This page has not been fully proofread.

20
 
ವಿವೇಕಚೂಡಾಮಣಿ
 
[೧೩೨
 
ವುಳ್ಳವನು, ಜ್ಞಾನಮಾತ್ರಸ್ವರೂಪನು. ಇವನ ಪ್ರೇರಣೆಯಿಂದ ವಾಕ್ಷಾಣ
ಗಳು ಚಲಿಸುತ್ತಿರುವುವು.
 
[೧ 'ಸರ್ವಾಂತರ್ವತಿ್ರಯಾದ ಇವನೇ ನಿನ್ನ ಆತ್ಮನು' ಏಷ ತ ಆತ್ಮಾ ಸರ್ವಾಂತರಃ
(ಬೃಹದಾರಣ್ಯಕ ಉ, ೩. ೪. ೧).
೨ ಪ್ರತಿಬೋಧದಲ್ಲಿಯೂ
 
ತಿಳಿಯಲ್ಪಟ್ಟಿದ್ದು ' ಪ್ರತಿ ಬೋಧವಿದಿತಮ್ (ಕೇನ ಉ.
೨.೪.); ಎಂದರೆ ಬುದ್ಧಿಯ ಪ್ರತಿಯೊಂದು ಪ್ರತ್ಯಯದಲ್ಲಿಯೂ ತಿಳಿಯಲ್ಪಡುತ್ತಾನೆ.
 
ಅವ ಸಾತ್ಮನಿ ಧೀ-ಗುಹಾಯಾ-
ಮವ್ಯಾಕೃತಾಕಾಶ ಉಶತ್ವಕಾಶಃ ।
ಆಕಾಶ ಉಚ್ಚೆ ರವಿವಕಾಶತೇ
 
ಸ್ವತೇಜಸಾ ವಿಶ್ವಮಿದಂ ಪ್ರಕಾಶಯನ್ ॥ ೧೩೨ i
 
ಆತ್ರ ಏವ = ಈ ಶರೀರದಲ್ಲಿಯೇ ಸತ್ತಾತ್ಮನಿ - ಸತ್ಯಗುಣ ಪ್ರಧಾನವಾದ
ಮನಸ್ಸಿನಲ್ಲಿ ಧೀ ಗುಹಾಯಾಂ = ಬುದ್ಧಿಯೆಂಬ ಗುಹೆಯಲ್ಲಿ ಅವ್ಯಾಕೃತ ಆಕಾಶೇ-
ಅವ್ಯಾಕೃತವೆಂಬ ಆಕಾಶದಲ್ಲಿ ಉಶತ್ರಕಾಶಃ = ಕಮನೀಯಪ್ರಕಾಶನಾದ ಆತ್ಮನು
ಸ್ವತೇಜಸಾ - ತನ್ನ ತೇಜಸ್ಸಿನಿಂದ ಇದಂ ವಿಶ್ವಂ - ಈ ವಿಶ್ವವನ್ನು ಪ್ರಕಾಶಯನ್ =
ಪ್ರಕಾಶಿಸುವವನಾಗಿ ಆಕಾಶೇ = ಆಕಾಶದಲ್ಲಿ ರವಿವತ್ – ಸೂರ್ಯನಂತೆ ಉಚ್ಚ
ಪ್ರಕಾಶತೇ = ಸರ್ವೋತ್ಕೃಷ್ಟನಾಗಿ ಪ್ರಕಾಶಿಸುತ್ತಾನೆ.
 
8
 
೧೩೨. ಈ ಶರೀರದಲ್ಲಿಯೇ ಸತ್ಯಗುಣಪ್ರಧಾನವಾದ ಮನಸ್ಸಿದೆ; ಅದರಲ್ಲಿ
ಬುದ್ಧಿಯೆಂಬ ಗುಹೆಯಿದೆ; ಅದರಲ್ಲಿರುವ ಅವ್ಯಾಕೃತವೆಂಬ ಆಕಾಶದಲ್ಲಿ ಕಮ
ನೀಯಪ್ರಕಾಶನಾದ ಆತ್ಮನು-ಆಕಾಶದಲ್ಲಿರುವ ಸೂರ್ಯನಂತೆ ತನ್ನ ತೇಜ
ಸ್ಸಿನಿಂದ ಈ ವಿಶ್ವವನ್ನೆಲ್ಲ ಬೆಳಗುತ್ತ ಸರ್ವೋತ್ಕೃಷ್ಟನಾಗಿ ಪ್ರಕಾಶಿಸುತ್ತಾನೆ.
 
ವಾದ ಅಂತಃಕರಣವಿದೆ.
 
[ಮೇಲೆ ಹೇಳಿದ ಲಕ್ಷಣಗಳುಳ್ಳ ಆತ್ಮನನ್ನು ಎಲ್ಲಿ ಹುಡುಕಬೇಕೆಂದು ಇಲ್ಲಿ
ಹೇಳಿದೆ. ಮೊದಲು ಸ್ಕೂಲವಾದ ನಮ್ಮ ಶರೀರವಿದೆ; ಅದರಲ್ಲಿ ಸತ್ತ್ವಗುಣಪ್ರಧಾನ
ಬುದ್ಧಿಯು ಅಂತಃಕರಣದ ನಿಶ್ಚಯಾತ್ಮಕವಾದ ರೂಪ.
ಬುದ್ಧಿಯಲ್ಲಿ ಅವ್ಯಾಕೃತ ಅಥವಾ ಕಾರಣಶರೀರ ಎಂಬ ಆಕಾಶವಿದೆ. ಈ ಆಕಾಶ
ದಲ್ಲಿ ಆತ್ಮನನ್ನು ಧ್ಯಾನಿಸಬೇಕು.
ಭಿನ್ನನು ಎಂಬುದು ಅಭಿಪ್ರಾಯ.]
 
ಆತ್ಮನು ಸ್ಕೂಲ. ಸೂಕ್ಷ್ಮ ಕಾರಣ-ಶರೀರಗಳಿಗಿಂತ
 

 
ಜ್ಞಾತಾ ಮನೋಽಹಂಕೃತಿ-ವಿಕ್ರಿಯಾಣಾಂ
ದೇಹೇಂದ್ರಿಯ-ಪ್ರಾಣ-ಕೃತಕ್ರಿಯಾಣಾಮ್
ಅಯೋಗ್ನಿವತ್ತಾನನುವರ್ತಮಾನೋ
 

 
ನ ಚೇಷ್ಟತೇ ನೋ ವಿಕರೋತಿ ಕಿಂಚನ ॥ ೧೩೩