This page has not been fully proofread.

೬೨]
 
ವಿವೇಕಚೂಡಾಮಣಿ
 
೩೧
 
೫೯. ಪರತತ್ತ್ವವನ್ನು ತಿಳಿದುಕೊಳ್ಳದಿದ್ದರೆ ಶಾಸ್ತ್ರಾಧ್ಯಯನವು ನಿಮ್ಮ
ಲವು, ಪರತತ್ತ್ವವನ್ನು ತಿಳಿದುಕೊಂಡರೂ ಶಾಸ್ತ್ರಾಧ್ಯಯನವು ನಿಷ್ಪಲವು.
[ಅವಿದ್ಯೆಯಲ್ಲಿರುವಾಗ ಲೌಕಿಕ ಪಂಡಿತನ ಶಾಸ್ತ್ರಾಧ್ಯಯನವು ನಿಷ್ಪಲವಾಗಿರುವಂತೆ
ಜ್ಞಾನವನ್ನು ಪಡೆದ ಪಂಡಿತನ ಶಾಸ್ತ್ರಾಧ್ಯಯನವೂ ನಿಷ್ಪಲವೇ.]
 
ಶಬ್ದ ಜಾಲಂ ಮಹಾರಣ್ಯಂ ಚಿತ್ತಭ್ರಮಣಕಾರಣಮ್ ।
ಅತಃ ಪ್ರಯತ್ನಾಜ್ಞಾತವ್ಯಂ ತತ್ತ್ವಜ್ಞಾತಮಾತ್ಮನಃ ॥ ೬೦ ॥
 
ಶಬ್ದ ಜಾಲಂ - ಶಬ್ದಗಳ ಗುಂಪು ಮಹಾರಣ್ಯಂ - ಮಹಾರಣ್ಯದಂತಿರುವುದು,
[ಆದುದರಿಂದಲೇ] ಚಿತ್ತಭ್ರಮಣ ಕಾರಣಂ= ಮನಸ್ಸಿನ ಭ್ರಾಂತಿಗೆ ಕಾರಣವು; ಅತಃ -
ಆದುದರಿಂದ ಪ್ರಯತ್ನಾತ್ - ಪ್ರಯತ್ನಪೂರ್ವಕವಾಗಿ ತತ್ತ್ವಜ್ಞಾತ್ - ತತ್ತ್ವಜ್ಞಾನಿ
ಯಿಂದ ಆತ್ಮನಃ ತತ್ತ್ವಂ = ಆತ್ಮತತ್ತ್ವವನ್ನು ಜ್ಞಾತವ್ಯಂ ಅರಿತುಕೊಳ್ಳಬೇಕು.
 
೬೦. ಶಾಸ್ತ್ರಗಳ ಶಬ್ದ ಸಮೂಹವು ಒಂದು ದೊಡ್ಡ ಅರಣ್ಯದಂತಿರುವು
ದರಿಂದ ಮನಸ್ಸಿನ ಭ್ರಾಂತಿಗೆ ಕಾರಣವಾಗಿದೆ; ಆದುದರಿಂದ ಆತ್ಮಜ್ಞಾನಿ
ಯಿಂದ ಆತ್ಮತತ್ತ್ವವನ್ನು ಪ್ರಯತ್ನಪೂರ್ವಕವಾಗಿ ಅರಿತುಕೊಳ್ಳಬೇಕು.
 
(ವಿಚಾರಮಾಡದೆ ಶಾಸ್ತ್ರಗಳ ಪದಗಳನ್ನೂ ವದಾರ್ಥಗಳನ್ನೂ ಗ್ರಹಿಸಿದರೆ ಅದು
ಒಂದು ಮಹಾರಣ್ಯದಂತಾಗಿ ಪುರುಷಾರ್ಥದಿಂದ ಭ್ರಷ್ಟನಾಗಲು ಕಾರಣವಾಗುತ್ತದೆ.
ಅಜ್ಞಾನಸರ್ಪ-ದಷ್ಟಸ್ಯ ಬ್ರಹ್ಮಜ್ಞಾನೌಷಧಂ ವಿನಾ
ಕಿಮು ವೇಶ್ಚ ಶಾಸ್ತ್ರ ಕಿಮು ಮಂತ್ರಃ ಕಿಮೌಷಃ ॥ ೬೧ ॥
ಅಜ್ಞಾನ ಸರ್ಪ.ದಷ್ಟ ಸ್ಯ - ಅವಿದ್ಯೆಯೆಂಬ ಹಾವಿನಿಂದ ಕಚ್ಚಲ್ಪಟ್ಟವನಿಗೆ
ಬ್ರಹ್ಮಜ್ಞಾನ. ಔಷಧಂ ವಿನಾ- ಬ್ರಹ್ಮಜ್ಞಾನವೆಂಬ ಔಷಧವಲ್ಲದೆ ವೇದ್ಯೆ : ಚ ಕಿಮು
ವೇದಗಳಿಂದೇನಾದೀತು? ಶಾಸ್ತ್ರಃ ಚ ಕಿಮು- ಶಾಸ್ತ್ರಗಳಿಂದೇನಾದೀತು? ಮಂತ್ರ
[ಕಿ ಮು] = ಮಂತ್ರಗಳಿಂದೇನಾದೀತು? ಔಷಧೈಃ ಕಿಂ = ಔಷಧಗಳಿ೦ದೇನಾದೀತು?
೬೧. ಅವಿದ್ಯೆಯೆಂಬ ಹಾವಿನಿಂದ ಕಚ್ಚಲ್ಪಟ್ಟವನಿಗೆ ಬ್ರಹ್ಮಜ್ಞಾನವೆಂಬ
ಔಷಧವನ್ನು ಬಿಟ್ಟರೆ ವೇದಗಳಿಂದಲೂ ಶಾಸ್ತ್ರಗಳಿಂದಲೂ ಏನು ಪ್ರಯೋಜನ?
ಮಂತ್ರಗಳಿಂದಲೂ ಔಷಧಗಳಿಂದಲೂ ಏನು ಪ್ರಯೋಜನ?
 
[ಅವಿದ್ಯೆಯನ್ನು ತೊಲಗಿಸಲು ಜ್ಞಾನವೇ ಶಕ್ತವಾಗಿರುವುದಲ್ಲದೆ ಮತ್ತೆ ಯಾವುದೂ
ಅಲ್ಲ ಎಂದರ್ಥ.
 
ನ ಗಚ್ಛತಿ ವಿನಾ ಪಾನಂ ವ್ಯಾಧಿರೌಷಧ-ಶಬ್ದತಃ ।
 
ವಿನಾಪರೋಕ್ಷಾನುಭವಂ ಬ್ರಹ್ಮರ್ಶ ಮುಚ್ಯತೇ ॥ ೬೨ ॥