This page has been fully proofread once and needs a second look.

೫೫೫. ಬ್ರಹ್ಮವೇ ಆದ ಯತಿಯ ಶರೀರವು ಮರದಿಂದ ಉದುರಿ-
ಹೋದ ಎಲೆಯಂತೆ ಎಲ್ಲಿಯಾದರೂ ಬೀಳಲಿ, (ಅದರಿಂದ ಅವನಿಗೆ ಏನೂ
ಆಗುವುದಿಲ್ಲ). ಏಕೆಂದರೆ ಅದು ಮೊದಲೇ ಜ್ಞಾನಾಗ್ನಿಯಿಂದ ಸುಟ್ಟುಹೋಗಿ-
ರುವುದು.[^೧]
 
[^೧] ಆದುದರಿಂದ ಅವನು ತನ್ನ ಶವಸಂಸ್ಕಾರದ ವಿಷಯದಲ್ಲಿ ಯೋಚಿಸಬೇಕಾದ
ಆವಶ್ಯಕತೆಯಿರುವುದಿಲ್ಲ.
 
ಸದಾತ್ಮನಿ ಬ್ರಹ್ಮಣಿ ತಿಷ್ಠತೋ ಮುನೇಃ
ಪೂರ್ಣಾದ್ವಯಾನಂದಮಯಾತ್ಮನಾ ಸದಾ ।
ನ ದೇಶಕಾಲಾದುಚಿತ-ಪ್ರತೀಕ್ಷಾ
ತ್ವಙ್ಮಾಂಸ-ವಿಟ್ಪಿಂ-ವಿಸರ್ಜನಾಯ ॥ ೫೫೬ ॥
 
ಸದಾತ್ಮನಿ = ಸರೂಪವಾದ, ಬ್ರಹ್ಮಣಿ = ಬ್ರಹ್ಮದಲ್ಲಿ, ಸದಾ = ಯಾವಾಗಲೂ,
ಪೂರ್ಣ-ಅದ್ವ ಯ-ಆನಂದಮಯ-ಆತ್ಮನಾ = ಪೂರ್ಣವಾದ ಅದ್ವಯಾನಂದ ಸ್ವರೂ-
ಪದಿಂದ, ತಿಷ್ಠತಃ = ನಿಂತಿರುವ, ಮುನೇಃ = ಮುನಿಗೆ, ತ್ವಕ್-ಮಾಂಸ-ವಿಟ್-
ಪಿಂಡ-ವಿಸರ್ಜನಾಯ = ಚರ್ಮಮಾಂಸಮಲಗಳ ಮುದ್ದೆಯಾಗಿರುವ ಶರೀರದ
ವಿಸರ್ಜನೆಗೆ, ದೇಶ-ಕಾಲಾದಿ-ಉಚಿತ-ಪ್ರತೀಕ್ಷಾ ನ = ಉಚಿತವಾದ ದೇಶಕಾಲಾದಿ-
ಗಳ ಅಪೇಕ್ಷೆಯು ಇರುವುದಿಲ್ಲ.
 
೫೫೬. ಸತ್ಸ್ವರೂಪವಾದ ಬ್ರಹ್ಮದಲ್ಲಿ ಪೂರ್ಣಾದ್ವಯಾನಂದರೂಪ-
ದಿಂದ ಯಾವಾಗಲೂ ನಿಂತಿರುವ ಮುನಿಗೆ ಚರ್ಮಮಾಂಸಮಲಗಳ ಮುದ್ದೆ-
ಯಾಗಿರುವ ಶರೀರವನ್ನು ತ್ಯಜಿಸುವುದಕ್ಕೆ ಉಚಿತವಾದ ದೇಶಕಾಲಾದಿಗಳ
ಅಪೇಕ್ಷೆಯು ಇರುವುದಿಲ್ಲ.
 
[ಶರೀರವು ತನ್ನ ಕಾರ್ಯವನ್ನು ಮುಗಿಸಿರುವುದರಿಂದ ಅದನ್ನು ಅವನು
ಯಾವಾಗಲಾದರೂ ಬಿಡಬಹುದು.]
 
ದೇಹಸ್ಯ ಮೊಕ್ಷೋ ನೋ ಮೋಕ್ಷೋ ನ ದಂಡಸ್ಯ ಕಮಂಡಲೋಃ ।
ಅವಿದ್ಯಾ-ಹೃದಯಗ್ರಂಥಿ-ಮೋಕ್ಷೋ ಮೋಕ್ಷೋ ಯತಸ್ತತಃ ॥ ೫೫೭ ॥
 
ಯತಃ = ಯಾವ ಕಾರಣದಿಂದ, ಅವಿದ್ಯಾ-ಹೃದಯಗ್ರಂಥಿ-ಮೋಕ್ಷಃ =
ಅವಿದ್ಯೆಯೆಂಬ ಹೃದಯಗ್ರಂಥಿಯ ಬಿಡುವಿಕೆಯು, ಮೋಕ್ಷಃ = ಮೋಕ್ಷವೊ, ತತಃ =
ಆ ಕಾರಣದಿಂದ, ದೇಹಸ್ಯ = ದೇಹದ, ಮೋಕ್ಷಃ = ಬಿಡುವಿಕೆಯು, ನ ಉ ಮೋಕ್ಷಃ =