This page has not been fully proofread.

ವಿವೇಕಚೂಡಾಮಣಿ
 
[೫೦೮
 
ಯಂ
 
ಲೌಲ್ಯ= ಪ್ರತಿಬಿಂಬದ ಚಾಂಚಲ್ಯವನ್ನು
ರವಿವತ್- ಸೂರ್ಯನಂತೆ ವಿನಿ
ನಿಷ್ಕ್ರಿಯನಾದ ಸ್ವಬಿಂಬಭೂತಂ = ತಮ್ಮ ಬಿಂಬವಾದ [ಆತ್ಮನಿಗೆ] ನಯಂತಿ -
ಸೇರಿಸುತ್ತಾರೆ; ಕರ್ತಾ ಅಸ್ಮಿ- ಕರ್ತವಾಗಿದ್ದೇನೆ, ಭೋಕ್ತಾ ಅಸ್ಮಿ- ಭೋಕ್ಷ್ಯ
ವಾಗಿದ್ದೇನೆ, ಹಾ ಹತಃ ಅಸ್ಮಿ= ಅಯ್ಯೋ ಸತ್ತೆನು! ಇತಿ ಎಂದು (ತಿಳಿಯುತ್ತಾರೆ).]
 
೨೫೪
 
೫೦೭. ಉಪಾಧಿಯು ಅಲುಗಾಡಿದಾಗ ಅದರಲ್ಲಿ ಪ್ರತಿಬಿಂಬಿಸಿರು
ವುದೂ ಚಲಿಸುತ್ತದೆ. ಮಢಬುದ್ಧಿಯುಳ್ಳವರು ಈ ಚಾಂಚಲ್ಯವನ್ನು
ಸೂರ್ಯನಂತೆ ನಿಷ್ಕ್ರಿಯನಾದ ತಮ್ಮ ಬಿಂಬವಾದ ಆತ್ಮನಿಗೆ ಸೇರಿಸುತ್ತಾರೆ.
'ನಾನು ಕರ್ತವು, ನಾನು ಭೋವು, ಅಯ್ಯೋ ನಾನು ಸತ್ತೆನು!" ಎಂದು
ಭಾವಿಸುತ್ತಾರೆ.
 
[೧ ಸೂರ್ಯನು ಪ್ರತಿಬಿಂಬಿಸಿರುವ ನೀರೇ ಉಪಾಧಿಯು. ನೀರು ಅಲುಗಾಡಿ
ದಾಗ ಸೂರ್ಯನ ಪ್ರತಿಬಿಂಬವೂ ನೀರಿನೊಂದಿಗೆ ಅಲುಗಾಡುತ್ತದೆ, ಆದರೆ ಸೂರ್ಯ
ನಿಗೆ ಈ ಅಲುಗಾಟವಿಲ್ಲ. ಇದನ್ನು ಕಂಡ
ಯಾವನೋ ಮೂಢಬುದ್ಧಿಯ
ಸೂರ್ಯನೇ ಚಲಿಸುತ್ತಾನೆಂದು ಭಾವಿಸಿಕೊಳ್ಳಬಹುದು. ಹೀಗೆಯೇ ಬುದ್ಧಿಯ
ವೃತ್ತಿಗಳಲ್ಲಿ ಪ್ರತಿಬಿಂಬಿಸಿರುವ ಆತ್ಮನಿಗೆ ವೃತ್ತಿಗಳ ಚಾಂಚಲ್ಯವನ್ನು ಮೂಢಬುದ್ಧಿ
ಗಳು ಆರೋಪಿಸುತ್ತಾರೆ.
 
ಯು
 
೨ ಇದು ಅಜ್ಞಾನಿಗಳ ಗೋಳಾಟ.]
 
ಜಲೇ ವಾsಪಿ ಸ್ಥಲೇ ವಾಪಿ ಲುಠಷ ಜಡಾತ್ಮಕಃ ।
ನಾಹಂ ವಿಲಿಪೈ ತದ್ಧರ್ಮೆಘ್ರಟಧರ್ಮೆನ್ರಭೋ
 
ಯಥಾ ॥೫೦೮॥
 
ಜಡಾತ್ಮಕಃ = ಜಡಸ್ವರೂಪವಾದ ಏಷಃ - ಈ ದೇಹವು ಜಲೇ ನಾ ಅಪಿ =
ನೀರಿನಲ್ಲಿ ಯಾದರೂ ಸ್ಥಲೇ ವಾ ಅಪಿ = ನೆಲದ ಮೇಲಾದರೂ ಲುಠತು = ಬೀಳಲಿ;
ಘಟಧರ್ಮೆಃ – ಗಡಿಗೆಯ ಧರ್ಮಗಳಿಂದ ನಭಃ ಯಥಾ - ಆಕಾಶವು ಹೇಗೋ
ಹಾಗೆ, ಅಹಂ – ನಾನು ತದ್ಧ ಮೆ – ಆ ಧರ್ಮಗಳಿಂದ ನ ವಿಲಿಪೈ - ಅಪ್ತನಾಗು
ವುದಿಲ್ಲ.
 
HOS. ಈ ಜಡಸ್ವರೂಪವಾದ ದೇಹವು ನೀರಿನಲ್ಲಿಯಾದರೂ ನೆಲದ
ಮೇಲಾದರೂ ಬೀಳಲಿ! ಗಡಿಗೆಯ ಧರ್ಮಗಳು ಆಕಾಶಕ್ಕೆ ಅಂಟಿದಿರುವಂತೆ
ಈ ಶರೀರಧರ್ಮಗಳು ನನಗೆ ಅಂಟುವುದಿಲ್ಲ.
 
[ಗಡಿಗೆಯಲ್ಲಿ ಅವಚ್ಛಿನ್ನವಾಗಿರುವಂತೆ ಕಾಣುವ ಆಕಾಶವು ಬಾಹ್ಯಾಕಾಶದೊಂದಿಗೆ
ಏಕವಾಗಿದೆ; ಗಡಿಗೆಯು ಒಡೆಯಲಿ ಒಡೆಯದಿರಲಿ ಆಕಾಶಕ್ಕೆ ಯಾವ ಭೇದವೂ
ಉಂಟಾಗುವುದಿಲ್ಲ. ಆತ್ಮನಿಗೆ ಶರೀರದೊಂದಿಗೆ ಸಂಬಂಧವುಂಟಾದಂತೆ ಕಂಡು
ಆಗುವುದಿಲ್ಲ.)
 
ಬಂದರೂ ಅವನ ನಿರಂಜನತ್ವಕ್ಕೆ ಯಾವ ಹಾನಿಯೂ