This page has not been fully proofread.

೮೪]
 
ವಿವೇಕಚೂಡಾಮಣಿ
 
ಅಯಂ
 
ಯತ್ - ಯಾವ ಅನುಕ್ಷಣಂ - ಪ್ರತಿಕ್ಷಣವೂ ಕೃತ್ಯಂ - ಮಾಡಬೇಕಾ
ಗಿರುವ ಅನಾದಿ. ಅವಿದ್ಯಾಕೃತ ಬಂಧಮೋಕ್ಷಣಂ - ಅನಾದಿಯಾದ ಅವಿದ್ಯೆಯಿಂದ
ಮಾಡಲ್ಪಟ್ಟ ಸಂಸಾರಬಂಧದ ಬಿಡುಗಡೆಯನ್ನು ಪರಿಹೃತ್ಯ = ಬಿಟ್ಟು,
ದೇಹಃ . - ಈ ದೇಹವು ಪರಾರ್ಥ - ಪರಪ್ರಯೋಜನವಾದ್ದು ; ಯಃ - ಯಾವನು
ಅಮುಷ್ಯ - ಇದರ ಪೋಷಣೇ = ಪೋಷಣದಲ್ಲಿ ಸಜ್ಜತೇ = ಆಸಕ್ತನಾಗುತ್ತಾನೆ
ಸಃ = ಅವನು ಅನೇನ - ಇದರಿಂದ ಸ್ವಂ = ತನ್ನನ್ನು ಹಂತಿ - ಕೊಂದುಕೊಳ್ಳು
ತಾನೆ.
 
==
 
೪೩.
 
೮೩, ಯಾವುದನ್ನು ಪ್ರತಿಕ್ಷಣವೂ ಮಾಡಬೇಕೊ ಅಂಥ, ಅನಾದಿ
ಯಾದ ಅವಿದ್ಯೆಯಿಂದ ಮಾಡಲ್ಪಟ್ಟ ಸಂಸಾರಬಂಧದ ಬಿಡುಗಡೆಯನ್ನು
ತ್ಯಜಿಸಿ, ಪರರಿಗೆ ಪ್ರಯೋಜನವಾಗಿರುವ ಈ ಶರೀರದ ಪೋಷಣದಲ್ಲಿಯೇ
ಯಾವನು ಆಸಕ್ತನಾಗಿರುವನೋ ಅವನು ಈ ಶರೀರಪೋಷಣದಿಂದಲೇ
ತನ್ನನ್ನು ಕೊಂದುಕೊಳ್ಳುತ್ತಾನೆ.
 
(೧ ಈ ಶರೀರವು ತಾಯಿತಂದೆಗಳ ಸ್ವತ್ತೋ? ಪತ್ನಿಯದೊ? ತನ್ನ ಒಡೆಯನದೊ?
ಅಥವಾ ಅಗ್ನಿಯದೊ? ನಾಯಿಹದ್ದುಗಳದೊ? ತನ್ನದೊ? ಅಥವಾ ಸ್ನೇಹಿತನದೊ?
ಎಂದು ನಿರ್ಧರಿಸಲ್ಪಟ್ಟಿಲ್ಲ' ಪಿತ್ರೋಃ ಕಿಂ ಸ್ವಂ ನು ಭಾರ್ಯಾಯಾಃ ಸ್ವಾಮಿ.
ನೋಃ ಶ್ವಗೃಧ್ರಯೋಃ । ಕಿಮಾತ್ಮನಃ ಕಿಂ ಸುಹೃದಾಮಿತಿ ಯೋ ನಾವ
ಸೀಯತೇ ॥ (ಶ್ರೀಮದ್ಭಾಗವತ ೧೧. ೨೬, ೧೯)
 
೨ ಆತ್ಮಘಾತಿಗಳಾದ ಜನರು ಮೃತರಾದಮೇಲೆ ಅಸುರಸಂಬಂಧವುಳ್ಳ ಲೋಕ
ಗಳನ್ನು ಪಡೆಯುತ್ತಾರೆ' ಅಸುರ್ಯಾ ನಾಮ ತೇ ಲೋಕಾಃ . . . ತಾಂ
ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ । (ಈಶಾವಾಸ್ಯ ಉ. ೩)
 
ಶರೀರಪೋಷಣಾರ್ಥಿ ಸನ್ ಯ ಆತ್ಮಾನಂ ದಿದ್ರಕೃತಿ ।
ಗ್ರಾಹಂ ದಾರು-ಧಿಯಾ ಧೃತ್ವಾ ನದೀಂ ತರ್ತು೦ ಸ ಗಚ್ಛತಿ ॥ ೮೪ ॥
 
ಬಯಸು
 
ಯಃ = ಯಾವನು ಶರೀರಪೋಷಣಾರ್ಥಿ ಸನ್ = ಶರೀರಪೋಷಣವನ್ನು
ಬಯಸುವವನಾಗಿ ಆತ್ಮಾನಂ = ಆತ್ಮನನ್ನೂ ದಿವೃಕೃತಿ - ನೋಡಲು
ತಾನೆಯೊ ಸಃ = ಅವನು ಗ್ರಾಹಂ = ಮೊಸಳೆಯನ್ನು ದಾರು- ಧಿಯಾ = ಮರವೆಂಬ
ಬುದ್ಧಿಯಿಂದ ಧೃತ್ವಾ – ಹಿಡಿದುಕೊಂಡು ನದೀಂ = ನದಿಯನ್ನು ತರ್ತು೦ ದಾಟಲು
ಗಚ್ಛತಿ - ಹೋಗುತ್ತಾನೆ.
 
೮೪. ಯಾವನು ಶರೀರಪೋಷಣವನ್ನೇ ಬಯಸುವವನಾಗಿ ಆತ್ಮನನ್ನೂ
ಸಾಕ್ಷಾತ್ಕರಿಸಲು ಬಯಸುತ್ತಾನೆಯೋ ಅವನು ಮೊಸಳೆಯನ್ನು ಮರವೆಂಬ
ಬುದ್ಧಿಯಿಂದ ಹಿಡಿದುಕೊಂಡು ನದಿಯನ್ನು ದಾಟುವುದಕ್ಕೆ ಹೋಗುತ್ತಾನೆ.