This page has not been fully proofread.

[೫೩೦
 
ಯಸ್ಮಿನ್ ಸತಿ - ಯಾವುದಿದ್ದರೆ ಪದಾರ್ಥಧೀಃ ಪದಾರ್ಥ ಜ್ಞಾನವು
[ಉಂಟಾಗುವುದೋ ಅಂಥ ಪ್ರಮಾಣ- ಸುಷ್ಟುತ್ವಂ ವಿನಾ- ಪ್ರಮಾಣಸೌಷ್ಟವವನ್ನು
ಬಿಟ್ಟು ಅಯಂ - ಇದು ಘಟಃ - ಗಡಿಗೆ ಇತಿ~ ಎಂದು ವಿಜ್ಞಾತುಂ ತಿಳಿದುಕೊಳ್ಳು
ವುದಕ್ಕೆ ಈ ನಿಯಮಃ = ಯಾವ ನಿಯಮವು ಅಪೇಕ್ಷ್ಯತೇ ನು- ಅಪೇಕ್ಷಿಸ
ಲ್ಪಡುತ್ತದೆ?
 
១៦ ខ
 
ವಿವೇಕಚೂಡಾಮಣಿ
 
೫೨೯. (ಇದು ಗಡಿಗೆ' ಎಂದು ತಿಳಿದುಕೊಳ್ಳುವುದಕ್ಕೆ ಪ್ರಮಾಣ
ಸೌಷ್ಟವವನ್ನು ಬಿಟ್ಟು ಯಾವ ನಿಯಮವು ಬೇಕಾಗಿರುತ್ತದೆ? ಅದಿದ್ದರೆ
ಮಾತ್ರ ಪದಾರ್ಥಜ್ಞಾನವು ಉಂಟಾಗುತ್ತದೆ.
 
ಅಯಮಾತಾ ನಿತ್ಯಸಿದ್ಧಃ ಪ್ರಮಾಣೇ ಸತಿ ಭಾಸತೇ ।
ನ ದೇಶಂ ನಾಪಿ ವಾ ಕಾಲಂ ನ ಶುದ್ಧಿಂ ವಾಪ್ಯಪೇಕ್ಷತೇ ॥ ೫೩೦ ॥
 
ಅಯ ಆತ್ಮಾ - ಈ ಆತ್ಮನು ನಿತ್ಯಸಿದ್ಧಃ = ನಿತ್ಯ ಸಿದ್ಧ ಸ್ವರೂಪನು;
ಪ್ರಮಾಣೇ ಸತಿ = ಪ್ರಮಾಣವಿರುವಾಗ ಭಾಸತೇ - ಪ್ರಕಾಶಿಸುತ್ತಾನೆ; ದೇಶಂ=
ದೇಶವನ್ನು ನ ಅಪೇಕ್ಷತೇ - ಅಪೇಕ್ಷಿಸುವುದಿಲ್ಲ, ಕಾಲಮ್ ಅಪಿ ವಾ - ಕಾಲ
ವನ್ನೂ ನ, ಶುದ್ಧಿಂ ವಾ - ಶುದ್ಧಿಯನ್ನೂ ನ.
 
೫೩೦. ಈ ಆತ್ಮನು ನಿತ್ಯಸಿದ್ಧ ಸ್ವರೂಪನು; ಪ್ರಮಾಣವಿರುವಾಗ
ಪ್ರಕಾಶಿಸುತ್ತಾನೆ; ದೇಶವನ್ನಾಗಲಿ ಕಾಲವನ್ನಾಗಲಿ ಶುದ್ದಿಯನ್ನಾಗಲಿ ಅಪೇ
ಕ್ಷಿಸುವುದಿಲ್ಲ.
 
[ಯಜ್ಞಾದಿ ಕರ್ಮಗಳು ಕ್ರಿಯಾರೂಪವಾದುದರಿಂದ ಅವುಗಳಿಗೆ ದೇಶಕಾಲಗಳ
ಅಪೇಕ್ಷೆಯಿದೆ. ಆತ್ಮನು ನಿತ್ಯಸಿದ್ಧನಾದುದರಿಂದ ದೇಶಕಾಲಗಳ ಅಪೇಕ್ಷೆಯಿಲ್ಲ
ದಿದ್ದರೂ ಅವನ ಅಭಿವ್ಯಕ್ತಿಗಾಗಿ ಪ್ರಮಾಣ- ಪ್ರವೃತ್ತಿಯ ಅಪೇಕ್ಷೆಯಿದೆ; ಇಲ್ಲದಿದ್ದರೆ
ಎಲ್ಲರೂ ಆತ್ಮಜ್ಞರಾಗಬೇಕಾಗಿತ್ತು.]
 
ದೇವದಹಮಿತ್ಯೇತದ್ವಿಜ್ಞಾನಂ ನಿರಪೇಕ್ಷಕಮ್ ।
ತದ್ವಹ್ಮವಿದೋಸ್ಯ ಬ್ರಹ್ಮಾಹಮಿತಿ ವೇದನಮ್ ॥ ೫೩೧ ॥
 
ಅಹಂ – ನಾನು ದೇವದತ್ತಃ- ದೇವದತ್ತನು ಇತಿ ಎಂಬ ಏತತ್ ವಿಜ್ಞಾನಂ
ಈ ಜ್ಞಾನವು ನಿರಪೇಕ್ಷಕ- ನಿರಪೇಕ್ಷಕವಾದುದು, ತದ್ವತ್ - ಹಾಗೆಯೇ ಬ್ರಹ್ಮ,
ವಿದಃ ಅಪಿ - ಬ್ರಹ್ಮಜ್ಞಾನಿಗೂ ಅಹಂ = ನಾನು ಬ್ರಹ್ಮ ಬ್ರಹ್ಮವು ಇತಿ = ಎಂಬ
ವೇದನಂ ಜ್ಞಾನವು [ನಿರಪೇಕ್ಷಕವು].
 
=