This page has not been fully proofread.

ವಿವೇಕಚೂಡಾಮಣಿ
 
೪೩೮. ಯಾವನು ಜೀವ ಮತ್ತು ಬ್ರಹ್ಮ- ಇವರಲ್ಲಾಗಲಿ, ಬ್ರಹ್ಮ
ಮತ್ತು ಜಗತ್ತು-ಇವುಗಳಲ್ಲಾಗಲಿ ಯಧಾರ್ಥದೃಷ್ಟಿಯಿಂದ ಭೇದವನ್ನು ಕಾಲ
ತ್ರಯದಲ್ಲಿಯೂ ಅರಿಯುವುದಿಲ್ಲವೋ ಅವನು ಜೀವನ್ಮುಕ್ತನು ಎನಿಸುವನು.
ಸಾಧುಭಿಃ ಪೂಜ್ಯ ಮಾನೇಸ್ಮಿನ್ ಪೀಡ ಮಾನೇsಪಿ ದುರ್ಜನೈಃ 1
ಸಮಭಾವೋ ಭವೇದ್ಯಸ್ಯ ಸ ಜೀವನ್ಮುಕ್ತ ಇಷ್ಯತೇ
 
॥ ೪೩೯ ॥
 
១១ខ
 
[೪೩೯
 
ಅಸ್ಮಿನ್ [ಶರೀ ರೇ] - ಈ ಶರೀರವು ಸಾಧುಭಿಃ - ಸಾಧುಗಳಿಂದ ಪೂಜ್ಯ -
ಮಾನೇ - ಗೌರವಿಸಲ್ಪಟ್ಟರೂ, ದುರ್ಜನೈಃ = ದುಷ್ಟರಿಂದ ಪೀಡ್ ಮಾನೇ ಅಪಿ
ಪೀಡಿಸಲ್ಪಟ್ಟರೂ ಯಸ್ಯ- ಯಾವನಿಗೆ ಸಮಭಾವಃ ಭವೇತ್ ಸಮಭಾವವಿರು
ವುದೊ ಸಃ ಜೀವನ್ಮುಕ್ತಃ ಇಷ್ಯತೇ
 
೪೩೯. ಸಾಧುಗಳು ಈ ಶರೀರವನ್ನು ಗೌರವಿಸಲಿ ಅಥವಾ ದುಷ್ಟರು
ಪೀಡಿಸಲಿ, ಯಾವನಿಗೆ ಸಮಭಾವವಿರುವುದೊ ಅವನು ಜೀವನ್ಮುಕ್ತನು
 
ಎನಿಸುವನು.
 
ಯತ್ರ ಪ್ರವಿಷ್ಟಾ ವಿಷಯಾಃ ಪರೇರಿತಾ
ನದೀಪ್ರವಾಹಾ ಇವ ವಾರಿರಾಶ್ ।
ಲೀಯಂತಿ ಸನ್ಮಾತ್ರತಯಾ ನ ವಿಕ್ರಿಯಾ-
ಮುತ್ಪಾದಯಂತೋಷ ಯತಿರ್ವಿಮುಕ್ತ
 
॥ ೪೪೦ ॥
 
ಪರ. ಈರಿತಾಃ=ಇತರರಿಂದ ಪ್ರೇರಿತವಾದ ವಿಷಯಾಃ = ವಿಷಯಗಳು ಯತ್ರ-
ಯಾವನಲ್ಲಿ ಪ್ರತಿಷ್ಟಾಃ- ಪ್ರವೇಶಿಸಿದವುಗಳಾಗಿ ನಾರಿರಾಶ್- ಸಮುದ್ರದಲ್ಲಿ [ಪ್ರವೇಶಿ
ಸಿದ' ನದೀ ಪ್ರವಾಹಾಃ ಇವ = ನದೀಪ್ರವಾಹಗಳ ಹಾಗೆ ಸನ್ಮಾತ್ರತಯಾ= ಬ್ರಹ್ಮಾ
- ಭಾವನೆಯಿಂದ ಲೀಯಂತಿ . ಲಯವಾಗುವುವೋ, ವಿಕ್ರಿಯಾಂ = ವಿಕಾರ
ವನ್ನು ನ ಉತ್ಪಾದಯಂತಿ = ಉಂಟುಮಾಡುವುದಿಲ್ಲವೋ ಏಷಃ ಯತಿಃ = ಈ
ಯತಿಯೇ ವಿಮುಕ್ತಃ - ಮುಕ್ತನು.
 
ဝ. ಇತರರಿಂದ ಪ್ರೇರಿತವಾಗಿ ಬರುವ ವಿಷಯಗಳು ಪ್ರವೇಶಿಸಿ
ಸಮುದ್ರವನ್ನು ಪ್ರವೇಶಿಸಿದ ನದೀಪ್ರವಾಹಗಳಂತೆ ಬ್ರಹಾಕ್ಯಭಾವನೆ
ಯಿಂದ ಯಾವ ಯತಿಯಲ್ಲಿ ಲಯವಾಗುವುವೋ ಮತ್ತು ಯಾವ ವಿಕಾರ
ವನ್ನೂ ಉಂಟುಮಾಡುವುದಿಲ್ಲವೋ ಅವನೇ ಮುಕ್ತನು.
 
ಜೀವನ್ಮುಕ್ತನು ಸ್ವತಃ ಬಹಿರ್ಮುಖನಾಗದಿದ್ದರೂ, ಇತರರು ಮಾಡುವ ಸ್ತುತಿ-
ನಿಂದೆಗಳು ಮತ್ತೊಬ್ಬರ ದೃಷ್ಟಿಯಿಂದ ಒಳ್ಳೆಯದು ಕೆಟ್ಟದು ಎನಿಸಿದ್ದರೂ-ಇವನಲ್ಲಿ
ಯಾವ ವಿಕಾರವನ್ನೂ ಉಂಟುಮಾಡದೆ ಅಡಗಿಹೋಗುವುವು. ಗೀತಾ ೨. ೭೦ ನೋಡಿ.]