This page has not been fully proofread.

ವಿವೇಕಚೂಡಾಮಣಿ
 
[೪೬
 
ಅನು- ಕೂಡಲೇ ತೇನ. ಅದರಿಂದ ಆತ್ಯಂತಿಕ- ಸಂಸಾರ- ದುಃಖ-ನಾಶಃ - ಸಂಸಾರ
ದುಃಖದ ಸಂಪೂರ್ಣನಾಶವು ಭವತಿ = ಆಗುತ್ತದೆ.
 
೨೪
 
೪೫. ಉಪನಿಷದ್ವಾಕ್ಯಾರ್ಥದ ವಿಮರ್ಶೆಯಿಂದ ಉತ್ತಮಜ್ಞಾನವು
ಉತ್ಪನ್ನವಾಗುತ್ತದೆ. ಕೂಡಲೇ
ಆ ಜ್ಞಾನದಿಂದ ಸಂಸಾರದು:ಖದ
ಸಂಪೂರ್ಣನಾಶವು ಉಂಟಾಗುತ್ತದೆ.
 
[೧ ಬ್ರಹ್ಮ ಆತ್ಮ ಇವರ ಐಕ್ಯ ಜ್ಞಾನವು.
 
ಶ್ರದ್ಧಾಭಕ್ತಿ-ಧ್ಯಾನಯೋಗಾನ್ ಮುಮು-
ರ್ಮುರ್ಹತೂನ್ ವ್ಯಕ್ತಿ ಸಾಕಾಚ್ಚು ತೇರ್ಗ? ।
ಯೋ ವಾ ಏತೇವ ತಿಮ್ಮತಮುಷ್ಯ
ವಿದ್ಯಾಕಲ್ಪಿತಾದ್ ದೇಹ-
ಬಂಧಾತ್ ॥ ೪೬ ॥
 
H
 
ಶ್ರುತೇಃ - ಉಪನಿಷತ್ತಿನ ಗೀಃ = ವಾಕ್ಯವು ಮುಮುಃ – ಮುಮುಕ್ಷು
ವಿಗೆ ಶ್ರದ್ಧಾಭಕ್ತಿ-ಧ್ಯಾನಯೋಗಾನ್ - ಶ್ರದ್ಧೆ ಭಕ್ತಿ ಧ್ಯಾನಯೋಗ ಇವುಗಳನ್ನು,
ಮುಕ್ತಃ ಮುಕ್ತಿಯ ಹೇತನ್ = ಕಾರಣಗಳನ್ನಾಗಿ ಸಾಕ್ಷಾತ್ - ಪ್ರತ್ಯಕ್ಷವಾಗಿ
ವ್ಯಕ್ತಿ = ಹೇಳುತ್ತದೆ; ಯಃ ವೈ - ಯಾವನು ಏತೇಷು ಏವ - ಇವುಗಳಲ್ಲಿಯೇ
ತಿಪತಿ - ನೆಲೆಗೊಂಡಿರುವ ಅಮುಖ್ಯ = ಅವನಿಗೆ ಅವಿದ್ಯಾಕಲ್ಪಿತಾತ್ - ಅವಿದ್ಯೆ
ಯಿಂದ ಕಲ್ಪಿತವಾಗಿರುವ ದೇಹಬಂಧಾತ್ , ದೇಹಬಂಧದಿಂದ ಮೋಕ್ಷ - ಬಿಡು
ಗಡೆಯು [ಉಂಟಾಗುತ್ತದೆ).
 
೪೬. ಶ್ರದ್ಧೆ ಭಕ್ತಿ ಧ್ಯಾನಯೋಗ- ಇವುಗಳೇ ಮುಮುಕ್ಷುವಿನ
ಮುಕ್ತಿಗೆ ಕಾರಣಗಳೆಂದು ಶ್ರುತಿವಾಕ್ಯವೇ? ಪ್ರತ್ಯಕ್ಷವಾಗಿ ಹೇಳುತ್ತಲಿದೆ.
ಯಾವನು ಇವುಗಳಲ್ಲಿ ನೆಲೆಗೊಂಡಿರುವನೋ ಅವನಿಗೆ ಅವಿದ್ಯೆಯಿಂದ ಕಲ್ಪಿತ
ವಾಗಿರುವ ದೇಹಬಂಧದಿಂದ ಬಿಡುಗಡೆಯಾಗುವುದು.
 
[೧೨೫ನೆಯ ಶ್ಲೋಕವನ್ನು ನೋಡಿ.
೨ ೩೧ನೆಯ ಶ್ಲೋಕವನ್ನು ನೋಡಿ.
 
* ಯಾವ ವಿಧವಾದ ಭಿನ್ನ ಪ್ರತ್ಯಯವಿಲ್ಲದೆ ಧೈಯವಸ್ತುವಿನಲ್ಲಿ ಅವಲಂಬಿಸಿರುವ
ಪ್ರತ್ಯಯವು ಅವಿಚ್ಛಿನ್ನವಾಗಿ ಹರಿಯುತ್ತಿದ್ದರೆ ಧ್ಯಾನವಾಗುತ್ತದೆ, ತತ್ರ ಪ್ರತ್ಯಯ್ಕೆ
ಕತಾನತಾ ಧ್ಯಾನಮ್ (ಯೋಗಸೂತ್ರ ೩. ೨).
 

 
ಶ್ರದ್ಧಾಭಕ್ತಿ ಧ್ಯಾನಯೋಗಾದವೇಹಿ (ಕೈವಲೋಪನಿಷತ್ ೧. ೨).
* ದೇಹಾಭಿಮಾನದಿಂದ.