This page has been fully proofread once and needs a second look.

ಜ್ಞಾನವು ಉಂಟಾಗುವುದು. ಅದರಿಂದಲೇ ಸಂಸಾರವು ನಿರ್ಮಲವಾಗಿ
ನಾಶವಾಗುತ್ತದೆ.
 
[^೧] 'ಕಾರ್ಯ ಅಕಾರ್ಯ ಇವುಗಳ ನಿರ್ಧಾರಣೆಯಲ್ಲಿ ಶಾಸ್ತ್ರವೇ ನಿನಗೆ ಪ್ರಮಾಣ'
ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ ಎಂದು ಭಗ-
ವಂತನು (ಗೀತಾ ೧೬, ೨೪) ಹೇಳಿದ್ದಾನೆ.
 
ಕೋಶೈರನ್ನಮಯಾದ್ಯೈಃ ಪಂಚಭಿರಾತ್ಮಾ ನ ಸಂವೃತೋ ಭಾತಿ ।
ನಿಜಶಕ್ತಿ-ಸಮು-ಶೈವಾಲ-ಪಟಲೈರಿವಾಂಬು ವಾಪಿಸ್ಥಮ್
॥ ೧೪೯ ॥
 
ಶೈವಾಲ- ಪಟಲೈಃ = ಪಾಚಿಯ ಪದರಗಳಿಂದ [ಮುಚ್ಚಲ್ಪಟ್ಟ], ವಾಪಿಸ್ಥ=
ಕೊಳದಲ್ಲಿರುವ, ಅಂಬು ಇವ = ನೀರಿನಂತೆ, ನಿಜಶಕ್ತಿ-ಸಮುತ್ಪನ್ನೈಃ = ತನ್ನ ಶಕ್ತಿ-
ಯಿಂದ ಉಂಟಾದ, ಅನ್ನಮಯಾದ್ಯೈಃ = ಅನ್ನಮಯವೇ ಮೊದಲಾದ, ಪಂಚಭಿಃ
ಕೋಶೈಃ = ಪಂಚಕೋಶಗಳಿಂದ, ಸಂವೃತ=ಮುಚ್ಚಲ್ಪಟ್ಟ, ಆತ್ಮಾ=ಆತ್ಮನು, ನ
ಭಾತಿ = ಕಾಣಿಸಿಕೊಳ್ಳುವುದಿಲ್ಲ.
 
೧೪೯.ಪಾಚಿಯ ಪದರಗಳಿಂದ ಮುಚ್ಚಲ್ಪಟ್ಟ ಕೊಳದಲ್ಲಿ ನೀರು
ಕಾಣದೆ ಇರುವಂತೆ ತನ್ನ ಶಕ್ತಿಯಿಂದಲೇ ಉಂಟಾಗಿರುವ ಅನ್ನಮಯಾದಿ
ಪಂಚಕೋಶಗಳಿಂದ ಮುಚ್ಚಲ್ಪಟ್ಟ ಆತ್ಮನು ಕಾಣಿಸಿಕೊಳ್ಳದೆ ಇರುತ್ತಾನೆ.
 
ತಚ್ಛೈವಾಲಾಪನಯೇ ಸಮ್ಯಕ್ ಸಲಿಲಂ ಪ್ರತೀಯತೇ ಶುದ್ಧಮ್ ।
ತೃಷ್ಣಾ-ಸಂತಾಪಹರಂ ಸದ್ಯಃ ಸೌಖ್ಯ ಪ್ರದಂ ಪರಂ ಪುಂಸಃ || ೧೫೦ ||
 
ತತ್-ವಾಲ-ಅಪನಯೇ = [ನೀರನ್ನು ಮುಚ್ಚಿಕೊಂಡಿರುವ],ಆ ಪಾಚಿ-
ಯನ್ನು ತೆಗೆದಾಗ, ಪುಂಸಃ=ಮನುಷ್ಯನ, ತೃಷ್ಣಾ-ಸಂತಾಪಹರಂ =ತೃಷ್ಣೆಯ ಸಂಕಟ-
ವನ್ನು ಹೋಗಲಾಡಿಸುವ, ಸದ್ಯಃ= ಕೂಡಲೇ, ಪರಂ ಸೌಖ್ಯಪ್ರದಂ=ಅತ್ಯಂತ-
ಸುಖಪ್ರದವಾದ, ಶುದ್ಧಂ = ನಿರ್ಮಲವಾದ, ಸಲಿಲಂ=ನೀರು, ಸಮ್ಯಕ್=ಚೆನ್ನಾಗಿ,
ಪ್ರತೀಯತೇ = ಕಾಣಬರುವುದು.
 
೧೫೦. (ನೀರನ್ನು ಮುಚ್ಚಿಕೊಂಡಿರುವ) ಆ ಪಾಚಿಯನ್ನು ತೆಗೆದರೆ
ಮನುಷ್ಯನ ತೃಷ್ಣೆಯ ಸಂಕಟವನ್ನು ಹೋಗಲಾಡಿಸುವ, ಕೂಡಲೇ ಅತ್ಯಂತ
ಸುಖವನ್ನು ಉಂಟುಮಾಡುವ, ನಿರ್ಮಲವಾದ ನೀರು ಚೆನ್ನಾಗಿ ಕಾಣ-
ಬರುವುದು.