This page has been fully proofread once and needs a second look.

೪೭೦. ವಿಷಯೇಚ್ಛೆಗಳನ್ನು ತೊರೆದು, ಭೋಗಗಳನ್ನು ತ್ಯಜಿಸಿ, ಶಾಂತ-
ರಾಗಿ, ಇಂದ್ರಿಯಗಳನ್ನು ಪೂರ್ಣವಾಗಿ ನಿಗ್ರಹಿಸಿದ ಮಹನೀಯರಾದ ಯತಿ-
ಗಳು ಈ ಪರತತ್ತ್ವವನ್ನು ತಿಳಿದುಕೊಂಡು, ಕಡೆಗೆ ಆತ್ಮಜ್ಞಾನ ಪ್ರಸಾದದಿಂದ
ಪರಮಾನಂದವನ್ನೇ ಹೊಂದಿರುತ್ತಾರೆ.
 
ಭವಾನಪೀದಂ ಪರತತ್ತ್ವಮಾತ್ಮನಃ
ಸ್ವರೂಪಮಾನಂದಘನಂ ವಿಚಾರ್ಯ ।
ವಿಧೂಯ ಮೋಹಂ ಸ್ವಮನಃಪ್ರಕಲ್ಪಿತಂ
ಮುಕ್ತಃ ಕೃತಾರ್ಥೋ ಭವತು ಪ್ರಬುದ್ಧಃ ॥ ೪೭೧ ॥
 
ಭವಾನ್ ಅಪಿ = ನೀನು ಕೂಡ, ಆತ್ಮನಃ = ಆತ್ಮನ, ಸ್ವರೂಪಂ = ಸ್ವರೂಪವಾದ,
ಆನಂದಘನಂ = ಆನಂದಘನವಾದ, ಪರತತ್ತ್ವಂ = ಪರತತ್ತ್ವವನ್ನು, ವಿಚಾರ್ಯ =
ವಿವೇಚಿಸಿ, ಸ್ವ-ಮನಃ-ಪ್ರಕಲ್ಪಿತಂ = ನಿನ್ನ ಮನಸ್ಸಿನಲ್ಲಿ ಕಲ್ಪಿತವಾಗಿರುವ, ಮೋಹಂ =
ಮೋಹವನ್ನು, ವಿಧೂಯ = ಕೊಡವಿಕೊಂಡು, ಪ್ರಬುದ್ಧಃ = ಜ್ಞಾನಿಯಾಗಿ, ಮುಕ್ತಃ =
ಮುಕ್ತನಾಗಿ, ಕೃತಾರ್ಥಃ ಭವತು = ಕೃತಾರ್ಥನಾಗು.
 
೪೭೧. ನೀನು ಕೂಡ ಈ ಆತ್ಮನ ಸ್ವರೂಪವಾಗಿರುವ ಆನಂದಘನವಾದ
ಪರತತ್ತ್ವವನ್ನು ವಿವೇಚಿಸಿ, ನಿನ್ನ ಮನಸ್ಸಿನಲ್ಲಿ ಕಲ್ಪಿತವಾಗಿರುವ ಮೋಹ-
ವನ್ನು ಕೊಡವಿಕೊಂಡು, ಜ್ಞಾನಿಯೂ ಮುಕ್ತನೂ ಆಗಿ ಕೃತಾರ್ಥನಾಗು.
 
ಸಮಾಧಿನಾ ಸಾಧು ವಿನಿಶ್ಚಲಾತ್ಮನಾ
ಪಶ್ಯಾತ್ಮತತ್ತ್ವಂ ಸ್ಫುಟಬೋಧ-ಚಕ್ಷುಷಾ ।
ನಿಃಸಂಶಯಂ ಸಮ್ಯಗವೇಕ್ಷಿತಶ್ಚೇ -
ಚ್ಛ್ರುತಃ ಪದಾರ್ಥೋ ನ ಪುನರ್ವಿಕಲ್ಪ್ಯತೇ ॥ ೪೭೨ ॥
 
ಸಾಧು = ಚೆನ್ನಾಗಿ, ವಿನಿಶ್ಚಲ-ಆತ್ಮನಾ = ನಿಶ್ಚಲವಾದ ಮನಸ್ಸಿನಿಂದ ಕೂಡಿ-
ರುವ, ಸಮಾಧಿನಾ = ಸಮಾಧಿಯಿಂದ, ಸ್ಫುಟ-ಬೋಧ-ಚಕ್ಷುಷಾ = ಸ್ಪುಟವಾದ
ಜ್ಞಾನದೃಷ್ಟಿಯಿಂದ, ಆತ್ಮತತ್ತ್ವಂ = ಆತ್ಮತತ್ತ್ವವನ್ನು, ಪಶ್ಯ= ಸಾಕ್ಷಾತ್ಕರಿಸು; ಶ್ರುತಃ =
ಶ್ರವಣಮಾಡಿದ, ಪದಾರ್ಥಃ = ಪದಾರ್ಥವು, ಸಮ್ಯಕ್ = ಚೆನ್ನಾಗಿ, ನಿಃಸಂಶಯಂ =
ಸಂಶಯವಿಲ್ಲದೆ, ಅವೇಕ್ಷಿತಃ ಚೇತ್ = ಗ್ರಹಿಸಲ್ಪಟ್ಟರೆ, ಪುನಃ = ಮತ್ತೆ, ನ ವಿಕಲ್ಪ್ಯತೇ =
ಸಂಶಯವನ್ನುಂಟುಮಾಡುವುದಿಲ್ಲ.
 
೪೭೨. ಚೆನ್ನಾಗಿ ನಿಶ್ಚಲವಾದ ಮನಸ್ಸಿನಿಂದ ಕೂಡಿದ ಸಮಾಧಿಯಿಂದ
ಸ್ಫುಟವಾದ ಜ್ಞಾನದೃಷ್ಟಿಯ ಮೂಲಕ ಆತ್ಮತತ್ತ್ವವನ್ನು ಸಾಕ್ಷಾತ್ಕರಿಸು.