This page has not been fully proofread.

೪೨
 
ವಿವೇಕಚೂಡಾಮಣಿ
 
ಮೃತ್ಯುಃ ಅಪಿ- ಈ ಮೃತ್ಯುವೂ ಕೂಡ, ಪ್ರತಿಪದಂ= ಹೆಜ್ಜೆ ಹೆಜ್ಜೆಗೂ ಅಭಿಯಾತಃ-
ಹಿಂಬಾಲಿಸುತ್ತಿರುವುದು [ಎಂದು] ನಿದ್ದಿ = ತಿಳಿದುಕೊ; ಹಿತ- ಸುಜನ ಗುರು.
ಉಕ್ಯಾ-ಹಿತರು ಸಾಧುಗಳು ಗುರುಗಳು ಇವರ ಮಾತಿನಿಂದಲೂ ಸ್ವಸ್ಯ ಯುಕ್ತಾ
ತನ್ನ ಯುಕ್ತಿಯಿಂದಲೂ ಗಚ್ಛತಃ = ನಡೆಯುತ್ತಿರುವವನಿಗೆ ಫಲಸಿದ್ಧಿಃ = ಮೋಕ್ಷ
ಲಾಭವು ಪ್ರಭವತಿ - ಸಿದ್ಧಿಸುತ್ತದೆ; ಸತ್ಯಂ = ಸತ್ಯವು ಇತಿ ಏವ - ಹೀಗೆಂದೇ
ನಿದ್ದಿ = ತಿಳಿದುಕೊ.
 
[೮೨
 
೮೧. ಭಯಂಕರವಾದ ವಿಷಯಮಾರ್ಗದಲ್ಲಿ ಹೋಗುತ್ತಿರುವ ಮಲಿನ
ಬುದ್ಧಿಯುಳ್ಳವನನ್ನು ಮೃತ್ಯುವು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುತ್ತಿರುವುದೆಂದು
ತಿಳಿದುಕೊ. ಹಿತರು ಸಾಧುಗಳು ಗುರುಗಳು- ಇವರ ಮಾತಿಗೆ ಮತ್ತು
ತನ್ನ ಯುಕ್ತಿಗೆ ಅನುಸಾರವಾಗಿ ನಡೆಯುತ್ತಿರುವವನಿಗೆ ಮೋಕ್ಷಲಾಭವು
ಸಿದ್ಧಿಸುತ್ತದೆ; ಇದು ಸತ್ಯವೆಂದೇ ತಿಳಿದುಕೊ.
 
(ಕಠೋಪನಿಷತ್ ೧, ೩, ೭-೮ ನೋಡಿ.
 
ಮೋಕ್ಷಸ್ಯ ಕಾಂಕ್ಷಾ ಯದಿ ವೈ ತವಾಸ್ತಿ
ತ್ಯಜಾತಿದೂರಾದ್ವಿಷಯಾನ್ ವಿಷಂ ಯಥಾ ।
ಪೀಯೂಷವತೋಷ-ದಯಾ ಕ್ರಮಾರ್ಜವ
ಪ್ರಶಾಂತಿ-ದಾಂತೀರ್ಭಜ
 
ನಿತ್ಯ ಮಾದರಾತ್ ॥ ೮೨ ।
 
ತವ - ನಿನಗೆ ಮೋಕ್ಷಸ್ಯ - ಮೋಕ್ಷದ ಕಾಂಕ್ಷಾ - ಅಭಿಲಾಷೆಯು ಯದಿ
ಅಸ್ತಿ ವೈ - ಇದ್ದರೆ ವಿಷಯಾನ್ = ವಿಷಯಗಳನ್ನು ನಿಷಂ ಯಥಾ = ವಿಷದಂತೆ
ಅತಿದೂರಾತ್ = ಅತಿ ದೂರದಿಂದ ತ್ಯಜ=ಬಿಟ್ಟುಬಿಡು; ತೋಷ ದಯಾಕ್ಷಮಾ
ಆರ್ಜವ, ಪ್ರಶಾಂತಿ- ದಾಂತೀಃ = ಸಂತೋಷ ದಯೆ ಕ್ಷಮೆ ಸರಳತೆ ಶಮ ದಯೆ-
ಇವುಗಳನ್ನು ಪೀಯೂಷವತ್ - ಅಮೃತದಂತೆ ನಿತ್ಯಂ - ನಿತ್ಯವೂ ಆದರಾತ್ -
ಪ್ರೀತಿಯಿಂದ ಭಜ = ಸೇವಿಸು.
 
೮೨. ನಿನಗೆ ಮೋಕ್ಷದ ಅಭಿಲಾಷೆಯು ಇದ್ದದ್ದೇ ಆದರೆ ವಿಷಯ
ಗಳನ್ನು ವಿಷದಂತೆ ಅತಿದೂರದಲ್ಲಿಯೇ ತ್ಯಜಿಸು; ಸಂತೋಷ, ದಯೆ, ಕ್ಷಮೆ,
ಸರಳತೆ, ಶಮ, ದಮ-ಇವುಗಳನ್ನು ಅಮೃತದಂತೆ ನಿತ್ಯವೂ ಪ್ರೀತಿಯಿಂದ
ಸೇವಿಸು.
 
ಅನುಕ್ಷಣಂ ಯತ್ರಿಹತ್ಯ ಕೃತ್ಯಂ
 
ಅನಾದ್ಯವಿದ್ಯಾಕೃತ. ಬಂಧಮೋಕ್ಷಣಮ್ ।
ದೇಹಃ ಪರಾರ್ಥೋಽಯಮಮುಷ್ಯ ಪೋಷಣೇ
ಯಃ ಸಜ್ಜತೇ ಸ ಸ್ವಮನೇನ ಹಂತಿ
 
॥ ೮೩ 1