This page has not been fully proofread.

ವಿವೇಕಚೂಡಾಮಣಿ
 
ವಶಪಡಿಸಿಕೊಳ್ಳಬೇಕು' ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ ।
ತತಸ್ತತೋ ನಿಯ ತದಾತ್ಮವ ವಶಂ ನಯೇತ್ ॥ ಎಂದು ಗೀತೆಯಲ್ಲಿ
(೬, ೨೬) ಹೇಳಿರುವಂತೆ ಶವಾವಸ್ಥೆಯಲ್ಲಿಯೇ ಸಂಕಲ್ಪ-ವಿಕಲ್ಪಾತ್ಮಕವಾದ ಮನ
ಇನ್ನು ಬ್ರಹ್ಮದಲ್ಲಿ ಸ್ಥಿರಗೊಳಿಸಲು ವಿಶೇಷವಾಗಿ ಪ್ರಯತ್ನ ಪಡಬೇಕು.
 
ಮನಸ್ಸು ಬಯಸಿದ ವಸ್ತುಗಳನ್ನು ಲಾಲನೆ ಮಾಡುವುದು ಸಮಾಧಾನವಲ್ಲ.]
 
೨೮]
 
೧೫
 
ಅಹಂಕಾರಾದಿ.
 
ಅಹಂಕಾರಾದಿ-ದೇಹಾಂತಾನ್ ಬಂಧಾನಜ್ಞಾನಕಲ್ಪಿತಾನ್ ।
ಸ್ವಸ್ವರೂಪಾವಬೋಧೇನ ಮೋಕು ಮಿಚ್ಛಾ ಮುಮುಕ್ಷು ತಾ ॥ ೨೭ ॥
ಅಜ್ಞಾನ ಕಲ್ಪಿತಾನ್ ಅಜ್ಞಾನದಿಂದ ಕಲ್ಪಿತವಾದ
ದೇಹಾಂತಾನ್ - ಅಹಂಕಾರದಿಂದ ಪ್ರಾರಂಭಿಸಿ ಶರೀರದ ವರೆಗಿರುವ ಬಂಧಾನ್ -
ಬಂಧಗಳನ್ನು ಸ್ವಸ್ವರೂಪಾವಬೋಧನ - ತನ್ನ ನಿಜವಾದ ಆತ್ಮಸ್ವರೂಪದ ಜ್ಞಾನ
ದಿಂದ ಮೋಕುಂ = ಬಿಡಿಸಿಕೊಳ್ಳುವುದಕ್ಕೆ ಇಚ್ಛಾ - ಇಚ್ಛೆಯು ಮುಮುಕ್ಷುತಾ
ಮುಮುಕ್ಷುತ್ವವು.
 
೨೭. ಅಹಂಕಾರದಿಂದ ಪ್ರಾರಂಭಿಸಿ ತನ್ನ ಶರೀರದ ವರೆಗಿರುವ
ಅಜ್ಞಾನದಿಂದ ಕಲ್ಪಿತವಾದ ಕಟ್ಟುಗಳನ್ನು ತನ್ನ ನಿಜವಾದ ಆತ್ಮಸ್ವರೂಪದ
ಜ್ಞಾನದಿಂದ ಬಿಡಿಸಿಕೊಳ್ಳಬೇಕೆಂಬ ಇಚ್ಛೆಯು ಮುಮುಕ್ಷುತ್ವವೆನಿಸುತ್ತದೆ.
 
[೧ ಎಲ್ಲವೂ ಆತ್ಮನೇ ಆಗಿರುವಾಗ ಆತ್ಮನಿಗಿಂತ ಭಿನ್ನವಾಗಿ ಕಂಡುಬರುವ ಯಾವ
ವಸ್ತುವನ್ನೂ ಬಯಸದಿರುವುದರಿಂದ ಬಂಧನಿವೃತ್ತಿಯು ಆತ್ಯಂತಿಕವು ಎಂದರ್ಥ.)
 
ಮಂದ-ಮಧ್ಯಮ-ರೂಪಾಽಪಿ ವೈರಾಗ್ಯಣ ಶಮಾದಿನಾ ।
ಪ್ರಸಾದೇನ ಗುರೋಯಂ ಪ್ರವೃದ್ಧಾ ಸೂಯತೇ
 
ಫಲಮ್ ॥ ೨೮ ।
ಮಂದ ಮಧ್ಯಮರೂಪಾ
 
=
 
ಸಾ ಇಯಂ - ಆ ಈ [ಮುಮುಕ್ಷುತ್ವವು]
ಅಪಿ=ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ರೂ ವೈರಾಗೈಣ ವೈರಾಗ್ಯದಿಂದಲೂ ಶಮಾ
ದಿನಾ - ಶಮದಮಾದಿ ಸಾಧನದಿಂದಲೂ ಗುರೋಃ = ಗುರುವಿನ ಪ್ರಸಾದೇನ -
ಅನುಗ್ರಹದಿಂದಲೂ ಪ್ರವೃದ್ಧಾ - ಪ್ರಬಲವಾಗಿ ಫಲಂ = ಫಲವನ್ನು ಸೂಯತೇ-
ಉಂಟುಮಾಡುತ್ತದೆ.
 
೨೮. ಆ ಈ ಮುಮುಕ್ಷುತ್ವವು ಮಂದ ಮಧ್ಯಮಸ್ಥಿತಿಯಲ್ಲಿದ್ದರೂ
ವೈರಾಗ್ಯದಿಂದಲೂ ಶಮದಮಾದಿ ಸಾಧನದಿಂದಲೂ ಗುರುವಿನ ಅನುಗ್ರಹ
ದಿಂದಲೂ ಪ್ರಬಲವಾಗಿ (ಮೋಕ್ಷರೂಪವಾದ) ಫಲವನ್ನು ಉಂಟುಮಾಡು
ಇದೆ.