This page has not been fully proofread.

ವಿವೇಕಚೂಡಾಮಣಿ
 
ವಿದ್ವಾನ್ = ವಿದ್ವಾಂಸನಾದ ಆತ್ಮಾರಾಮಃ – ಆತ್ಮಾರಾಮನಾದ ಮುನಿಃ =
ಮುನಿಯು ಗಚ್ಛನ್ – ನಡೆಯುತ್ತ ತಿಷ್ಯನ್ = ನಿಲ್ಲು, ಉಪವಿಶನ್ = ಕುಳಿತು
ಕೊಳ್ಳುತ್ತ ಶಯಾನಃ ವಾ – ಮಲಗುತ್ತ ಅನ್ಯಥಾ ಅಪಿ ವಾ ಅಥವಾ ಬೇರೆ ಸ್ಥಿತಿ
ಯಲ್ಲಿ ಇರುತ್ತ ಯಥೇಚ್ಛಯ
ಯಾ- ಸ್ಟೇಚ್ಛೆಯಿಂದ ಸದಾ- ಯಾವಾಗಲೂ ವಸೇತ್
 
ಇರಬೇಕು.
 
೫೨೯]
 
೫೨೭. ವಿದ್ವಾಂಸನೂ ಆತ್ಮಾರಾಮನೂ ಆದ ಮುನಿಯು ನಡೆಯು
ವಾಗಲೂ ನಿಲ್ಲುವಾಗಲೂ ಕುಳಿತುಕೊಳ್ಳುವಾಗಲೂ ಮಲಗುವಾಗಲೂ
ಅಥವಾ ಬೇರೆ ಯಾವ ಸ್ಥಿತಿಯಲ್ಲಿರುವಾಗಲೂ ಸ್ಟೇಚ್ಛೆಯಿಂದ ಯಾವಾ
ಗಲೂ ಇರಬೇಕು.
 
[೧ ಪರತಂತ್ರನಾಗದೆ.]
 
ನ ದೇಶಕಾಲಾಸನದಿಗಮಾದಿ
ಲಕ್ಷಾದಪೇಕ್ಷಾ ಪ್ರತಿಬದ್ಧವೃತ್ತೆಃ ।
ಸಂಸಿದ್ಧ ತತ್ತ್ವಸ್ಯ ಮಹಾತ್ಮನೋsಸ್ತಿ
 
೨೬೩
 
ಸ್ವವೇದನೇ ಕಾ ನಿಯಮಾಪೇಕ್ಷಾ ॥ ೫೨೮ ।
ಅಪ್ರತಿ ಬದ್ಧ ವೃತ್ತೆಃ - ಪ್ರತಿಬಂಧವಿಲ್ಲದ ಬುದ್ಧಿ ವೃತ್ತಿಯುಳ್ಳ ಸಂಸಿದ್ಧ.
ತಸ್ಯ ಆತ್ಮಸ್ವರೂಪವನ್ನು ನಿಶ್ಚಯಪಡಿಸಿಕೊಂಡಿರುವ ಮಹಾತ್ಮನಃ ಮಹಾತ್ಮ
ನಿಗೆ ದೇಶ ಕಾಲ ಆಸನ ದಿಕ್- ಯಮ. ಆದಿ. ಲಕ್ಷ ಆದಿ. ಅಪೇಕ್ಷಾ- ದೇಶ ಕಾಲ
ಆಸನ ದಿಕ್ಕು ಯಮಾದಿಗಳು, ಲಕ್ಷವೇ ಮೊದಲಾದುವು- ಇವುಗಳ ಅಪೇಕ್ಷೆಯು
ನ - ಇರುವುದಿಲ್ಲ; ಸ್ವ.ವೇದನೇ - ಸ್ವಾತ್ಮಸಾಕ್ಷಾತ್ಕಾರಕ್ಕೆ ನಿಯಮಾದಿ ಅಪೇಕ್ಷಾ-
ನಿಯಮಾದಿಗಳ ಅಪೇಕ್ಷೆಯು ಕಾ ಅಸ್ತಿ - ಎಲ್ಲಿಯದು?
 
೫೨೮. ಯಾವ ಪ್ರತಿಬಂಧವೂ ಇಲ್ಲದ ಬುದ್ಧಿ ವೃತ್ತಿಯುಳ್ಳ, ಆತ್ಮ
ಸ್ವರೂಪವನ್ನು ನಿಶ್ಚಯಪಡಿಸಿಕೊಂಡಿರುವ ಮಹಾತ್ಮನಿಗೆ ದೇಶ ಕಾಲ ಆಸನ
ದಿಕ್ಕು ಯಮನಿಯವಾದಿಗಳು ಲಕ್ಷಾದಿಗಳು- ಇವುಗಳ ಅಪೇಕ್ಷೆಯಿರುವು
ದಿಲ್ಲ. ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ನಿಯಮಾದಿಗಳ
ಅಪೇಕ್ಷೆ ಎಲ್ಲಿಯದು?
 
[೧ ಪವಿತ್ರ ಸ್ಥಾನಗಳು, ಹೀಗೆಯೇ ಪವಿತ್ರವಾದ ಕಾಲ.
೨ ಧ್ಯಾನಕ್ಕೆ ಬೇಕಾದ ಲಕ್ಷ್ಮಗಳು.]
 
ಘಟೋsಯಮಿತಿ ವಿಜ್ಞಾತುಂ ನಿಯಮಃ ಕೋ ಪೇತೇ ।
ವಿನಾ ಪ್ರಮಾಣಸುಷ್ಟುತ್ವಂ ಯಸ್ಮಿನ್ನತಿ ಪದಾರ್ಥಧೀಃ ॥ ೫೨೯ ।