This page has not been fully proofread.

೧೮
 
ವಿವೇಕಚೂಡಾಮಣಿ
 
ಸುಟ್ಟಿರುವ ಬೆಂಕಿಯಂತೆ ಶಾಂತನೊ ಯಾವ ಪ್ರತಿಫಲವನ್ನೂ ಬಯಸದೆ
ದಯಾಸಿಂಧುವಾಗಿರುವನೆ ನಮಿಸಿದ ಸಾಧುಗಳಿಗೆ ಬಂಧುವೊ
 
[೧ಬೃಹದಾರಣ್ಯಕೋಪನಿಷತ್ತು (೪, ೩, ೩೩) ಯಶ್ಚ ಪ್ರೋತ್ರಿಯೋವೃಜಿ.
ನೋಕಾಮಹತಃ ಎಂದು ಶೈತ್ರಿಯನ ಗುಣವನ್ನು ವಿವರಿಸುತ್ತದೆ.
 
೨ ಶ್ವೇತಾಶ್ವತರೋಪನಿಷತ್ತು (೬, ೧೯) ದಗ್ಧಂಧನಮಿವಾನಲ ಎಂದು
ಈಶ್ವರನ ಲಕ್ಷಣವನ್ನು ಹೇಳುತ್ತದೆ.
 
ತಮಾರಾಧ್ಯ ಗುರುಂ ಭಕ್ತಾ, ಪ್ರ-ಪ್ರಶ್ರಯ-ಸೇವನೈಃ ।
ಪ್ರಸನ್ನಂ ತನನುಪ್ರಾಪ್ತ ಪೃಚೈಜ್ಞಾತವ್ಯ ಮಾತ್ಮನಃ ॥ ೩೪ ।
 
ತಂ ಗುರುಂ ಅಂಥ ಗುರುವನ್ನು ಭಕ್ತಾ - ಭಕ್ತಿಯಿಂದ ಆರಾಧ್ಯ -
ಆರಾಧಿಸಿ ಪ್ರಶ್ನೆ- ಪ್ರಶ್ರಯ ಸೇವನೈಃ - ನಮ್ರತೆ- ವಿನಯ ಸೇವೆಗಳಿಂದ ಪ್ರಸನ್ನ
ತಂ ಪ್ರಸನ್ನನಾದ ಅವನನ್ನು ಅನುಪ್ರಾಪ್ಯ - ಹೊಂದಿ ಆತ್ಮನಃ ಜ್ಞಾತ ವ್ಯಂ =
ತನಗೆ ತಿಳಿಯಬೇಕಾದುದನ್ನು ಪೃಚ್ಛತ್ - ಪ್ರಶ್ನಿಸಬೇಕು.
 
೩೪. ಅಂಥ ಗುರುವನ್ನು ಭಕ್ತಿಯಿಂದ ಆರಾಧಿಸಿ, ನನ್ನತೆ ವಿನಯ
ಸೇವೆ ಇವುಗಳಿಂದ ಪ್ರಸನ್ನನಾದ ಅವನನ್ನು ಬಳಿಸಾರಿ ತಾನು ತಿಳಿಯ
ಬೇಕೆಂದಿರುವುದನ್ನು ಕುರಿತು ಪ್ರಶ್ನಿಸಬೇಕು.
 
ಸ್ವಾಮಿನ್ನಮಸ್ತ ನತಲೋಕಬಂಧೋ
ಕಾರುಣ್ಯಸಿಂಧೋ ಪತಿತಂ ಭವಾಬ್
ಮಾಮುದ್ಧರಾಷ್ಟ್ರೀಯ-ಕಟಾಕ್ಷದೃಷ್ಟಾ
 
ಋಜ್ಞಾತಿಕಾರುಣ್ಯ-ಸುಧಾಭಿವೃಷ್ಟಾ ॥ ೩೫ ।
 

 
ಕಾರುಣ್ಯ-
ಮಾಂ
 
ನತಲೋಕಬಂಧ = ನಮಿಸುತ್ತಿರುವ ಜನರ ಬಂಧುವೆ,
ಸಿಂಧೂ- ಕರುಣಾಸಿಂಧುವೆ, ಸ್ವಾಮಿನ್ - ಸ್ವಾಮಿಯೆ, ತೇ = ನಿನಗೆ ನಮಃ =
ನಮಸ್ಕಾರ; ಭವಾಬ್ – ಸಂಸಾರಸಾಗರದಲ್ಲಿ ಪತಿತಂ = ಬಿದ್ದಿರುವ
ನನ್ನನ್ನು ಋಜ್ಞಾ = ಸರಳವಾದ ಅತಿ ಕಾರುಣ್ಯ-ಸುಧಾಭಿವೃಷ್ಟಾ - ಕರುಣಾಮೃತ
ವನ್ನು ವರ್ಷಿಸುತ್ತಿರುವ ಆತ್ಮೀಯ.ಕಟಾಕ್ಷ ದೃಷ್ಟಾ - ನಿನ್ನ ಕಟಾಕ್ಷದೃಷ್ಟಿಯಿಂದ
ಉದ್ಧರ - ಉದ್ಧರಿಸು.
 

 
೩೫. ನಮಿಸುತ್ತಿರುವ ಜನರ ಬಂಧುವೆ, ಕರುಣಾಸಾಗರನೆ, ಸ್ವಾಮಿನ್,
ನಿನಗೆ ನಮಸ್ಕಾರ! ಸಂಸಾರಸಾಗರದಲ್ಲಿ ಬಿದ್ದಿರುವ ನನ್ನನ್ನು ಕರುಣಾಮೃತ
ವನ್ನು ವರ್ಷಿಸುತ್ತಿರುವ ನಿನ್ನ ಸರಳವಾದ ಕಟಾಕ್ಷದೃಷ್ಟಿಯಿಂದ ಉದ್ಭರಿಸು.
[೨೫ನೆಯ ಶ್ಲೋಕದಿಂದ ೪೦ರ ವರೆಗೆ ಶಿಷ್ಯನ ಪ್ರಶ್ನೆಗಳು]