This page has not been fully proofread.

೧೩೭]
 
ವಿವೇಕಚೂಡಾಮಣಿ
 
೭೩
 
=
 
ತ್ವಂ- ನೀನು ನಿಯಮಿತ ಮನಸಾ-ನಿಯಮಿತವಾದ ಮನಸ್ಸಿನಿಂದ ಬುದ್ಧಿ-
ಪ್ರಸಾದಾತ್ = ಬುದ್ಧಿ ಪ್ರಸನ್ನತೆಯಿಂದ ಅಮುಂ ಸ್ವಮ್ ಆತ್ಮಾನಂ - ಈ ನಿನ್ನ ಆತ್ಮ
ನನ್ನು ಆತ್ಮನಿ - ನಿನ್ನಲ್ಲಿಯೇ ಅಯಮ್ ಅಹಮ ಇತಿ - 'ಇವನೇ ನಾನು' ಎಂದು
ಸಾಕ್ಷಾತ್ = ಸಾಕ್ಷಾತ್ತಾಗಿ ವಿದ್ದಿ = ಅರಿತುಕೊ; ಜನಿ-ಮರಣ ತರಂಗ, ಅಪಾರ.
ಸಂಸಾರ ಸಿಂಧುಂ - ಹುಟ್ಟು ಸಾವು ಎಂಬ ಅಲೆಗಳಿಂದ ಕೂಡಿ ಅಪಾರವಾಗಿರುವ
ಸಂಸಾರಸಮುದ್ರವನ್ನು ಪ್ರತರ=ದಾಟು, ಬ್ರಹ್ಮರೂಪೇಣ - ಬ್ರಹ್ಮಸ್ವರೂಪದಿಂದ
ಸಂಸ್ಕೃಃ ಸನ್ = ನಿಂತವನಾಗಿ ಕೃತಾರ್ಥಃ ಭವ - ಕೃತಾರ್ಥನಾಗು.
 
0
 
೧೩೬. (ಎಲೈ ಶಿಷ್ಯನೆ), (ಯಮ-ನಿಯಮಾದಿಗಳಿಂದ) ಮನಸ್ಸನ್ನು ವಶ
ಪಡಿಸಿಕೊಂಡು ಪ್ರಸನ್ನಚಿತ್ತದಿಂದ ಈ ನಿನ್ನ ಆತ್ಮನನ್ನು ನಿನ್ನಲ್ಲಿಯೇ
"ಇವನೇ ನಾನು'' ಎಂದು ಸಾಕ್ಷಾತ್ತಾಗಿ ತಿಳಿದುಕೊ, ಹುಟ್ಟು ಸಾವುಗಳೆಂಬ
ಅಲೆಗಳಿಂದ ಕೂಡಿ ಅಪಾರವಾಗಿರುವ ಸಂಸಾರಸಮುದ್ರವನ್ನು ದಾಟು, ಪರ
ಬ್ರಹ್ಮಸ್ವರೂಪದಲ್ಲಿ ನಿಂತವನಾಗಿ ಕೃತಕೃತ್ಯನಾಗು.
 
[೧ ಅಸಂಭಾವನೆ ಸಂಶಯ ವಿಪರೀತಭಾವನೆ-ಇವುಗಳಿಲ್ಲದೆ. 'ಸೂಕ್ಷ್ಮದರ್ಶಿಗಳು
ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ನೋಡುತ್ತಾರೆ' ದೃಶ್ಯತೇ ಯಾ
ಬುದ್ಧಾ ಸೂಕ್ಷ್ಮಯಾ ಸೂಕ್ಷ್ಮದರ್ಶಿಭಿಃ (ಕಠ ಉ.೧. ೩. ೧೨) ಎಂದು ಶ್ರುತಿಯು
ಹೇಳುತ್ತದೆ.
 
9
 
ಸ್ಕೂಲ-ಸೂಕ್ಷ್ಮ ಕಾರಣ-ಶರೀರಗಳೊಂದಿಗೆ ತಾದಾತ್ಮವನ್ನು ಪಡೆಯದೆ,
ತತ್ತ್ವಮಸಿ ಎಂಬ ಶ್ರುತಿವಾಕ್ಯದಂತೆ 'ಈ ಆತ್ಮನೇ ನಾನು' ಎಂದು ಸಾಕ್ಷಾತ್ಕರಿಸಿ
ಕೊಳ್ಳಬೇಕು.]
 
ಅತ್ರಾನಾತ್ಮನ್ಯ ಹಮಿತಿ ಮತಿರ್ಬಂಧ ಏಷೋಸ್ಕ ಪುಂಸಃ
ಪ್ರಾಪೋ ಜ್ಞಾನಾಜ್ಜನ
ನನ-ಮರಣ-ಕೋಶ-ಸಂಪಾತ-ಹೇತುಃ ।
ಯೇನೈವಾಯಂ ವಪುರಿದಮಸತ್ಸತ್ಯ ಮಿತ್ಯಾತ್ಮಬುದ್ಧಾ
ಪುಷ್ಯತ್ಯುಕೃತ್ಯವತಿ ವಿಷಯ್ಕೆಸ್ತಂತುಭಿಃ ಕೋಶಕೃದ್ವತ್ । ೧೩೭ ॥
ಅತ್ರ ಅನಾತ್ಮನಿ-ಈ ಅನಾತ್ಮನಲ್ಲಿ ಆಹ ಇತಿ 'ನಾನು' ಎಂಬ ಮತಿಃ
ಬುದ್ಧಿಯು ಬಂಧಃ - ಬಂಧವು; ಜನನ-ಮರಣ, ಕೇಶ, ಸಂಪಾತ ಹೇತುಃ – ಜನನ
ಮರಣಗಳೆಂಬ ಕೇಶಗಳ ಹೊಡೆತಕ್ಕೆ ಕಾರಣವಾದ ಏಷಃ - ಇದು ಅಸ್ಯ
ಈ ಮನುಷ್ಯನಿಗೆ ಅಜ್ಞಾನಾತ್ . ಅಜ್ಞಾನದಿಂದ ಪ್ರಾಪ್ತಃ = ಸಂಭವಿಸಿದೆ; ಯೇನ
ಏವ = ಯಾವ ಇದರಿಂದಲೇ ಅಯಂ = ಇವನು ಅಸತ್ = ಅಸತ್ಯವಾದ ಇದಂ
ವಪುಃ - ಈ ಶರೀರವನ್ನು ಸತ್ಯ ಇತಿ- - ಸತ್ಯವೆಂದು ಆತ್ಮಬುದ್ಧಾ - ಆತ್ಮನೆಂಬ
ಬುದ್ಧಿಯಿಂದ-ತಂತುಭಿಃ - ತಂತುಗಳಿಂದ ಕೋಶಕೃದ್ವತ್ – ಗೂಡನ್ನು ಕಟ್ಟಿ
 
ಪುಂಸಃ-
=