶರೀರಾದಿಗಳಿಗಿಂತ) ಭಿನ್ನವಾದ ಮತ್ತು
ಪರಮಾರ್ಥವಾದ ತನ್ನ ಸ್ವರೂಪವನ್ನು ಅರಿತುಕೊಳ್ಳುತ್ತಾನೆ.
 
[^೧] ನಾನು ಸ್ಥೂಲನು, ನಾನು ಕೃಶನು ಇತ್ಯಾದಿ ಬುದ್ಧಿಯನ್ನು.]
 
ದೇಹೋಽಹಮಿತ್ಯೇವ ಜಡಸ್ಯ ಬುದ್ಧಿ-
ರ್ದೆಹೇ ಚ ಜೀವೇ ವಿದುಷಸ್ತ್ವಹಂಧೀಃ ।
ವಿವೇಕ-ವಿಜ್ಞಾನವತೋ ಮಹಾತ್ಮನೋ
ಬ್ರಹ್ಮಾಹಮಿತ್ಯೇವ ಮತಿಃ ಸದಾತ್ಮನಿ ॥ ೧೬೦ ॥
 
ಜಡಸ್ಯ = ಜಡನಿಗೆ, ದೇಹಃ=ಶರೀರವು, ಅಹಂ = ನಾನು, ಇತಿ ಏವ=ಎಂದೇ,
ಬುದ್ಧಿಃ = ಬುದ್ಧಿಯುಂಟಾಗುತ್ತದೆ; ವಿದುಷಃ ತು = ಲೌಕಿಕ ಪಂಡಿತನಿಗೆ, ದೇಹೇ-
ಜೀವೇ ಚ=ಶರೀರದಲ್ಲಿ ಮತ್ತು ಜೀವನಲ್ಲಿ, ಅಹಂಧೀಃ ='ನಾನು' ಎಂಬ ಬುದ್ಧಿಯು
ಉಂಟಾಗುತ್ತದೆ; ವಿವೇಕವಿಜ್ಞಾನವತಃ=ಆತ್ಮಾನಾತ್ಮ-ವಿವೇಚನವನ್ನು ಮಾಡಿರುವ,
ಮಹಾತ್ಮನಃ =ಮಹಾತ್ಮನಿಗೆ, ಸತ್-ಆತ್ಮನಿ = ಅವಿನಾಶಿಯಾದ ಆತ್ಮಸ್ವರೂಪದಲ್ಲಿ,
ಅಹಂ ಬ್ರಹ್ಮ=ನಾನು ಬ್ರಹ್ಮವು, ಇತಿ ಏವ=ಎಂಬ, ಮತಿಃ= ಬುದ್ಧಿಯು ಉಂಟಾಗು-
ತ್ತದೆ.