This page has not been fully proofread.

೪೮]
 
ವಿವೇಕಚೂಡಾಮಣಿ
 
ಅಜ್ಞಾನಯೋಗಾತ್ ಪರಮಾತ್ಮನಸ್ತವ
ಹೈನಾತ್ಮಬಂಧಸ್ತತ ಏವ ಸಂಸ್ಕೃತಿಃ ।
ತಯೋರ್ವಿವೇಕೋದಿತ-ಬೋಧವ-
ರಜ್ಞಾನಕಾರ್ಯಂ ಪ್ರದಹೇತ್ ಸಮೂಲಮ್ ॥ ೪೭ ॥
 
ಪರಮಾತ್ಮನಃ ಪರಮಾತ್ಮನಾದ ತವ ಹಿನಿನಗೂ ಅಜ್ಞಾನಯೋಗಾತ್
ಅಜ್ಞಾನ ಸಂಬಂಧದಿಂದ ಅನಾತ್ಮಬಂಧಃ - ದೇಹಾಭಿಮಾನವು [ಉಂಟಾಗಿದೆ]; ತತಃ
ಏವ = ಅದರಿಂದಲೇ ಸಂಸ್ಕೃತಿಃ - ಸಂಸಾರವು; ತಯೋಃ = ಅವೆರಡರ ವಿವೇಕೋ.
ದಿತ. ಬೋಧವ - ವಿಚಾರದಿಂದ ಉತ್ಪನ್ನವಾದ ಜ್ಞಾನಾಗ್ನಿಯು ಅಜ್ಞಾನ-
ಕಾರ್ಯ೦ - ಅವಿದ್ಯೆಯ ಕಾರ್ಯವಾದ [ಬಂಧವೆಂಬ ಮರವನ್ನು) ಸಮೂಲಂ
ಪ್ರದಹೇತ್ - ಬೇರಿನೊಡನೆ ದಹಿಸುವುದು.
 
೨೫.
 
೪೭, ಪರಮಾತ್ಮನಾದ ನಿನಗೂ ಅವಿದ್ಯಾಸಂಬಂಧದಿಂದಲೇ ದೇಹಾಭಿ
ಮಾನವು ಉಂಟಾಗಿದೆ; ಅದರಿಂದಲೇ ಜನನಮರಣರೂಪವಾದ ಸಂಸಾರ;
ಆತ್ಮ ಅನಾತ್ಮ-ಈ ಎರಡರ ವಿಚಾರದಿಂದ ಉತ್ಪನ್ನವಾದ ಜ್ಞಾನಾಗ್ನಿಯು
ಅವಿದ್ಯೆಯ ಕಾರ್ಯವಾದ (ಬಂಧವೆಂಬ ಮರವನ್ನು) ಬೇರಿನೊಡನೆ ದಹಿಸು
ವುದು.
 
ಶಿಷ್ಯ ಉವಾಚ
 
ಕೃಪಯಾ ಶೂಯತಾಂ ಸ್ವಾಮಿನ್
 
ಯದುತ್ತರಮಹಂ ಶ್ರುತ್ವಾ
 
ಪ್ರಶೋsಯಂ ಕ್ರಿಯತೇ ಮಯಾ ।
 
ಕೃತಾರ್ಥಃ ಸ್ಕಾಂ ಭವನ್ಮುಖಾತ್ ॥ ೪೮ ॥
 
ಶಿಷ್ಯಃ ಉವಾಚ - ಶಿಷ್ಯನು ಹೇಳಿದನು-ಸ್ವಾಮಿನ್, ಮಯಾ- ನನ್ನಿಂದ
ಆಯಂ ಪ್ರಶಃ - ಈ ಪ್ರಶ್ನೆಯು ಕ್ರಿಯತೇ ಮಾಡಲ್ಪಡುತ್ತದೆ; ಕೃಪಯಾ
ಕೃಪೆಯಿಂದ ಶೂಯತಾಂ = ಕೇಳೋಣವಾಗಲಿ; ಅಹಂ – ನಾನು ಭವನ್ಮುಖಾತ್
ನಿಮ್ಮ ಬಾಯಿಂದ ಯದುತ್ತರಂ= ಯಾವ ಉತ್ತರವನ್ನು ಶ್ರುತ್ವಾ = ಕೇಳಿ ಕೃತಾರ್ಥ
ಸ್ಯಾಂ = ಕೃತಕೃತ್ಯನಾಗುವೆನೋ.
 
೪೮, ಶಿಷ್ಯನು ಹೇಳಿದನು: ಹೇ ಸ್ವಾಮಿನ್, ನಾನು ಕೇಳುವ ಪ್ರಶ್ನೆ
ಯನ್ನು ಕೃಪೆಯಿಂದ ಲಾಲಿಸಿರಿ. ನಿಮ್ಮ ಬಾಯಿಂದ ಈ ಪ್ರಶ್ನೆಗೆ ಉತ್ತರ
ವನ್ನು ಕೇಳಿ ನಾನು ಕೃತಾರ್ಥನಾಗುತ್ತೇನೆ.