This page has not been fully proofread.

೯೬]
 
ವಿವೇಕಚೂಡಾಮಣಿ
 
೪೯
 
೯೫. ಸುವರ್ಣ ನೀರು ಇವು ವಿಕಾರಭೇದದಿಂದ (ವಿವಿಧವಾದ ಹೆಸರು
ಗಳನ್ನು ಪಡೆಯುವಂತೆ" ಈ ಪ್ರಾಣವು ತಾನೊಂದೇ ಆಗಿದ್ದರೂ ಕ್ರಿಯಾ
ಭೇದದಿಂದ ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬ ನಾಮಗಳನ್ನು
ಪಡೆಯುತ್ತದೆ.
 
[೧ ಸುವರ್ಣವು ಕಟಕ ಕೇಯೂರ ಕುಂಡಲ ಮೊದಲಾದ ಹೆಸರುಗಳನ್ನು ಪಡೆಯು
ಇದೆ; ನೀರು ತರಂಗ ನೊರೆ ಮೊದಲಾದ ಹೆಸರುಗಳನ್ನು ಪಡೆಯುತ್ತದೆ.
 
* ಉಚ್ಛಾಸಾದಿ ಕರ್ಮಗಳುಳ್ಳ ಮುಂದುವರಿಯುವ ವೃತ್ತಿಯು ಪ್ರಾಣವೆನಿಸಿದೆ;
ನಿಃಶ್ವಾಸಾದಿಕರ್ಮಗಳುಳ್ಳ ಹಿಂದಕ್ಕೆ ಹೋಗುವ ವೃತ್ತಿಯು ಅಪಾನ; ಪ್ರಾಣಾಪಾನ
ಗಳ ಮಧ್ಯೆಯಿದ್ದು ವೀರ್ಯವತ್ಕರ್ಮವನ್ನು ಮಾಡಲು ಕಾರಣವಾಗಿರುವ ವೃತ್ತಿಯು
ವ್ಯಾನವು; ಉತ್ಕಾಂತ್ಯಾದಿ ಕರ್ಮಕ್ಕೆ ಕಾರಣವಾಗಿ ಮೇಲಕ್ಕೇರುವ ಪ್ರಾಣವು
ಉದಾನ; ಎಲ್ಲಾ ಅಂಗಗಳಿಗೂ ಸಮಾನವಾಗಿ ಅನ್ನರಸವನ್ನು ಒಯುವ ವೃತ್ತಿಯು
ಸಮಾನ (ಸೂತ್ರಭಾಷ್ಯ ೨. ೪. ೧೨).]
 
ವಾಗಾದಿ ಪಂಚ ಶ್ರವಣಾದಿ ಪಂಚ
ಪ್ರಾಣಾದಿ ಪಂಚಾಭ್ರಮುಖಾನಿ ಪಂಚ ।
ಬುದ್ಧಾದ್ಯವಿದ್ಯಾಪಿ ಚ ಕಾಮ-ಕರ್ಮಣಿ
ಪುರ್ಯಷ್ಟಕಂ ಸೂಕ್ಷ್ಮಶರೀರಮಾಹುಃ ॥ ೯೬ ॥
 
ನಾಗಾದಿ ಪಂಚ = ವಾಗಾದಿ ಪಂಚಕ ಶ್ರವಣಾದಿ ಪಂಚ - ಶ್ರವಣಾದಿ
ಪಂಚಕ ಪ್ರಾಣಾದಿ ಪಂಚಪ್ರಾಣಾದಿ ಪಂಚಕ ಅಭ್ರಮುಖಾನಿ ಪಂಚ ಆಕಾಶಾದಿ
ಭೂತಪಂಚಕ ಬುದ್ಧಾದಿ - ಬುದ್ಧಿಯ ಯೇ ಮೊದಲಾದುವು ಅವಿದ್ಯಾ - ಅವಿದ್ಯೆ ಅಪಿ
ಚ = ಮತ್ತು ಕಾಮ ಕರ್ಮಣೀ ಕಾಮ ಮತ್ತು ಕರ್ಮ- ಪುರ್ಯಷ್ಟ ಕಂ = ಈ
ಎಂಟು ಪುರಗಳನ್ನು ಸೂಕ್ಷ್ಮಶರೀರಂ ಸೂಕ್ಷ್ಮ ಶರೀರವೆಂದು ಆಹುಃ ಹೇಳುತ್ತಾರೆ.
 
೯೬. ವಾಕ್ಕು ಮೊದಲಾದ ಐದು ಕರ್ಮೇಂದ್ರಿಯಗಳು, ಶ್ರವಣವೇ
ಮೊದಲಾದ ಐದು ಜ್ಞಾನೇಂದ್ರಿಯಗಳು, ಪ್ರಾಣವೇ ಮೊದಲಾದ ಪಂಚ
ಪ್ರಾಣಗಳು, ಆಕಾಶವೇ ಮೊದಲಾದ ಸೂಕ್ಷ್ಮಭೂತಗಳು, ಬುದ್ಧಿಯೇ
ಮೊದಲಾದ ನಾಲ್ಕು, ಅವಿದ್ಯೆ, ಕಾಮ, ಕರ್ಮ- ಈ ಎಂಟು 'ಪುರಗಳನ್ನು
ಸೂಕ್ಷ್ಮಶರೀರವೆಂದು ಹೇಳುತ್ತಾರೆ.
 
[ಭಾಷ್ಯಕಾರರು ತಮ್ಮ ಸೂತ್ರಭಾಷ್ಯದಲ್ಲಿ (೨. ೪. ೭) ಈ ಸ್ಮೃತಿವಾಕ್ಯವನ್ನು
ಉದ್ಧರಿಸಿರುತ್ತಾರೆ: 'ಪುರ್ಯಷ್ಟ ಕರೂಪವಾದ ಪ್ರಾಣಾದಿ ಸೂಕ್ಷ್ಮಶರೀರದಿಂದ ಅವನು
ಕೂಡಿರುತ್ತಾನೆ; ಅದರಿಂದ ಬದ್ಧನಾಗಿರುವುದರಿಂದ ಅವನಿಗೆ ಬಂಧನ, ಅದರಿಂದ