This page has been fully proofread once and needs a second look.

೬೫]
 
ವಿವೇಕಚೂಡಾಮಣಿ
 
೩೩
 
೬೪. ಶತ್ರುಗಳನ್ನು ಸಂಹರಿಸದೆ, ಸಮಸ್ತ ರಾಜ್ಯಲಕ್ಷ್ಮಿಯನ್ನು ಪಡೆ

ಯದೆ 'ನಾನು ರಾಜನು' ಎಂದು ಹೇಳಿಕೊಳ್ಳುವುದರಿಂದಲೇ ಅವನು ರಾಜ

ನಾಗಲು ಅರ್ಹನಾಗುವುದಿಲ್ಲ.
 

 
[ವಿಷಯಗಳೆಂಬ ಶತ್ರುಗಳನ್ನು ಗೆಲ್ಲದೆ ಬ್ರಹ್ಮಸಾಕ್ಷಾತ್ಕಾರವನ್ನು ಪಡೆಯದೆ

ಅಹಂ ಬ್ರಹ್ಮಾಸ್ಮಿ
ಎಂದು ಹೇಳಿ ಕೊಂಡಮಾತ್ರದಿಂದಲೇ ಬ್ರಹ್ಮಜ್ಞಾನಿಯಾಗ
-
ಲಾರನು.]
 

 
ಆಪೋಕ್ತಿಂ ಖನನಂ ತಥೋಪರಿಶಿಲಾದ್ಯುತ್ಕರ್ಷಣಂ ಸ್ವೀಕೃತಿಮ್ ।

ನಿಕ್ಷೇಪಃ ಸಮಪೇಕ್ಷತೇ ನ ಹಿ ಬಹಿಃ ಶಬ್ದೈಸ್ತು ನಿರ್ಗಚ್ಛತಿ ॥

ತದ್ವದ್ಬ್ರಹ್ಮವಿದೋಪದೇಶ-ಮನನ-ಧ್ಯಾನಾದಿಭಿರ್ಲಭ್ಯತೇ !

ಮಾಯಾಕಾರ್ಯ-ತಿರೋಹಿತಂ ಸ್ವಮಮಲಂ ತಂ ನ
 
ತತ್ತ್ವಂ ನ
ದುರ್ಯುಕ್ತಿಭಿಃ ॥ ೬೫ ॥
 

 
ನಿಕ್ಷೇಪಃ = ಭೂಮಿಯಲ್ಲಿ ಹೂತಿಟ್ಟಿರುವ ಧನವು, ಆಪೋಕ್ತಿಂ = ಆಪ್ತರ

ವಾಕ್ಯವನ್ನೂ, ಖನನಂ - =ಅಗೆಯುವುದನ್ನೂ, ತಥಾ -= ಹಾಗೆಯೇ, ಉಪರಿ-ಶಿಲಾದಿ.
-
ಉತ್ಕರ್ಷಣಂ -= ಮೇಲಿರುವ ಕಲ್ಲು ಮೊದಲಾದುವುಗಳ ತೆಗೆಯುವಿಕೆಯನ್ನೂ
,
ಸ್ವೀಕೃತಿ೦ -= ಕೈಯಲ್ಲಿ ತೆಗೆದುಕೊಳ್ಳುವುದನ್ನೂ, ಸಮಪೇಕ್ಷತೇ -= ಅಪೇಕ್ಷಿಸುತ್ತದೆ;

ತು.= ಆದರೆ ಶಬೈಃ - ,ಶಬ್ದೈಃ = ಶಬ್ದಗಳಿಂದಲೇ, ಬಹಿಃ ನ ಹಿ ನಿರ್ಗಚ್ಛತಿ = ಹೊರಗೆ

ಬರುವುದೇ ಇಲ್ಲ; ತದ್ವತ್ -= ಹಾಗೆಯೇ ಬ್ರಹ್ಮವಿದೋಪದೇಶ, ಮನನ -ಮನನ-ಧ್ಯಾನಾ
-
ದಿಭಿಃ = ಬ್ರಹ್ಮಜ್ಞಾನಿಯ ಉಪದೇಶ, ಮನನ ಧ್ಯಾನ ಮೊದಲಾದುವುಗಳಿಂದ
,
ಮಾಯಾ ಕಾರ್ಯ- ತಿ ರೋಹಿತಂ = ಮಾಯೆಯ ಕಾರ್ಯದಿಂದ
ಸ್ವಂ . ತನ್ನದಾದ ಅಮಲಂ ಈ ವಿಮಲವಾದ ತತ್ತ್ವ – ತತ್ತ್ವವು
ಹೊಂದಲ್ಪಡುತ್ತದೆ, ದುರ್ಯುಕ್ತಿಭಿಃ - ಕುತರ್ಕಗಳಿಂದ ನ ಅಲ್ಲ.
 
ಮುಚ್ಚಲ್ಪಟ್ಟ

ಸ್ವಂ = ತನ್ನದಾದ, ಅಮಲಂ = ವಿಮಲವಾದ, ತತ್ತ್ವ – ತತ್ತ್ವವು
ಲಭ್ಯತೇ -
 
=
ಹೊಂದಲ್ಪಡುತ್ತದೆ, ದುರ್ಯುಕ್ತಿಭಿಃ = ಕುತರ್ಕಗಳಿಂದ, ನ=ಅಲ್ಲ.
 
೬೫. ಆಪ್ತವಾಕ್ಯ, ಅಗೆಯುವುದು, ಮೇಲಿರುವ ಕಲ್ಲು ಮಣ್ಣು

ಮೊದಲಾದುವನ್ನು ತೆಗೆಯುವುದು, ಕೈಯಲ್ಲಿ ತೆಗೆದುಕೊಳ್ಳುವುದು-ಇವು

ಗಳಿಂದ ನಿಧಿಯನ್ನು ಹೊರಕ್ಕೆ ತರಬಹುದು, ಬರಿಯ ಮಾತುಗಳಿಂದ

ಹೊರಕ್ಕೆ ಬರುವುದಿಲ್ಲ[^೧]. ಹೀಗೆಯೇ ಬ್ರಹ್ಮಜ್ಞಾನಿಯು ಮಾಡಿದ ಉಪದೇಶ,

ಅದರ (ಶ್ರವಣ) ಮನನ- ಮನನ- ಧ್ಯಾನ ಮೊದಲಾದುವುಗಳಿಂದಲೇ[^೨] ಮಾಯೆಯ

ಕಾರ್ಯದಿಂದ ಮುಚ್ಚಲ್ಪಟ್ಟ ತನ್ನದೇ ಆಗಿರುವ ವಿಮಲವಾದ ತತ್ತ್ವವು

ಪ್ರಾಪ್ತವಾಗುವುದಲ್ಲದೆ ಕುತರ್ಕಗಳಿಂದ ಪ್ರಾಪ್ತವಾಗಲಾರದು.
 

 
[^] ಮನುಷ್ಯನು ನಿಧಿಯಮೇಲೆ ನಡೆಯುತ್ತಿದ್ದರೂ ಅದು ಒಳಗಿರುವುದನ್ನು ಅರಿಯ
-
ದಿರುವುದರಿಂದ ಅದನ್ನು ಅಗೆದು ತೆಗೆದುಕೊಳ್ಳಲು ಪ್ರವೃತ್ತಿಯಿರುವುದಿಲ್ಲ. 'ನಿಧಿಕ್ಷೇತ್ರ
 
2