This page has not been fully proofread.

೫೬೩]
 
ವಿವೇಕಚೂಡಾಮಣಿ
 
೨೭೯
 
೫೬೧ ವಿಕಾರವುಳ್ಳ ವಸ್ತುಗಳು ನಾಶವಾಗುತ್ತಿದ್ದರೂ ಆತ್ಮನು ನಾಶ
ವಾಗುವುದಿಲ್ಲವೆಂದು ಶ್ರುತಿಯು ಹೇಳುತ್ತದೆ: 'ಎಲೆ ಮೈತ್ರೇಯಿ, ಈ
ಆತ್ಮನು ಅವಿನಾಶಿಯೇ.೧
 
[೧ ಬೃಹದಾರಣ್ಯಕ ಉ. ೪. ೫. ೧೪]
 
ಪಾಷಾಣ-ವೃಕ್ಷ-ತೃಣಧಾನ್ಯ-ಕಡಂಕರಾದ್ಯಾ
ದಗ್ತಾ ಭವಂತಿ ಹಿ ಮೃದೇವ ಯಥಾ ತಥೈವ ।
ದೇಹೇಂದ್ರಿಯಾಸು-ಮನಆದಿ ಸಮಸ್ತ-ದೃಶ್ಯ
 
ಜ್ಞಾನಾಗ್ನಿದಗ್ಧ ಮುಪಯಾತಿ ಪರಾತ್ಮಭಾವಮ್ ॥೫೬೨॥
 
- ಕಲ್ಲು ಮರ ಹುಲ್ಲು
ಯಥಾ - ಹೇಗೆ ಮೃತ್
ಏವ- ಹಾಗೆಯೇ ದೇಹ.
 
ಪಾಷಾಣ- ವೃಕ್ಷತೃಣ ಧಾನ್ಯ. ಕಡಂಕರ. ಆ ದ್ಯಾ
ಧಾನ್ಯ ಹೊಟ್ಟು ಮೊದಲಾದುವು ದಗ್ದಾಃ = ದಗ್ಧವಾಗಿ
- ಮಣ್ಣೆ ಭವಂತಿ ಹಿ ಆಗುತ್ತವೆಯೊ ತಥಾ
ಇಂದ್ರಿಯ. ಅಸು, ಮನಃ- ಆದಿ – ದೇಹ ಇಂದ್ರಿಯ ಪ್ರಾಣ ಮನಸ್ಸು ಮೊದಲಾದ
ಸಮಸ್ತದೃಶ್ಯಂ ಸಮಸ್ತದೃಶ್ಯ ಪದಾರ್ಥವೂ ಜ್ಞಾನಾಗ್ನಿ ದಗ್ಧಂ - ಜ್ಞಾನಾಗ್ನಿಯಿಂದ
ದಗ್ಧವಾದ ಪರಾತ್ಮಭಾವಂ ಪರಮಾತ್ಮಭಾವವನ್ನು ಉಪಯಾತಿ - ಹೊಂದುತ್ತದೆ.
 
೫೬೨. ಕಲ್ಲು ಮರ ಹುಲ್ಲು ಧಾನ್ಯ ಹೊಟ್ಟು ಮೊದಲಾದುವು ದಗ್ಧ
ವಾದರೆ ಮಣ್ಣೆ ಆಗುವಂತೆ, ದೇಹೇಂದ್ರಿಯ ಪ್ರಾಣ ಮನಸ್ಸು ಮೊದಲಾದ
ದೃಶ್ಯ ವಸ್ತುವೆಲ್ಲವೂ ಜ್ಞಾನಾಗ್ನಿಯಿಂದ ದಗ್ಧವಾಗಿ ಪರಮಾತ್ಮಸ್ವರೂಪವನ್ನೇ
ಹೊಂದುತ್ತವೆ.
 
ವಿಲಕ್ಷಣಂ ಯಥಾ ಧ್ವಾಂತಂ ಲೀಯತೇ ಭಾನುತೇಜಿಸಿ ।
ತಥೈವ ಸಕಲಂ ದೃಶ್ಯಂ ಬ್ರಹ್ಮಣಿ ಪ್ರವಿಲೀಯತೇ
 
॥ ೫೬೩ I
 
ಭಾನುತೇಜಿಸಿ ಸೂರ್ಯನ ಬೆಳಕಿನಲ್ಲಿ ವಿಲಕ್ಷಣಂ - [ಅದಕ್ಕಿಂತ ಬೇರೆ
ಯಾಗಿರುವ ಧ್ವಾಂತಂ ಕತ್ತಲೆಯು ಯಥಾ - ಹೇಗೆ ಲೀಯತೇ - ಲಯವಾಗು
ವುದೊ ತಥಾ ಏವ ಹಾಗೆಯೇ ಸಕಲಂ ದೃಶ್ಯಂ - ದೃಶ್ಯವಸ್ತುವೆಲ್ಲವೂ ಬ್ರಹ್ಮಣಿ -
ಬ್ರಹ್ಮದಲ್ಲಿ ಪ್ರವಿಲೀಯತೇ - ಲಯವಾಗುತ್ತದೆ.
 
೫೬೩, ಸೂರ್ಯನ ಬೆಳಕಿನಲ್ಲಿ (ಅದಕ್ಕಿಂತ ಭಿನ್ನವಾದ ಕತ್ತಲೆಯು
ಹೇಗೆ ಲಯವಾಗಿ ಹೋಗುವುದೋ ಹಾಗೆಯೇ ದೃಶ್ಯವಸ್ತುವೆಲ್ಲವೂ ಬ್ರಹ್ಮದಲ್ಲಿ
ಲಯವಾಗುತ್ತದೆ.