This page has been fully proofread once and needs a second look.

ವಿರಕ್ತರಾದ, ಪ್ರಶಾಂತಚಿತ್ತಾಃ = ಪ್ರಶಾಂತಚಿತ್ತರಾದ, ಶ್ರುತಿರಸಿಕಾಃ = ಶ್ರುತಿಯಲ್ಲಿ
ರಸಿಕರಾದ, ಮುಮುಕ್ಷವಃ = ಮುಮುಕ್ಷುಗಳಾದ, ಯತಯಃ = ಪ್ರಯತ್ನಶೀಲರು
ಯೇ = ಯಾರೊ, [ತೇ = ಅವರು] ಹಿತಂ = ಹಿತವಾದ, ಇಮಮ್ ಉಪದೇಶಂ =
ಈ ಉಪದೇಶವನ್ನು, ಆದ್ರಿಯಂತಾಂ = ಆದರಿಸಲಿ.
 
೫೭೮. ಸಾಧನದ ಅನುಷ್ಠಾನದಿಂದ[^೧] ಚಿತ್ದ ಸಮಸ್ತ ದೋಷಗಳನ್ನೂ
ಕಳೆದುಕೊಂಡ, ಸಂಸಾರಸುಖದಲ್ಲಿ ವಿರಕ್ತರಾದ, ಪ್ರಶಾಂತಚಿತ್ತರಾದ,
ಶ್ರುತಿಯಲ್ಲಿ ರಸಿಕರಾದ, ಮುಮುಕ್ಷುಗಳಾದ ಪ್ರಯತ್ನಶೀಲರು ಹಿತವಾದ
ಉಪದೇಶವನ್ನು ಆದರಿಸಲಿ.
 
[^೧]ಯಜ್ಞಾದಿ ಬಾಹ್ಯ ಸಾಧನಗಳಿಂದಲೂ ಶವಾದಿ ಅಂತರಂಗಸಾಧನದಿಂದಲೂ.]
 
ಸಂಸಾರಾಧ್ವನಿ ತಾಪಭಾನು-ಕಿರಣ-ಪ್ರೋದ್ಭೂತ-ದಾಹವ್ಯಥಾ-
ಖಿನ್ನಾನಾಂ ಜಲಕಾಂಕ್ಷಯಾ ಮರುಭುವಿ ಭ್ರಾಂತ್ಯಾ ಪರಿಭ್ರಾಮ್ಯತಾಮ್ ।
ಅತ್ಯಾಸನ್ನ-ಸುಧಾಂಬುಧಿಂ ಸುಖಕರಂ ಬ್ರಹ್ಮಾದ್ವಯಂ ದರ್ಶಯಂ-
ತ್ಯೇಷಾ ಶಂಕರಭಾರತೀ ವಿಜಯತೇ ನಿರ್ವಾಣ-ಸಂದಾಯಿನೀ ॥ ೫೭೯ ॥
 
ಸಂಸಾರ- ಅಧ್ವನಿ = ಸಂಸಾರಮಾರ್ಗದಲ್ಲಿ, ತಾಪಭಾನು-ಕಿರಣ-ಪ್ರೋದ್ಭೂತ-
ದಾಹವ್ಯಥಾ-ಖಿನ್ನಾನಾಂ = ತಾಪತ್ರಯವೆಂಬ ಸೂರ್ಯಕಿರಣದಿಂದ ಉಂಟಾದ
ಬಾಯಾರಿಕೆಯ ವ್ಯಥೆಯಿಂದ ಬಳಲುತ್ತಿರುವ, ಮರುಭುವಿ = ಮರುಭೂಮಿಯಲ್ಲಿ,
ಜಲ-ಕಾಂಕ್ಷಯಾ = ನೀರಿಗಾಗಿ, ಭ್ರಾಂತ್ಯಾ = ಭ್ರಾಂತಿಯಿಂದ, ಪರಿಭ್ರಾಮ್ಯತಾಂ =
ಅಲೆಯುತ್ತಿರುವ, [ಚೇತನರಿಗೆ] ಅತ್ಯಾಸನ್ನ -ಸುಧಾಂಬುಧಿಂ = ಅತ್ಯಂತ ಸಮೀಪ-
ದಲ್ಲಿರುವ ಅಮೃತಸಮುದ್ರದಂತಿರುವ, ಸುಖಕರಂ = ಸುಖಕರವಾದ, ಅದ್ವಯಂ
ಬ್ರಹ್ಮ= ಅದ್ವಿತೀಯ ಬ್ರಹ್ಮವನ್ನು, ದರ್ಶಯಂತೀ = ತೋರಿಸುತ್ತಿರುವ, ನಿರ್ಮಾಣ-
ಸಂದಾಯಿನೀ = ಮೋಕ್ಷದಾಯಕವಾದ, ಏಷಾ = ಈ, ಶಂಕರಭಾರತೀ = ಶಂಕರ
ವಾಣಿಯು, ವಿಜಯತೇ = ಸರ್ವೋತ್ಕೃಷ್ಟವಾಗಿರುತ್ತದೆ.
 
೫೭೯. ಸಂಸಾರಮಾರ್ಗದಲ್ಲಿ ತಾಪತ್ರಯವೆಂಬ ಸೂರ್ಯ ಕಿರಣದಿಂದ
ಉಂಟಾದ ಬಾಯಾರಿಕೆಯಿಂದ ಬಳಲುತ್ತಿರುವ, ಮರುಭೂಮಿಯಲ್ಲಿ ನೀರಿ-
ಗಾಗಿ ಭ್ರಾಂತಿಯಿಂದ ಅಲೆಯುತ್ತಿರುವ (ಚೇತನರಿಗೆ) ಅತ್ಯಂತ ಸಮೀಪದಲ್ಲಿ-
ರುವ ಅಮೃತಸಮುದ್ರದಂತಿರುವ ಸುಖಕರವಾದ ಅದ್ವಿತೀಯಬ್ರಹ್ಮವನ್ನು
ತೋರಿಸಿಕೊಡುತ್ತಿರುವ, ಮೋಕ್ಷದಾಯಕವಾದ ಈ ಶಂಕರವಾಣಿಯು
ಸರ್ವೋತ್ಕೃಷ್ಟವಾಗಿರುತ್ತದೆ.