This page has not been fully proofread.

ವಿವೇಕಚೂಡಾಮಣಿ
 
[೫೭೯
 
ವಿರಕ್ತರಾದ ಪ್ರಶಾಂತಚಿತ್ತಾಃ - ಪ್ರಶಾಂತಚಿತ್ತರಾದ ಶ್ರುತಿರಸಿ ಕಾಃ – ಶ್ರುತಿಯಲ್ಲಿ
ರಸಿಕರಾದ ಮುಮುಕ್ಷವಃ = ಮುಮುಕ್ಷುಗಳಾದ ಯತಯಃ - ಪ್ರಯತ್ನಶೀಲರು
ಯೇ - ಯಾರೊ [ತೇ = ಅವರು] ಹಿತಂ = ಹಿತವಾದ ಇಮಮ ಉಪದೇಶಂ
ಈ ಉಪದೇಶವನ್ನು ಆದ್ರಿಯಂತಾಂ – ಆದರಿಸಲಿ.
 
೨೮೬
 
೫೭೮, ಸಾಧನದ ಅನುಷ್ಠಾನದಿಂದ ಚಿತ್ರದ ಸಮಸ್ತ ದೋಷಗಳನ್ನೂ
ಕಳೆದುಕೊಂಡ, ಸಂಸಾರಸುಖದಲ್ಲಿ ವಿರಕ್ತರಾದ, ಪ್ರಶಾಂತಚಿತ್ತರಾದ,
ಶ್ರುತಿಯಲ್ಲಿ ರಸಿಕರಾದ, ಮುಮುಕ್ಷುಗಳಾದ ಪ್ರಯತ್ನಶೀಲರು ಹಿತವಾದ
ಉಪದೇಶವನ್ನು ಆದರಿಸಲಿ.
 
[ ಯಜ್ಞಾದಿ ಬಾಹ್ಯ ಸಾಧನಗಳಿಂದಲೂ ಶವಾದಿ ಅಂತರಂಗಸಾಧನದಿಂದಲೂ.
ಸಂಸಾರಾಧ್ವನಿ ತಾಪಭಾನು-ಕಿರಣ-ಪ್ರೋದ್ಯತ-ದಾಹವ್ಯಥಾ-
ಖಿನ್ನಾನಾಂ ಜಲಕಾಂಕ್ಷೆಯಾ ಮರುಭುವಿ ಭ್ರಾಂತ್ಯಾ
 
ಪರಿಭ್ರಾಮ್ಯತಾಮ್ ।
ಅತ್ಯಾಸನ್ನ-ಸುಧಾಂಬುಧಿಂ ಸುಖಕರಂ ಬ್ರಹ್ಮಾದ್ವಯಂ ದರ್ಶಯಂ-
ತೇಷಾ ಶಂಕರಭಾರತೀ ವಿಜಯತೇ ನಿರ್ವಾಣ-ಸಂದಾಯಿನೀ
 
॥ ೫೭೯ ।
 
ಸಂಸಾರ- ಅಧ್ವನಿ- ಸಂಸಾರಮಾರ್ಗದಲ್ಲಿ ತಾಪಭಾನು- ಕಿರಣ ಪ್ರೋತ.
ದಾಹವ್ಯಥಾ ಖಿನ್ನಾನಾಂ = ತಾಪತ್ರಯವೆಂಬ ಸೂರ್ಯಕಿರಣದಿಂದ ಉಂಟಾದ
ಬಾಯಾರಿಕೆಯ ವ್ಯಥೆಯಿಂದ ಬಳಲುತ್ತಿರುವ, ಮರುಭುವಿ = ಮರುಭೂಮಿಯಲ್ಲಿ
ಜಲ, ಕಾಂಕ್ಷೆಯಾ - ನೀರಿಗಾಗಿ ಭ್ರಾಂತ್ಯಾ - ಭ್ರಾಂತಿಯಿಂದ ಪರಿಭ್ರಾಮ್ಯತಾಂ =
ಅಲೆಯುತ್ತಿರುವ [ಚೇತನರಿಗೆ ಅತ್ಯಾಸನ್ನ ಸುಧಾಂಬುಧಿಂ = ಅತ್ಯಂತ ಸಮೀಪ
ದಲ್ಲಿರುವ ಅಮೃತಸಮುದ್ರದಂತಿರುವ ಸುಖಕರಂ- ಸುಖಕರವಾದ ಅದ್ವಯಂ
ಬ್ರಹ್ಮ- ಅದ್ವಿತೀಯ ಬ್ರಹ್ಮವನ್ನು ದರ್ಶಯಂತೀ = ತೋರಿಸುತ್ತಿರುವ ನಿರ್ಮಾಣ
ಸಂದಾಯಿನೀ - ಮೋಕ್ಷದಾಯಕವಾದ ಏಷಾ = ಈ ಶಂಕರಭಾರತೀ = ಶಂಕರ
ವಾಣಿಯು ವಿಜಯತೇ - ಸರ್ವೋತ್ಕೃಷ್ಟವಾಗಿರುತ್ತದೆ.
 
೫೭೯. ಸಂಸಾರಮಾರ್ಗದಲ್ಲಿ ತಾಪತ್ರಯವೆಂಬ ಸೂರ್ಯ ಕಿರಣದಿಂದ
ಉಂಟಾದ ಬಾಯಾರಿಕೆಯಿಂದ ಬಳಲುತ್ತಿರುವ, ಮರುಭೂಮಿಯಲ್ಲಿ ನೀರಿ
ಗಾಗಿ ಭ್ರಾಂತಿಯಿಂದ ಅಲೆಯುತ್ತಿರುವ (ಚೇತನರಿಗೆ ಅತ್ಯಂತ ಸಮೀಪದಲ್ಲಿ
ರುವ ಅಮೃತಸಮುದ್ರದಂತಿರುವ ಸುಖಕರವಾದ ಅದ್ವಿತೀಯಬ್ರಹ್ಮವನ್ನು
ತೋರಿಸಿಕೊಡುತ್ತಿರುವ, ಮೋಕ್ಷದಾಯಕವಾದ ಈ ಶಂಕರವಾಣಿಯು
ಸರ್ವೋತ್ಕೃಷ್ಟವಾಗಿರುತ್ತದೆ.