This page has been fully proofread once and needs a second look.

೬೨]
 
ವಿವೇಕಚೂಡಾಮಣಿ
 
೩೧
 
೫೯. ಪರತತ್ತ್ವವನ್ನು ತಿಳಿದುಕೊಳ್ಳದಿದ್ದರೆ ಶಾಸ್ತ್ರಾಧ್ಯಯನವು ನಿಮ್ಮ
ಷ್ಫ-
ಲವು, ಪರತತ್ತ್ವವನ್ನು ತಿಳಿದುಕೊಂಡರೂ ಶಾಸ್ತ್ರಾಧ್ಯಯನವು ನಿಷ್ಲವು.

 
[ಅವಿದ್ಯೆಯಲ್ಲಿರುವಾಗ ಲೌಕಿಕ -ಪಂಡಿತನ ಶಾಸ್ತ್ರಾಧ್ಯಯನವು ನಿಷ್ಲವಾಗಿರುವಂತೆ

ಜ್ಞಾನವನ್ನು ಪಡೆದ ಪಂಡಿತನ ಶಾಸ್ತ್ರಾಧ್ಯಯನವೂ ನಿಷ್ಲವೇ.]
 

 
ಶಬ್ದ ಜಾಲಂ ಮಹಾರಣ್ಯಂ ಚಿತ್ತಭ್ರಮಣಕಾರಣಮ್ ।

ಅತಃ ಪ್ರಯತ್ನಾಜ್ಞಾತವ್ಯಂ ತತ್ತ್ವಜ್ಞಾತ್ತತ್ತ್ವ ತಮಾತ್ಮನಃ ॥ ೬೦ ॥
 

 
ಶಬ್ದ ಜಾಲಂ -= ಶಬ್ದಗಳ ಗುಂಪು, ಮಹಾರಣ್ಯಂ -= ಮಹಾರಣ್ಯದಂತಿರುವುದು,

[ಆದುದರಿಂದಲೇ] ಚಿತ್ತಭ್ರಮಣ ಕಾರಣಂ= ಮನಸ್ಸಿನ ಭ್ರಾಂತಿಗೆ ಕಾರಣವು; ಅತಃ -
=
ಆದುದರಿಂದ, ಪ್ರಯತ್ನಾತ್ -= ಪ್ರಯತ್ನಪೂರ್ವಕವಾಗಿ ತತ್ತ್ವಜ್ಞಾತ್ = ತತ್ತ್ವಜ್ಞಾನಿ- ತತ್ತ್ವಜ್ಞಾನಿ

ಯಿಂದ, ಆತ್ಮನಃ ತತ್ತ್ವಂ = ಆತ್ಮತತ್ತ್ವವನ್ನು, ಜ್ಞಾತವ್ಯಂ= ಅರಿತುಕೊಳ್ಳಬೇಕು.
 

 
೬೦. ಶಾಸ್ತ್ರಗಳ ಶಬ್ದ ಸಮೂಹವು ಒಂದು ದೊಡ್ಡ ಅರಣ್ಯದಂತಿರುವು
-
ದರಿಂದ ಮನಸ್ಸಿನ ಭ್ರಾಂತಿಗೆ ಕಾರಣವಾಗಿದೆ; ಆದುದರಿಂದ ಆತ್ಮಜ್ಞಾನಿ
-
ಯಿಂದ ಆತ್ಮತತ್ತ್ವವನ್ನು ಪ್ರಯತ್ನಪೂರ್ವಕವಾಗಿ ಅರಿತುಕೊಳ್ಳಬೇಕು.
 
(

 
[
ವಿಚಾರಮಾಡದೆ ಶಾಸ್ತ್ರಗಳ ಪದಗಳನ್ನೂ ವದಾರ್ಥಗಳನ್ನೂ ಗ್ರಹಿಸಿದರೆ ಅದು

ಒಂದು ಮಹಾರಣ್ಯದಂತಾಗಿ ಪುರುಷಾರ್ಥದಿಂದ ಭ್ರಷ್ಟನಾಗಲು ಕಾರಣವಾಗುತ್ತದೆ.
]
 
ಅಜ್ಞಾನಸರ್ಪ-ದಷ್ಟಸ್ಯ ಬ್ರಹ್ಮಜ್ಞಾನೌಷಧಂ ವಿನಾ
|
ಕಿಮು ವೇದೈಶ್ಚ ಶಾಸ್ತ್ರೈಶ್ಚ ಕಿಮು ಮಂತ್ರಃರೈಃ ಕಿಮೌಷಃಷಧೈಃ ॥ ೬೧ ॥

 
ಅಜ್ಞಾನ ಸರ್ಪ.-ದಷ್ಟ ಸ್ಯ -= ಅವಿದ್ಯೆಯೆಂಬ ಹಾವಿನಿಂದ ಕಚ್ಚಲ್ಪಟ್ಟವನಿಗೆ
,
ಬ್ರಹ್ಮಜ್ಞಾನ.- ಔಷಧಂ ವಿನಾ-= ಬ್ರಹ್ಮಜ್ಞಾನವೆಂಬ ಔಷಧವಲ್ಲದೆ ,ವೇದ್ಯೆ :ಯೆಃ ಚ ಕಿಮು
=
ವೇದಗಳಿಂದೇನಾದೀತು?, ಶಾಸ್ತ್ರಃರೈಃ ಚ ಕಿಮು-= ಶಾಸ್ತ್ರಗಳಿಂದೇನಾದೀತು?, ಮಂತ್
ರೈಃ
[ಕಿ ಮು] = ಮಂತ್ರಗಳಿಂದೇನಾದೀತು?, ಔಷಧೈಃ ಕಿಂ = ಔಷಧಗಳಿ೦ದೇನಾದೀತು?

 
೬೧. ಅವಿದ್ಯೆಯೆಂಬ ಹಾವಿನಿಂದ ಕಚ್ಚಲ್ಪಟ್ಟವನಿಗೆ ಬ್ರಹ್ಮಜ್ಞಾನವೆಂಬ

ಔಷಧವನ್ನು ಬಿಟ್ಟರೆ ವೇದಗಳಿಂದಲೂ ಶಾಸ್ತ್ರಗಳಿಂದಲೂ ಏನು ಪ್ರಯೋಜನ?

ಮಂತ್ರಗಳಿಂದಲೂ ಔಷಧಗಳಿಂದಲೂ ಏನು ಪ್ರಯೋಜನ?
 

 
[ಅವಿದ್ಯೆಯನ್ನು ತೊಲಗಿಸಲು ಜ್ಞಾನವೇ ಶಕ್ತವಾಗಿರುವುದಲ್ಲದೆ ಮತ್ತೆ ಯಾವುದೂ

ಅಲ್ಲ ಎಂದರ್ಥ.
 
]
 
ನ ಗಚ್ಛತಿ ವಿನಾ ಪಾನಂ ವ್ಯಾಧಿರೌಷಧ-ಶಬ್ದತಃ ।
 

ವಿನಾಪರೋಕ್ಷಾನುಭವಂ ಬ್ರಹ್ಮಶಬ್ದೈರ್ ಮುಚ್ಯತೇ ॥ ೬೨ ॥