This page has not been fully proofread.

೪೧೧]
 
ವಿವೇಕಚೂಡಾಮಣಿ
 
ಉಳ್ಳ ಶಾಶ್ವತಂ = ಶಾಶ್ವತವಾದ ಶಾಂತಂ - ಶಾಂತವಾದ ಏಕಂ
ಪೂರ್ಣ೦ ಬ್ರಹ್ಮ ಸಮಾಧ ಹೃದಿ ಕಲಯತಿ,
 
೨೧೧
 
=
 
- ಅದ್ವಿತೀಯವಾದ
 
೪೦೯, ಮುಪ್ಪಿಲ್ಲದ, ಮರಣವಿಲ್ಲದ, ತೋರ್ಕೆಗಳು ಅಡಗಿಹೋಗಿರುವ
ವಸ್ತುವಿನ ಸ್ವರೂಪವಾಗಿರುವ, ಶಾಂತವಾದ ಸಮುದ್ರದಂತಿರುವ, ನಾಮ
ರಹಿತವಾದ, ನಿರ್ಗುಣವಾದ, ನಿರ್ವಿಕಾರವಾದ, ಶಾಶ್ವತವಾದ, ಶಾಂತವಾದ,
ಅದ್ವಿತೀಯವಾದ ಪೂರ್ಣ ಬ್ರಹ್ಮವನ್ನು ಜ್ಞಾನಿಯು ಸಮಾಧಿಯ ಮೂಲಕ
ಹೃದಯಾಕಾಶದಲ್ಲಿ ಸಾಕ್ಷಾತ್ಕರಿಸುತ್ತಾನೆ.
 
ಸಮಾಹಿತಾಂತಃಕರಣಃ ಸ್ವರೂಪೇ
ವಿಲೋಕಯಾತ್ಮಾನಮಖಂಡವೈಭವಮ್ ।
ವಿಜೃಂದ್ಧಿ ಬಂಧಂ ಭವಗಂಧ-ಗಂಧಿತಂ
ಯನ ಪುಂಸ್ಕೃಂ ಸಫಲೀಕುರು
 
॥ ೪೧೦ ॥
 
ಸ್ವರೂಪೇ - ಸ್ವರೂಪದಲ್ಲಿ, ಪರಮಾತ್ಮನಲ್ಲಿ ಸಮಾಹಿತ. ಅಂತಃಕರಣಃ -
ಸಮಾಹಿತವಾದ ಅಂತಃಕರಣವುಳ್ಳವನಾಗಿ ಅಖಂಡ ವೈಭವಂ ಅಖಂಡವೈಭವವುಳ್ಳ
ಆತ್ಮಾನಂ - ಆತ್ಮನನ್ನು ವಿಲೋಕಯ - ಸಾಕ್ಷಾತ್ಕರಿಸು; ಭವಗಂಧ-ಗಂಧಿತಂ -
ಸಂಸಾರವಾಸನೆಯಿಂದ ವಾಸಿತವಾದ ಬಂಧಂ – ಬಂಧವನ್ನು ವಿಜೃಂದ್ಧಿ = ಕತ್ತರಿಸು;
ಯನ - ಪ್ರಯತ್ನದಿಂದ ಪುಂಸ್ಕೃಂ - ಪುರುಷತ್ವವನ್ನು ಸಫಲೀಕುರುಷ್ಟ -
ಸಾರ್ಥಕಪಡಿಸಿಕೊ
 
೪೧೦. ಸ್ವರೂಪದಲ್ಲಿ ಅಂತಃಕರಣವನ್ನು ನೆಲೆಗೊಳಿಸಿ, ಅಖಂಡವಾದ
ವೈಭವವುಳ್ಳ ಆತ್ಮನನ್ನು ಸಾಕ್ಷಾತ್ಕರಿಸು; ಸಂಸಾರವಾಸನೆಯಿಂದ ವಾಸಿತ
ವಾಗಿರುವ ಬಂಧವನ್ನು ಕತ್ತರಿಸು. ಪ್ರಯತ್ನದಿಂದ ಪುರುಷತ್ವವನ್ನು ಸಾರ್ಥಕ
 
ಪಡಿಸಿಕೊ.
 
ಸರ್ವೋಪಾಧಿ-ವಿನಿರ್ಮುಕ್ತಂ ಸಚ್ಚಿದಾನಂದನದ್ವಯಮ್ ।
ಭಾವಯಾತ್ಮಾನಮಾತ್ಮಸ್ಥಂ ನ ಭೂಯಃ ಕಲ್ಪ ಸೇಧ್ವನೇ ॥ ೪೧೧ ॥
 
ಸರ್ವ. ಉಪಾಧಿ ವಿನಿರ್ಮುಕ್ತಂ = ಸಮಸ್ತ ಉಪಾಧಿಗಳಿಂದಲೂ ಮುಕ್ತ
ನಾದ ಸಚ್ಚಿದಾನಂದಂ-ಸಚ್ಚಿದಾನಂದಸ್ವರೂಪನಾದ ಅದ್ವಯಂ ಅದ್ವಿತೀಯನಾದ
ಆತ್ಮಸ್ಥಂ = ನಿನ್ನಲ್ಲಿರುವ ಆತ್ಮಾನಂ ಆತ್ಮನನ್ನು ಭಾವಯ-ಭಾವಿಸು; ಭೂಯಃ
ಪುನಃ ಅಧ್ವನೇ - ಸಂಸಾರಮಾರ್ಗಕ್ಕೆ ನ ಕಲ್ಪಸೇ - ಯೋಗ್ಯನಾಗುವುದಿಲ್ಲ.
 
೪೧೧. ಸಮಸ್ತ ಉಪಾಧಿಗಳಿಂದಲೂ ಮುಕ್ತನಾದ, ಸಚ್ಚಿದಾನಂದ.
ಸ್ವರೂಪನೂ ಅದ್ವಿತೀಯನೂ ಆಗಿರುವ, ನಿನ್ನಲ್ಲಿರುವ ಆತ್ಮನನ್ನು ಭಾವಿಸು,