This page has not been fully proofread.

೫೩೭]
 
ವಿವೇಕಚೂಡಾಮಣಿ
 
ಕ್ಷುಧಾಂ ದೇಹವ್ಯಥಾಂ ತ್ಯಾ ಬಾಲಃ ಕ್ರೀಡತಿ ವಸ್ತುನಿ ।
ತಥೈವ ವಿದ್ವಾನ್ ರಮತೇ ನಿರ್ಮಮೋ ನಿರಹಂ ಸುಖೀ ॥ ೫೩೬ ॥
 
೨೬೭
 
ಬಾಲಃ- ಬಾಲಕನು ಕ್ಷುಧಾಂ- ಹಸಿವನ್ನೂ ದೇಹವ್ಯಥಾಂ ದೇಹಾಯಾಸದ ವ್ಯಥೆ
ಯನ್ನೂ ತ್ಯಾ ಬಿಟ್ಟು ವಸ್ತುನಿ=[ಆಟದ] ವಸ್ತುವಿನಲ್ಲಿ ಕ್ರೀಡತಿ ಆಡುತ್ತಾನೆ,
ತಥಾ ಏನ - ಹಾಗೆಯೇ ವಿದ್ವಾನ್ - ಬ್ರಹ್ಮಜ್ಞಾನಿಯು ನಿರ್ಮಮಃ - ಮಮಕಾರ
ವಿಲ್ಲದೆ ನಿರಹಂ-ಅಹಂಕಾರವಿಲ್ಲದೆ ಸುಖ-ಸುಖಿಯಾಗಿ ರಮತೇ-ರಮಿಸುತ್ತಾನೆ.
 
೫೩೬. ಬಾಲಕನು ಹಸಿವನ್ನೂ ದೇಹಾಯಾಸದ ವ್ಯಥೆಯನ್ನೂ ಮರೆತು
ತನ್ನ ಆಟದ ವಸ್ತುವಿನೊಂದಿಗೆ ಆಡುವಂತೆ ಬ್ರಹ್ಮಜ್ಞಾನಿಯು ಅಹಂಕಾರ
ಮಮಕಾರಗಳಿಲ್ಲದೆ ಸುಖಿಯಾಗಿ (ತನ್ನ ಆತ್ಮನಲ್ಲಿ) ರಮಿಸುತ್ತಾನೆ.
 
ಚಿಂತಾಶೂನ್ಯಮದೈನ್ಯಭೈಕಮಶನಂ ಪಾನಂ ಸರಿದ್ವಾರಿಷು
ಸ್ವಾತಂತ್ರಣ ನಿರಂಕುಶಾ ಸ್ಥಿತಿರಭೀರ್ನಿದ್ರಾ ಸ್ಮಶಾನೇ ವನೇ ।
ವಸ್ತ್ರಂ ಕ್ಷಾಲನ-ಶೋಷಣಾದಿ-ರಹಿತಂ ದಿಗ್ಯಾಸ್ತು ಶಯ್ಯಾ ಮಹೀ
ಸಂಚಾರೋ ನಿಗಮಾಂತವೀಷು ವಿದಾಂ ಕ್ರೀಡಾ ಪರೇ ಬ್ರಹ್ಮಣಿ
 
॥ ೫೩೭ ।
 
ವಿದಾಂ - ಬ್ರಹ್ಮಜ್ಞಾನಿಗಳಿಗೆ ಚಿಂತಾಶೂನ್ಯಂ – ಚಿಂತಾರಹಿತವಾದ ಅದೈನ್ಯ
ಬೈಕಂ – ದೀನತ್ವವಿಲ್ಲದ ಭಿಕ್ಷೆಯಾಗಿರುವ ಅಶನಂ-ಆಹಾರವು, ಸರಿತ್ವಾರಿಸು
ನದಿಯ ಜಲಗಳಲ್ಲಿ ಪಾನಂ-ಪಾನವು, ಸ್ವಾತಂತ್ರ್ಯಣ ಸ್ವತಂತ್ರವಾಗಿ ನಿರಂಕುಶಾ=
ನಿರಂಕುಶವಾದ ಸ್ಥಿತಿಃ = ಸ್ಥಿತಿಯು, ಸ್ಮಶಾನೇ ವನೇ-ಸ್ಮಶಾನದಲ್ಲಾಗಲಿ ಕಾಡಿನಲ್ಲಾ
ಗಲಿ ಅಭೀಃ- ನಿರ್ಭಯವಾದ ನಿದ್ರಾ-ನಿದ್ರೆ, ದಿಕ್ ವಾ- ದಿಕ್ಕೇ ಕಾಲನ ಶೋಷ.
ಣಾದಿರಹಿತಂ = ಒಗೆಯುವುದು ಒಣಗಿಸುವುದು ಮೊದಲಾದುದಿಲ್ಲದ ವಸ್ತ್ರಮ್
ಅಸ್ತು - ವಸ್ತ್ರವಾಗಲಿ, ಮಹೀ = ಭೂಮಿಯೇ ಶಯಾ - ಹಾಸಿಗೆ, ನಿಗಮಾಂತ.
ವೀಥಿಷು ವೇದಾಂತವೆಂಬ ಬೀದಿಗಳಲ್ಲಿ ಸಂಚಾರಃ ಸಂಚಾರ, ಪರೇ ಬ್ರಹ್ಮಣಿ
ಪರಬ್ರಹ್ಮದಲ್ಲಿ ಕ್ರೀಡಾ - ಕ್ರೀಡೆಯು.
 
೫೩೭. ಬ್ರಹ್ಮಜ್ಞಾನಿಗಳು ಯಾವ ಚಿಂತೆಯಾಗಲಿ ದೈನ್ಯವಾಗಲಿ ಇಲ್ಲದೆ
ಭಿಕ್ಷೆಯಿಂದಲೇ ಊಟಮಾಡುತ್ತಾರೆ; ನದಿಯ ನೀರೇ ಅವರಿಗೆ ಪಾನವಾಗಿದೆ;
ಸ್ವತಂತ್ರವಾಗಿಯೂ
 
ನಿರಂಕುಶವಾಗಿಯೂ ಇದ್ದು, ಸ್ಮಶಾನದಲ್ಲಾಗಲಿ ಕಾಡಿ
ನಲ್ಲಾಗಲಿ ನಿರ್ಭಯವಾಗಿ ಮಲಗುತ್ತಾರೆ; ಅವರಿಗೆ ದಿಕ್ಕೇ ಒಗೆಯುವುದು
ಒಣಗಿಸುವುದು ಮೊದಲಾದುದಿಲ್ಲದ ವಸ್ತ್ರವಾಗಿದೆ; ನೆಲವೇ ಅವರಿಗೆ ಹಾಸಿಗೆ;
ಅವರು ವೇದಾಂತವೆಂಬ ಬೀದಿಗಳಲ್ಲಿ ಸಂಚರಿಸುತ್ತಾರೆ; ಅವರಿಗೆ ಕ್ರೀಡೆಯು
ಪರಬ್ರಹ್ಮದಲ್ಲಿಯೇ.