This page has been fully proofread once and needs a second look.

ತ್ತಾನೆ. ಈ ಶರೀರವು ನಾಶವಾದರೂ ಗಡಿಗೆಯಲ್ಲಿರುವ ಆಕಾಶದಂತೆ[^೧]
ತಾನು ಮಾತ್ರ ನಾಶವಾಗುವುದಿಲ್ಲ.
[^೧] ಗಡಿಗೆಯು ಒಡೆದುಹೋದರೂ ಅದರಲ್ಲಿದ್ದ ಆಕಾಶಕ್ಕೆ ಏನೂ ಆಗುವುದಿಲ್ಲ.]
 
ಪ್ರಕೃತಿ-ವಿಕೃತಿ-ಭಿನ್ನಃ ಶುದ್ಧ ಬೋಧ-ಸ್ವಭಾವಃ
ಸದಸದಿದಮಶೇಷಂ ಭಾಸಯನ್ನಿರ್ವಿಶೇಷಃ ।
ವಿಲಸತಿ ಪರಮಾತ್ಮಾ ಜಾಗ್ರದಾದಿಷ್ಟವಸ್ಥಾ-
ಸ್ವಹಮಹಮಿತಿ ಸಾಕ್ಷಾತ್ ಸಾಕ್ಷಿರೂಪೇಣ
ಬುದ್ಧೇಃ ॥ ೧೩೫ ॥
 
ಪ್ರಕೃತಿ-ವಿಕೃತಿ-ಭಿನ್ನ = ಕಾರಣ ಕಾರ್ಯ ಇವುಗಳಿಗಿಂತ ವಿಲಕ್ಷಣನೂ,
ಶುದ್ಧ-ಬೋಧ-ಸ್ವಭಾವಃ = ನಿರ್ಮಲಚಿತ್ಸ್ವರೂಪನೂ, ನಿರ್ವಿಶೇಷಃ = ವಿಶೇಷರಹಿ-
ತನೂ ಆದ, ಪರಮಾತ್ಮಾ=ಪರಮಾತ್ಮನು, ಸತ್ ಅಸತ್=ಸ್ಥೂಲಸೂಕ್ಷ್ಮವಾದ,
ಇದಮ್ ಅಶೇಷಂ=ಈ ಜಗತ್ತೆಲ್ಲವನ್ನೂ, ಭಾಸಯನ್=ಪ್ರಕಾಶಪಡಿಸುತ್ತ, ಜಾಗ್ರ-
ದಾದಿಷು=ಜಾಗ್ರತ್ ಮೊದಲಾದ, ಅವಸ್ಥಾಸು=ಅವಸ್ಥೆಗಳಲ್ಲಿ, ಅಹಮ್ ಅಹಮ್
ಇತಿ = 'ನಾನು, ನಾನು' ಎಂದು, ಬುದ್ಧೇಃ = ಬುದ್ಧಿಗೆ, ಸಾಕ್ಷಿರೂಪೇಣ = ಸಾಕ್ಷಿ
ರೂಪನಾಗಿ, ಸಾಕ್ಷಾತ್ ವಿಲಸತಿ = ಸಾಕ್ಷಾತ್ತಾಗಿ ಪ್ರಕಾಶಿಸುತ್ತಾನೆ.
 
೧೩೫. ಪರಮಾತ್ಮನು ಕಾರ್ಯ-ಕಾರಣಗಳಿಗಿಂತ ವಿಲಕ್ಷಣವಾಗಿ
ನಿರ್ಮಲ-ಚಿತ್-ಸ್ವರೂಪನಾಗಿ ನಿರ್ವಿಶೇಷನಾಗಿ[^೧] ಸ್ಥೂಲಸೂಕ್ಷ್ಮವಾದ ಈ
ಜಗತ್ತೆಲ್ಲವನ್ನೂ ಬೆಳಗುತ್ತ, ಜಾಗ್ರತ್ತೇ ಮೊದಲಾದ ಅವಸ್ಥೆಗಳಲ್ಲಿ 'ನಾನು
ನಾನು' ಎಂದು ಬುದ್ಧಿಗೆ ಸಾಕ್ಷಿಯಾಗಿ[^೨] ಸಾಕ್ಷಾತ್ತಾಗಿ ಪ್ರಕಾಶಿಸುತ್ತಾನೆ.
 
[^೧] ನಾಮ ಜಾತಿ ಗುಣ ಕ್ರಿಯೆ-ಇವುಗಳಿಲ್ಲದೆ.
[^೨] ನಾವು ಮಾಡುವಂತೆ ಕಾಣುವ ಕ್ರಿಯೆಗಳೆಲ್ಲ ಬುದ್ಧಿಯಿಂದಲೇ ಆಗುವುದೇ
ವಿನಾ ನಿಷ್ಕ್ರಿಯನಾದ ಸಾಕ್ಷಿಯಿಂದಲ್ಲ.]
 
ನಿಯಮಿತ-ಮನಸಾsಮುಂ ತ್ವಂ ಸ್ವಮಾತ್ಮಾನಮಾತ್ಮ-
ನ್ಯಯಮಹಮಿತಿ ಸಾಕ್ಷಾದ್ವಿದ್ಧಿ ಬುದ್ಧಿ ಪ್ರಸಾದಾತ್ ।
ಜನಿ-ಮರಣ-ತರಂಗಾಪಾರ-ಸಂಸಾರಸಿಂಧುಂ
ಪ್ರತರ ಭವ ಕೃತಾರ್ಥೋ ಬ್ರಹ್ಮರೂಪೇಣ ಸಂಸ್ಥಃ
॥ ೧೩೬ ॥