This page has not been fully proofread.

[ချိုး
 
ತಿಳಿದುಕೊಂಡು ತನ್ಮಯತೆಯಿಂದಲೇ ಯಾವಾಗಲೂ ಇರುವರೋ ಅವರಿಗೆ
ಈ ಮೂರು ಬಗೆಯ ಕರ್ಮವೂ ಸ್ವಲ್ಪವಾದರೂ ಇರುವುದಿಲ್ಲ; ಏಕೆಂದರೆ
ಅವರು ನಿರ್ಗುಣವಾದ ಬ್ರಹ್ಮವೇ ಆಗಿರುತ್ತಾರೆ.
[೧ ಬ್ರಹ್ಮಾತ್ಮಭಾವದಿಂದಲೇ.]
 
೨೩೦
 
ವಿವೇಕಚೂಡಾಮಣಿ
 
ಉಪಾಧಿ-ತಾದಾತ್ಮ-ವಿಹೀನ-ಕೇವಲ-
ಬ್ರಹ್ಮಾತ್ಮನೈವಾತ್ಮನಿ ತಿಷ್ಠತೋ
ಪ್ರಾರಬ್ಧ-ಸದ್ಭಾವ-ಕಥಾ ನ ಯುಕ್ತಾ
 
ಮುನೇ… ।
 
ಸ್ವಪ್ರಾರ್ಥ-ಸಂಬಂಧ-ಕಥೇವ ಜಾಗ್ರತಃ ॥ ೪೫೩ ॥
ಉಪಾಧಿ ತಾದಾತ್ಮ - ವಿಹೀನ ಕೇವಲ. ಬ್ರಹ್ಮ, ಆತ್ಮನಾ ಏ ವ = ಉಪಾಧಿ
ಗಳೊಂದಿಗೆ ತಾದಾತ್ಮವಿಲ್ಲದೆ ಕೇವಲ ಬ್ರಹ್ಮಭಾವದಿಂದಲೇ ತಿಷ್ಠತಃ = ಇರುತ್ತಿರುವ
ಮುನೇಃ-ಮುನಿಗೆ-ಜಾಗ್ರತಃ- ಎಚ್ಚತ್ತಿರುವವನಿಗೆ ಸ್ವಪ್ನ, ಅರ್ಥ- ಸಂಬಂಧ ಕಥಾ
ಇವ - ಸ್ವಪ್ನದ ವಿಷಯಗಳ ಸಂಬಂಧದ ಮಾತು ಹೇಗೋ ಹಾಗೆ ಪ್ರಾರಬ್ಧ-
ಸದ್ಭಾವ ಕಥಾ - ಪ್ರಾರಬ್ಧವಿದೆಯೆಂಬ ಮಾತು ನ ಯುಕ್ತಾ - ಯುಕ್ತವಲ್ಲ.
 
೪೫೩. ಉಪಾಧಿಗಳೊಂದಿಗೆ ತಾದಾತ್ಮವಿಲ್ಲದೆ ಕೇವಲ ಬ್ರಹ್ಮಭಾವ
ದಿಂದಲೇ ಇರುತ್ತಿರುವ ಮುನಿಗೆ ಎಚ್ಚತ್ತಿರುವವನಿಗೆ ಸ್ವಪ್ನದಲ್ಲಿ ಕಂಡ
ವಿಷಯಗಳ ಸಂಬಂಧವಿದೆಯೆಂಬ ಮಾತು ಹೇಗೆ ಯುಕ್ತವಲ್ಲವೊ ಹಾಗೆ
ಪ್ರಾರಬ್ಧವಿದೆಯೆಂಬ ಮಾತು ಯುಕ್ತವಲ್ಲ.
 
ನ ಹಿ ಪ್ರಬುದ್ಧ ಪ್ರತಿಭಾಸ-ದೇಹೇ
ದೇಹೋಪಯೋಗಿನ್ಯಪಿ ಚ ಪ್ರಪಂಚೇ ।
ಕರೋತ್ಕಹಂತಾಂ ಮಮತಾವಿದಂತಾಂ
ಕಿಂತು ಸ್ವಯಂ ತಿಷ್ಠತಿ ಜಾಗರೇಣ
 
॥ ೪೫೪ ॥
 
ಪ್ರಬುದ್ಧಃ - ಎಚ್ಚತ್ತಿರುವವನು ಪ್ರತಿಭಾಸದೇಹ - [ಸ್ವಪ್ನದಲ್ಲಿ ತೋರಿದ
ದೇಹದಲ್ಲಾಗಲಿ ಅಪಿ ಚ = ಮತ್ತು ದೇಹ- ಉಪಯೋಗಿನಿ = ಆ ದೇಹಕ್ಕೆ ಉಪ
ಯೋಗವಾದ ಪ್ರಪಂಚ - ವಿಷಯವಸ್ತುವಿನಲ್ಲಾಗಲಿ ಅಹಂತಾಂ- 'ನಾನು' ಎಂಬ
ಭಾವನೆಯನ್ನು ಮಮತಾಂ - 'ನನ್ನದು' ಎಂಬ ಭಾವನೆಯನ್ನು ಇದಂತಾಂ-
'ಇದು' ಎಂಬ ಭಾವನೆಯನ್ನು ನ ಹಿ ಕರೋತಿ - ಮಾಡುವುದಿಲ್ಲ; ಕಿಂ ತು
ಮತ್ತೇನೆಂದರೆ ಸ್ವಯಂ ತಾನು ಜಾಗರೇಣ ತಿಷ್ಠತಿ - ಎಚ್ಚತ್ತಿರುತ್ತಾನೆ.
 
೪೫೪. (ಸ್ವಪ್ನದಿಂದ) ಎಚ್ಚತ್ತಿರುವವನು (ಸ್ವಪ್ನದಲ್ಲಿ) ತೋರಿದ ದೇಹ
ದಲ್ಲಾಗಲಿ ಅದಕ್ಕೆ ಉಪಯೋಗವಾದ ವಿಷಯವಸ್ತುವಿನಲ್ಲಾಗಲಿ 'ನಾನು'