This page has not been fully proofread.

೫೩]
 
ವಿವೇಕಚೂಡಾಮಣಿ
 
ಪಿತುಃ ಸಂತಿ ಸುತಾದಯಃ ।
 
ಋಣಮೋಚನ-ಕರ್ತಾರಃ
ಬಂಧಮೋಚನಕರ್ತಾ ತು ಸ್ವಸಾದ
 
೨೭
 
ನ ಕಶ್ಚನ ॥ ೫೧ ೧
 
ಸುತಾದಯಃಮಗನೇ
 
ಮೊದಲಾದವರು ಪಿತುಃ ತಂದೆಗೆ ಋಣಮೋಚನ-
ಕರ್ತಾರಃ - ಋಣದಿಂದ ಬಿಡುಗಡೆಮಾಡಲು ಕರ್ತಗಳಾಗಿದ್ದಾರೆ; ತು - ಆದರೆ
ಬಂಧ ಮೋಚನ ಕರ್ತಾ ಅವಿದ್ಯಾಬಂಧದಿಂದ ಬಿಡುಗಡೆ ಮಾಡುವವನು ಸ್ವ ಸ್ಮಾತ್
ತನಗಿಂತಲೂ ಅನ್ಯಃ ಬೇರೆಯಾದವನು ಕಶ್ಚನ ನ=ಯಾವನೊಬ್ಬನೂ ಇಲ್ಲ.
 
೫೧. ತಂದೆಯನ್ನು ಸಾಲದಿಂದ ಬಿಡಿಸಲು ಮಗನೇ ಮೊದಲಾದವರು
ಇದ್ದಾರೆ, ಆದರೆ ಅವಿದ್ಯಾಬಂಧದಿಂದ ಬಿಡುಗಡೆಮಾಡಲು ತನ್ನನ್ನು ಬಿಟ್ಟರೆ
ಬೇರೆ ಯಾವನೂ ಇಲ್ಲ.
 
[೧ ಶಾಸ್ತ್ರೀಯ ಋಣವಾದರೂ ಆಗಬಹುದು.
 
ಮಸ್ತಕನ್ಯಸ್ತ-ಭಾರಾದೇರ್ದುಃಖಮರ್ನಿವಾರ್ಯತೇ ।
ಕ್ಷುಧಾದಿಕೃತ-ದುಃಖಂ ತು ವಿನಾ ಸ್ಪೇನ ನ ಕೇನಚಿತ್ ॥ ೫೨ ॥
 
ಮಸ್ತಕನ್ಯಸ್ತ ಭಾರಾದೇಃ - ತಲೆಯ ಮೇಲಿರುವ ಹೊರೆ ಮೊದಲಾದುವುಗಳ
ದುಃಖಂ = ಕಷ್ಟವು ಅನೈ - ಇತರರಿಂದ ನಿವಾರ್ಯತೇ - ಹೋಗಲಾಡಿಸಲ್ಪಡು
ಇದೆ; ತು . ಆದರೆ ಕ್ಷುಧಾದಿಕೃತ ದುಃಖಂ = ಹಸಿವು ಮೊದಲಾದವುಗಳಿಂದ
ಉಂಟಾದ ಕಷ್ಟವು ಸ್ಪೇನ ವಿನಾ ತನ್ನಿಂದಲ್ಲದೆ ಕೇನಚಿತ್ ನಮತ್ತೆ ಯಾರಿಂದಲೂ
[ಹೋಗಲಾಡಿಸಲ್ಪಡುವುದಿಲ್ಲ].
 
೫೨. ತನ್ನ ತಲೆಯ ಮೇಲಿರುವ ಹೇರಿನಿಂದ ಉಂಟಾದ ಕಷ್ಟವನ್ನು
ಇತರರಿಂದ ಹೋಗಲಾಡಿಸಿಕೊಳ್ಳಬಹುದು. ಆದರೆ ಹಸಿವು ಮೊದಲಾದುವು
ಗಳಿಂದ ಉಂಟಾದ ಕಷ್ಟವನ್ನು ತನ್ನಿಂದಲ್ಲದೆ ಬೇರೆ ಯಾರಿಂದಲೂ ಪರಿಹರಿಸಿ
ಕೊಳ್ಳಲು ಸಾಧ್ಯವಿಲ್ಲ.
 
ಪಥ್ಯಮೌಷಧಸೇವಾ ಚ ಕ್ರಿಯತೇ ಯೇನ ರೋಗಿಣಾ ।
ಆರೋಗ್ಯಸಿದ್ಧಿ ರ್ದಷ್ಟಾ: ನಾನ್ಯಾನುಷ್ಠಿತ-ಕರ್ಮಣಾ ॥ ೫೩
 
ಯೇನ ರೋಗಿಣಾ = ಯಾವ ರೋಗಿಯಿಂದ ಪಥ್ಯಂ ಪಠ್ಯವು ಔಷಧಸೇವಾ
ಚ - ಮತ್ತು ಔಷಧ ಸೇವನೆ ಕ್ರಿಯತೇ = ಮಾಡಲ್ಪಡುತ್ತದೆಯೊ ಅಸ್ಯ - ಇವನಿಗೇ
ಆರೋಗ್ಯಸಿದ್ಧಿಃ ದೃಷ್ಟಾ - ಆರೋಗ್ಯಲಾಭವು ಕಂಡುಬರುತ್ತದೆ, ಅನ್ಯ ಅನುಷ್ಠಿತ.
ಕರ್ಮಣಾ ನ- ಇತರರಿಂದ ಆಚರಿಸಲ್ಪಟ್ಟ ಕರ್ಮದಿಂದಲ್ಲ.