This page has not been fully proofread.

ವಿವೇಕಚೂಡಾಮಣಿ
 
[೨೫
 
ಮನಸ್ಸಿನಲ್ಲಿ ಕೊರಗದೆ ಮತ್ತು ಶೋಕಿಸದೆ ಸಹಿಸಿಕೊಂಡಿರುವುದನ್ನೇ ತಿತಿಕ್ಷೆ
ಎಂದು ಹೇಳುತ್ತಾರೆ.
 
ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯ ಬುದ್ಧವಧಾರಣಮ್ ।
ಸಾ ಶ್ರದ್ಧಾ ಕಥಿತಾ ಸರ್ಯಯಾ ವಸ್ತೂ ಪಲಭ್ಯತೇ
 
। ೨೫ ॥
 
ಶಾಸ್ತ್ರಸ್ಯ ಶಾಸ್ತ್ರವನ್ನು ಗುರುವಾಕ್ಯ ಗುರುವಾಕ್ಯವನ್ನು ಸತ್ಯ ಬುದ್ಧ ನ.
ಧಾರಣಂ - ಸತ್ಯವೆಂಬ ಬುದ್ಧಿಯಿಂದ ನಿಶ್ಚಯಿಸುವುದು [ಯಾವುದೋ], ಯಯಾ
ಯಾವುದರಿಂದ ವಸ್ತು - ಬ್ರಹ್ಮವಸ್ತುವು ಉಪಲಭ್ಯತೇ - ಹೊಂದಲ್ಪಡುತ್ತದೆಯೋ
ಸಾ - ಅದು ಶ್ರದ್ಧಾ - ಶ್ರದ್ಧೆಯೆಂದು ಸದ್ದಿತಿ - ಸಾಧುಗಳಿಂದ ಕಥಿತಾ ಹೇಳಲ್ಪಟ್ಟಿದೆ.
ಶಾಸ್ತ್ರ ಮತ್ತು ಗುರು ಉಪದೇಶಿಸುವ ವೇದಾಂತವಾಕ್ಯ-ಇವು
ಮನಸ್ಸಿನಲ್ಲಿ ನಿರ್ಧರಿಸಿಕೊಳ್ಳುವುದು ಶ್ರದ್ದೆ
ಎಂದು ಸಾಧುಗಳು ಹೇಳುತ್ತಾರೆ. ಇದು ಬ್ರಹ್ಮಸಾಕ್ಷಾತ್ಕಾರಕ್ಕೆ ಸಾಧನ
 
೨೫.
ಸತ್ಯವೆಂಬ
 
ಬುದ್ಧಿಯಿಂದ
 
ವಾಗಿರುವುದು.
 
(೧ ಇದು ಅಂಧಶ್ರದ್ಧೆಯಲ್ಲ, ದೃಢವಾದ ವಿಶ್ವಾಸ, ಇಂಥ ದೃಢ ವಿಶ್ವಾಸವಿಲ್ಲದೆ
ಶಾಸ್ತ್ರಾಚಾರ್ಯರ ಉಪದೇಶವನ್ನು ಅನುಷ್ಠಿಸಲು ಸಾಧ್ಯವಾಗುವುದಿಲ್ಲ.
 
* ಈ
 
ಧರ್ಮದಲ್ಲಿ ಶ್ರದ್ಧೆಯಿಲ್ಲದಿರುವ ಮನುಷ್ಯರು ನನ್ನನ್ನು ಹೊಂದದೆ ಮೃತ್ಯು ಸಂಸಾರದ
ಮಾರ್ಗಕ್ಕೆ ಹಿಂತಿರುಗುತ್ತಾರೆ' ಅಶ್ರದ್ಧ ಧಾನಾಃ ಪುರುಷಾ ಧರ್ಮಸ್ಯಾಸ ಪರಂತಪ
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯು ಸಂಸಾರವರ್ತನಿ । ಎಂದು ಗೀತೆಯಲ್ಲಿ
 
(೯, ೩.) ಹೇಳಿದೆ.]
 
ಸಮ್ಯಗಾಸ್ಥಾಪನಂ ಬುದ್ಧಃ ಶುದ್ಧ ಬ್ರಹ್ಮಣಿ ಸರ್ವದಾ ।
ತತ್ ಸಮಾಧಾನಮಿತ್ಯುಕ್ತಂ ನ ತು ಚಿತ್ತಸ್ಯ ಲಾಲನಮ್ ॥ ೨೬ ॥
 
2
 
ಶುದ್ಧ ಬ್ರಹ್ಮಣಿ – ಶುದ್ಧ ಬ್ರಹ್ಮದಲ್ಲಿ ಸರ್ವದಾ-ಯಾವಾಗಲೂ ಬುದ್ಧ
ಬುದ್ಧಿಯನ್ನು ಸಮ್ಯ ಕ್ ಆಸ್ಥಾಪನಂ– ಚೆನ್ನಾಗಿ ನೆಲೆಗೊಳಿಸುವುದು [ಯಾವುದೋ]
ತತ್- ಅದು ಸಮಾಧಾನಂ ಇತಿ = ಸಮಾಧಾನವೆಂದು ಉಕ್ತಂ = ಹೇಳಲ್ಪಟ್ಟಿದೆ;
ಚಿತ್ತಸ್ಯ - ಮನಸ್ಸಿನ ಲಾಲನಂ = ಲಾಲನೆಯು ನ ತು ಅಲ್ಲ.
 
H
 
೨೬, ಶುದ್ಧ ಬ್ರಹ್ಮದಲ್ಲಿ ಬುದ್ಧಿಯನ್ನು ಯಾವಾಗಲೂ ಚೆನ್ನಾಗಿ ಸ್ಥಿರ
ಗೊಳಿಸುವುದೇ ಸಮಾಧಾನವೆಂದು ಹೇಳಲ್ಪಟ್ಟಿದೆ; ಮನಸ್ಸಿನ ಲಾಲನೆಯು
ಸಮಾಧಾನವಲ್ಲ.
 
[೧' ಚಂಚಲವೂ ಅಸ್ಥಿರವೂ ಆದ ಮನಸ್ಸು ಯಾವ ಯಾವ ವಿಷಯದಿಂದ
ಹೊರಕ್ಕೆ ಬರುವುದೋ ಆಯಾ ವಿಷಯದಿಂದ ಮನಸ್ಸನ್ನು ನಿಗ್ರಹಿಸಿ ಆತ್ಮನಲ್ಲಿಯೇ