This page has not been fully proofread.

೩೭]
 
ವಿವೇಕಚೂಡಾಮಣಿ
 
ದುರ್ವಾರ-ಸಂಸಾರ-ದವಾಗಿ ತಂ
ದೋಧೂಯಮಾನಂ ದುರದೃಷ್ಟವಾತೈಃ ।
ಭೀತಂ ಪ್ರಪನ್ನಂ ಪರಿಪಾಹಿ ಮೃತ್ಯ
ಶರಣ್ಯಮನ್ಯಂ ಯದಹಂ ನ ಜಾನೇ
 
೧೯
 
॥ ೩೬ ॥
 
ಯತ್ = ಯಾವ ಕಾರಣದಿಂದ ಅಹಂ = ನಾನು ಅನ್ಯಂ ಶರಣ್ಯಂ = ಬೇರೆ
ರಕ್ಷಕನನ್ನು ನ ಜಾನೇ = ಅರಿಯೆನೊ [ಆದುದರಿಂದಲೇ] ದುರ್ವಾರ- ಸಂಸಾರ.
ದವಾಗ್ನಿತ೦ - ಪರಿಹರಿಸಲಶಕ್ಯವಾದ ಸಂಸಾರವೆಂಬ ಕಾಡಿಚ್ಚಿನಿಂದ
ದುರದೃಷ್ಟ ವಾತೈಃ – ದುರದೃಷ್ಟವೆಂಬ ಬಿರುಗಾಳಿಗಳಿಂದ
ಕಂಪಿಸುತ್ತಿರುವ ಭೀತಂ - ಭೀತನಾದ ಪ್ರಪನ್ನಂ = ಶರಣಾಗತನಾದ [ನನ್ನನ್ನು)
ಮೃತ್ಯೋಃ = ಮೃತ್ಯುವಿನಿಂದ ಪರಿಪಾಹಿ - ಕಾಪಾಡು.
 
ಬಂದಿರುವ
ಧೂಯಮಾನಂ
 
೩೬.
 
ಪರಿಹರಿಸಲಶಕ್ಯವಾದ ಸಂಸಾರವೆಂಬ ಕಾಡ್ಗಚ್ಚಿನಿಂದ ಬೆಂದು,
ದುರದೃಷ್ಟವೆಂಬ ಬಿರುಗಾಳಿಗಳಿಂದ ಕಂಪಿಸುತ್ತ, ಭಯಗೊಂಡು, ನಿನ್ನಲ್ಲಿಯೇ
ಶರಣಾಗತನಾಗಿರುವ ನನ್ನನ್ನು ಸಂಸಾರವೆಂಬ ಮೃತ್ಯುವಿನಿಂದ ಕಾಪಾಡು;
ಏಕೆಂದರೆ ಬೇರೊಬ್ಬ ರಕ್ಷಕನನ್ನು ನಾನು ಅರಿಯೆನು.
 
ಶಾಂತಾ ಮಹಾಂತೋ ನಿವಸಂತಿ ಸಂತೋ
ವಸಂತವಲ್ಲೋಕಹಿತಂ ಚರಂತಃ ।
 
ತೀರ್ಣಾಃ ಸ್ವಯಂ ಭೀಮಭವಾರ್ಣವಂ ಜನಾ-
ನಹೇತುನಾನ್ಯಾನಪಿ ತಾರಯಂತಃ
 
॥ ೩೭ ॥
 
ತಾವೇ
 
ಭೀಮಭವಾರ್ಣವಂ - ಭಯಂಕರವಾದ ಸಂಸಾರಸಾಗರವನ್ನು ಸ್ವಯಂ =
ತೀರ್ಣಾಃ - ದಾಟಿರುವವರೂ ಅಹೇತುನಾ - ನಿಮಿತ್ತವಿಲ್ಲದೆ ಅನ್ಯಾನ
ಜನಾನ್ ಅಪಿ - ಇತರ ಜನರನ್ನೂ ತಾರಯಂತಃ - ದಾಟಿಸುವವರೂ ಶಾಂತಾಃ -
ಶಾಂತರೂ ಮಹಾಂತಃ = ಮಹನೀಯರೂ [ಆದ ಸಂತಃ = ಸತ್ಪುರುಷರು ವಸಂತ.
ವತ್ – ವಸಂತಋತುವಿನಂತೆ ಲೋಕಹಿತಂ = - ಲೋಕಕಲ್ಯಾಣವನ್ನು ಚರ೦ತಃ =
ಮಾಡುತ್ತಾ ನಿವಸಂತಿ - ಇರುತ್ತಾರೆ.
 
೩೭. ಭಯಂಕರವಾದ ಸಂಸಾರಸಾಗರವನ್ನು ತಾವು ದಾಟಿ, ಯಾವ
ನಿಮಿತ್ತವೂ ಇಲ್ಲದೆ ಇತರ ಜನರನ್ನು ದಾಟಿಸುವ ಶಾಂತರೂ ಮಹನೀಯರೂ
ಆದ ಸತ್ಪುರುಷರು ವಸಂತಋತುವಿನಂತೆ ಲೋಕಕಲ್ಯಾಣವನ್ನು ಮಾಡುತ್ತಾ
ಇರುತ್ತಾರೆ.
 
[೧ ಕುರುಡನಾದವನು ಇತರರಿಗೆ ದಾರಿಯನ್ನು ತೋರಿಸಲಾರನು. ಸಂಸಾರವನ್ನು
ದಾಟಿದವರೇ ಇತರರನ್ನು ದಾಟಿಸಲು ಶಕ್ತರಾಗುವರು.]