This page has not been fully proofread.

ವಿವೇಕಚೂಡಾಮಣಿ
 
[မှး
 
ಸ್ವರೂಪವಾದ ಬ್ರಹ್ಮದಲ್ಲಿ ವೃತ್ತಿಯನ್ನು ಲಯಮಾಡಿಕೊಂಡಿರುವ ತತ್ತ್ವ
ಜ್ಞಾನಿಯು ಮತ್ತೆ ಅದನ್ನು ನೋಡುವುದಿಲ್ಲ.
 
[೧ ಗೋವಿನ ಕೊರಳಿಗೆ ಯಾರಾದರೂ ಮಾಲೆಯನ್ನು ಹಾಕಿದರೆ ಅದು ತೀರ
ಉದಾಸೀನವಾಗಿರುವಂತೆ ಬ್ರಹ್ಮಜ್ಞಾನಿಯು ತನ್ನ ಶರೀರದ ವಿಷಯದಲ್ಲಿ ಉದಾಸೀನ
ನಾಗಿರುತ್ತಾನೆ.)
 
೨೧೪
 
ಅಖಂಡಾನಂದಮಾತ್ಮಾನಂ ವಿಜ್ಞಾಯ ಸ್ವಸ್ವರೂಪತಃ ।
ಕಿಮಿಚ್ಛನ್ ಕಸ್ಯ ವಾ ಹೇತೋರ್ದೆಹಂ ಪುಷ್ಣಾತಿ ತತ್ತ್ವವಿತ್
 
॥ ೪೧೬ ॥
 
ತತ್ತ್ವವಿತ್ - ತತ್ತ್ವಜ್ಞಾನಿಯು ಅಖಂಡಾನಂದಂ- ಅಖಂಡಾನಂದ ಸ್ವರೂ
ಪನಾದ ಆತ್ಮಾನಂ-ಆತ್ಮನನ್ನು ಸ್ವ- ಸ್ವರೂಪತಃ ತನ್ನ ಸ್ವರೂಪವೆಂದು ವಿಜ್ಞಾಯ-
ಅರಿತುಕೊಂಡು ಕಿಮ್ ಇಚ್ಛನ್- ಯಾವುದನ್ನು ಬಯಸುವವನಾಗಿ ಕಸ್ಯ ಹೇತೋಃ
ವಾ = ಅಥವಾ ಯಾರ ಪ್ರಯೋಜನಕ್ಕಾಗಿ ದೇಹಂ - ಶರೀರವನ್ನು ಪುಷ್ಪಾತಿ -
ಪೋಷಿಸಿಯಾನು?
 
೪೧೬. ತತ್ತ್ವಜ್ಞಾನಿಯು ಅಖಂಡಾನಂದ ಸ್ವರೂಪನಾದ ಆತ್ಮನನ್ನು
ತನ್ನ ಸ್ವರೂಪವೆಂದೇ ಅರಿತುಕೊಂಡಮೇಲೆ ಯಾವುದನ್ನು ಬಯಸುವವನಾಗಿ,
ಯಾರ ಪ್ರಯೋಜನಕ್ಕಾಗಿ ಈ ದೇಹವನ್ನು ಪೋಷಿಸಿಯಾನು? ೧
 
[೧ 'ಯಾವ ಪ್ರಯೋಜನಕ್ಕಾಗಿ ಶರೀರದ ರೋಗವನ್ನು ಅನುಸರಿಸಿ ದುಃಖಪಡು
ವನು?' ಕಿಮಿಚ್ಛನ್ ಕಸ್ಯ ಕಾಮಾಯ ಶರೀರವನುಸಂಜ್ವರೇತ್ (ಬೃಹದಾರ
ಣ್ಯಕ ಉ. ೪. ೪, ೧೨).]
 
ಸಂಸಿದ್ಧಸ್ಯ ಫಲಂ ತೈತಜೀವನ್ಮುಕ್ತಸ್ಯ ಯೋಗಿನಃ 1
ಬಹಿರಂತಃ ಸದಾನಂದ-ರಸಾಸ್ವಾದನಮಾತ್ಮನಿ
 
॥ ೪೧೭ ॥
 
BUC
 
=
 
ಸಂಸಿದ್ಧ ಸ್ಯ - ಆತ್ಮಜ್ಞಾನನಿಷ್ಠನಾದ ಜೀವನ್ಮುಕ್ತಸ್ಯ - ಜೀವನ್ಮುಕ್ತನಾದ
ಯೋಗಿನಃ ಯೋಗಿಗೆ ಏತತ್ ಫಲಂ= ಇದು ಫಲವು: ಬಹಿಃ ಹೊರಗೂ ಅಂತಃಕ
ಒಳಗೂ ಸದಾ - ಯಾವಾಗಲೂ ಆತ್ಮನಿ - ಮನಸ್ಸಿನಲ್ಲಿ ಆನಂದರಸ ಆಸ್ವಾದನಂ-
ಆನಂದರಸದ ಆಸ್ವಾದನ.
 
೪೧೭. ಆತ್ಮಜ್ಞಾನನಿಷ್ಠನಾದ ಜೀವನ್ಮುಕ್ತನಾದ ಯೋಗಿಗೆ ಇದು
ಫಲವು: ಹೊರಗೂ ಒಳಗೂ ಯಾವಾಗಲೂ ಮನಸ್ಸಿನಲ್ಲಿ ಆನಂದರಸವನ್ನು
ಆಸ್ವಾದಿಸುತ್ತಾನೆ.