This page has not been fully proofread.

೬೫]
 
ವಿವೇಕಚೂಡಾಮಣಿ
 
೩೩
 
೬೪. ಶತ್ರುಗಳನ್ನು ಸಂಹರಿಸದೆ, ಸಮಸ್ತ ರಾಜ್ಯಲಕ್ಷ್ಮಿಯನ್ನು ಪಡೆ
ಯದೆ 'ನಾನು ರಾಜನು' ಎಂದು ಹೇಳಿಕೊಳ್ಳುವುದರಿಂದಲೇ ಅವನು ರಾಜ
ನಾಗಲು ಅರ್ಹನಾಗುವುದಿಲ್ಲ.
 
[ವಿಷಯಗಳೆಂಬ ಶತ್ರುಗಳನ್ನು ಗೆಲ್ಲದೆ ಬ್ರಹ್ಮಸಾಕ್ಷಾತ್ಕಾರವನ್ನು ಪಡೆಯದೆ
ಅಹಂ ಬ್ರಹ್ಮಾಸ್ಮಿ
ಎಂದು ಹೇಳಿ ಕೊಂಡಮಾತ್ರದಿಂದಲೇ ಬ್ರಹ್ಮಜ್ಞಾನಿಯಾಗ
ಲಾರನು.]
 
ಆಪೋಕ್ತಿಂ ಖನನಂ ತಥೋಪರಿಶಿಲಾದ್ಯುತ್ಕರ್ಷಣಂ ಸ್ವೀಕೃತಿಮ್ ।
ನಿಕ್ಷೇಪಃ ಸಮಪೇಕ್ಷತೇ ನ ಹಿ ಬಹಿಃ ಶಬ್ದಸ್ತು ನಿರ್ಗಚ್ಛತಿ ॥
ತದ್ವಹ್ಮವಿದೋಪದೇಶ-ಮನನ-ಧ್ಯಾನಾದಿಭಿರ್ಲಭ್ಯತೇ !
ಮಾಯಾಕಾರ್ಯ-ತಿರೋಹಿತಂ ಸ್ವಮಮಲಂ ತಂ ನ
 
ದುರ್ಯುಕ್ತಿಭಿಃ ॥ ೬೫ ॥
 
ನಿಕ್ಷೇಪಃ = ಭೂಮಿಯಲ್ಲಿ ಹೂತಿಟ್ಟಿರುವ ಧನವು ಆಪೋಕ್ತಿಂ – ಆಪ್ತರ
ವಾಕ್ಯವನ್ನೂ ಖನನಂ - ಅಗೆಯುವುದನ್ನೂ ತಥಾ - ಹಾಗೆಯೇ ಉಪರಿ-ಶಿಲಾದಿ.
ಉತ್ಕರ್ಷಣಂ - ಮೇಲಿರುವ ಕಲ್ಲು ಮೊದಲಾದುವುಗಳ ತೆಗೆಯುವಿಕೆಯನ್ನೂ
ಸ್ವೀಕೃತಿ೦ - ಕೈಯಲ್ಲಿ ತೆಗೆದುಕೊಳ್ಳುವುದನ್ನೂ ಸಮಪೇಕ್ಷತೇ - ಅಪೇಕ್ಷಿಸುತ್ತದೆ;
ತು. ಆದರೆ ಶಬೈಃ - ಶಬ್ದಗಳಿಂದಲೇ ಬಹಿಃ ನ ಹಿ ನಿರ್ಗಚ್ಛತಿ = ಹೊರಗೆ
ಬರುವುದೇ ಇಲ್ಲ; ತದ್ವತ್ - ಹಾಗೆಯೇ ಬ್ರಹ್ಮವಿದೋಪದೇಶ, ಮನನ ಧ್ಯಾನಾ
ದಿಭಿಃ = ಬ್ರಹ್ಮಜ್ಞಾನಿಯ ಉಪದೇಶ, ಮನನ ಧ್ಯಾನ ಮೊದಲಾದುವುಗಳಿಂದ
ಮಾಯಾ ಕಾರ್ಯ- ತಿ ರೋಹಿತಂ = ಮಾಯೆಯ ಕಾರ್ಯದಿಂದ
ಸ್ವಂ . ತನ್ನದಾದ ಅಮಲಂ ಈ ವಿಮಲವಾದ ತತ್ತ್ವ – ತತ್ತ್ವವು
ಹೊಂದಲ್ಪಡುತ್ತದೆ, ದುರ್ಯುಕ್ತಿಭಿಃ - ಕುತರ್ಕಗಳಿಂದ ನ ಅಲ್ಲ.
 
ಮುಚ್ಚಲ್ಪಟ್ಟ
ಲಭ್ಯತೇ -
 
೬೫. ಆಪ್ತವಾಕ್ಯ, ಅಗೆಯುವುದು, ಮೇಲಿರುವ ಕಲ್ಲು ಮಣ್ಣು
ಮೊದಲಾದುವನ್ನು ತೆಗೆಯುವುದು, ಕೈಯಲ್ಲಿ ತೆಗೆದುಕೊಳ್ಳುವುದು-ಇವು
ಗಳಿಂದ ನಿಧಿಯನ್ನು ಹೊರಕ್ಕೆ ತರಬಹುದು, ಬರಿಯ ಮಾತುಗಳಿಂದ
ಹೊರಕ್ಕೆ ಬರುವುದಿಲ್ಲ. ಹೀಗೆಯೇ ಬ್ರಹ್ಮಜ್ಞಾನಿಯು ಮಾಡಿದ ಉಪದೇಶ,
ಅದರ (ಶ್ರವಣ) ಮನನ ಧ್ಯಾನ ಮೊದಲಾದುವುಗಳಿಂದಲೇ ಮಾಯೆಯ
ಕಾರ್ಯದಿಂದ ಮುಚ್ಚಲ್ಪಟ್ಟ ತನ್ನದೇ ಆಗಿರುವ ವಿಮಲವಾದ ತತ್ತ್ವವು
ಪ್ರಾಪ್ತವಾಗುವುದಲ್ಲದೆ ಕುತರ್ಕಗಳಿಂದ ಪ್ರಾಪ್ತವಾಗಲಾರದು.
 
[೧ ಮನುಷ್ಯನು ನಿಧಿಯಮೇಲೆ ನಡೆಯುತ್ತಿದ್ದರೂ ಅದು ಒಳಗಿರುವುದನ್ನು ಅರಿಯ
ದಿರುವುದರಿಂದ ಅದನ್ನು ಅಗೆದು ತೆಗೆದುಕೊಳ್ಳಲು ಪ್ರವೃತ್ತಿಯಿರುವುದಿಲ್ಲ. 'ನಿಧಿಕ್ಷೇತ್ರ
 
2