This page has been fully proofread once and needs a second look.

೫೨೪. ವಿಕಲ್ಪಶೂನ್ಯನಾದ ಅಖಂಡಜ್ಞಾನಾತ್ಮನಲ್ಲಿ ವಿವಿಧಕಲ್ಪನೆಗಳನ್ನು
ಮಾಡುವುದು ಆಕಾಶದಲ್ಲಿ ನಗರವನ್ನು ಕಲ್ಪಿಸಿದಂತೆ. ಆದುದರಿಂದ ಅದ್ವಯಾ-
ನಂದ ಸ್ವರೂಪದಿಂದ ಯಾವಾಗಲೂ ಪರಮಶಾಂತಿಯನ್ನು ಹೊಂದಿ ಮೌನ-
ವನ್ನು ಸೇವಿಸು.
 
ತೂಷ್ಣೀಮವಸ್ಥಾ ಪರಮೋಪಶಾಂತಿ-
ರ್ಬುದ್ಧೇರಸತ್ಕಲ್ಪ-ವಿಕಲ್ಪ-ಹೇತೋಃ ।
ಬ್ರಹ್ಮಾತ್ಮನಾ ಬ್ರಹ್ಮವಿದೆ ಮಹಾತ್ಮನೋ
ಯತ್ರಾದ್ವಯಾನಂದಸುಖಂ ನಿರಂತರಮ್ ॥ ೫೨೫ ॥
 
ಅಸತ್ಕಲ್ಪ-ವಿಕಲ್ಪ-ಹೇತೋಃ = ಮಿಥ್ಯಾವಿಷಯಗಳ ಕಲ್ಪನೆಗಳಿಗೆ ಕಾರಣ-
ವಾದ, ಬುದ್ಧೇಃ = ಬುದ್ಧಿಗೆ, ಮಹಾತ್ಮನಃ = ಮಹಾತ್ಮನಾದ, ಬ್ರಹ್ಮವಿದಃ = ಬ್ರಹ್ಮ-
ಜ್ಞಾನಿಯ, ಬ್ರಹ್ಮಾತ್ಮನಾ = ಬ್ರಹ್ಮಭಾವದಿಂದ, [ಆಗುವ] ತೂಷ್ಣಿೀಮವಸ್ಥಾ =
ಮೌನವೇ, ಪರಮೋಪಶಾಂತಿಃ = ಪರಮಶಾಂತಿಯು; ಯತ್ರ = ಎಲ್ಲಿ, ನಿರಂತರಂ =
ಯಾವಾಗಲೂ, ಅದ್ವಯಾನಂದಸುಖಂ = ಅದ್ವಯಾನಂದಸುಖವು [ಆಗುತ್ತದೆಯೋ].
 
೫೨೫. ಮಿಥ್ಯಾವಿಷಯಗಳ ಕಲ್ಪನೆಗಳಿಗೆ ಕಾರಣವಾದ ಬುದ್ಧಿಗೆ, ಮಹಾ-
ತ್ಮನಾದ ಬ್ರಹ್ಮಜ್ಞಾನಿಯ ಬ್ರಹ್ಮಭಾವದಿಂದ ಉಂಟಾಗುವ ಮೌನವೇ ಪರ-
ಮೋಪಶಾಂತಿ,. ಅಲ್ಲಿ ನಿರಂತರವೂ ಅದ್ವಯಾನಂದಸುಖವಾಗುತ್ತದೆ.
 
ನಾಸ್ತಿ ನಿರ್ವಾಸನಾನ್ಮೌನಾತ್ ಪರಂ ಸುಖಕೃದುತ್ತಮಮ್ ।
ವಿಜ್ಞಾತಾತ್ಮಸ್ವರೂಪಸ್ಯ ಸ್ವಾನಂದರಸ-ಪಾಯಿನಃ ॥ ೫೨೬ ॥
 
ವಿಜ್ಞಾತ-ಆತ್ಮಸ್ವರೂಪಸ್ಯ = ಆತ್ಮಸ್ವರೂಪವನ್ನು ತಿಳಿದುಕೊಂಡಿರುವ, ಸ್ವ-
ಆನಂದರಸ-ಪಾಯಿನಃ = ಆತ್ಮಾನಂದರಸವನ್ನು ಕುಡಿಯುತ್ತಿರುವವನಿಗೆ, ನಿರ್ವಾಸ-
ನಾತ್ = ಸರ್ವವಾಸನಾರಹಿತವಾದ, ಮೌನಾತ್ = ಮೌನಕ್ಕಿಂತ, ಉತ್ತಮಂ = ಶ್ರೇಷ್ಠ-
ವಾದ, ಸುಖಕೃತ್ = ಸುಖಕರವಾದದ್ದು, ಪರಂ ನ ಅಸ್ತಿ = ಬೇರೊಂದಿಲ್ಲವು.
 
೫೨೬. ಆತ್ಮಸ್ವರೂಪವನ್ನು ತಿಳಿದುಕೊಂಡು ಆತ್ಮಾನಂದರಸವನ್ನು
ಕುಡಿಯುತ್ತಿರುವವನಿಗೆ ಸರ್ವವಾಸನಾರಹಿತವಾದ ಮೌನಕ್ಕಿಂತ ಶ್ರೇಷ್ಠ-
ಸುಖಕರವಾದದ್ದು ಬೇರೊಂದಿಲ್ಲ.
 
ಗಚ್ಛಂಸ್ತಿಷ್ಠನ್ನುಪವಿಶಂಛಯಾನೋ ವಾಽನ್ಯಥಾಽಪಿ ವಾ ।
ಯಥೇಚ್ಛಯಾ ವಸೇದ್ವಿದ್ವಾನಾತ್ಮಾರಾಮಃ ಸದಾ ಮುನಿಃ ॥ ೫೨೭ ॥