This page has not been fully proofread.

ವಿವೇಕಚೂಡಾಮಣಿ
 
[ဝ%
 
ಬ್ರಹ್ಮಣಿ - ಬ್ರಹ್ಮದಲ್ಲಿ ವಿಶ್ವಂ - ಪ್ರಪಂಚವು ನ ಹಿ ಅಸ್ತಿ = ಇರಲೇ ಇರಲಿಲ್ಲ;
ಗುಣೇ = ಹಗ್ಗದಲ್ಲಿ ಅಹಿಃ = ಹಾವೂ ಮೃಗತೃಷ್ಟಿ ಕಾಯಾಂ - ಬಿಸಿಲುಕುದುರೆಯಲ್ಲಿ
ಅಂಬುಬಿಂದುಃ ಹಿನೀರಿನ ಹನಿಯೂ ಕಾಲತ್ರಯೇ ಮೂರು ಕಾಲಗಳಲ್ಲಿಯೂ
ನ ಅಸಿ ಈಕ್ಷಿತಃ – ನೋಡಲ್ಪಟ್ಟಿಲ್ಲ.
 
೨೦೮
 
೪೦೩, ಪರತತ್ತ್ವವನ್ನು ಅರಿತುಕೊಳ್ಳುವುದಕ್ಕೆ ಮೊದಲೇ ಸತ್
ಸ್ವರೂಪವೂ ನಿರ್ವಿಕಲ್ಪವೂ ಆದ ಬ್ರಹ್ಮದಲ್ಲಿ ಪ್ರಪಂಚವು ಇರಲೇ ಇರಲಿಲ್ಲ.
ಹಗ್ಗದಲ್ಲಿ ಹಾವೂ ಬಿಸಿಲುಕುದುರೆಯಲ್ಲಿ ನೀರಿನ ಹನಿಯೂ ಮೂರು ಕಾಲ
ಗಳಲ್ಲಿಯೂ ಕಂಡುಬರುವುದಿಲ್ಲ.
 
ಮಾಯಾಮಾತ್ರಮಿದಂ ದೈತಮತಂ ಪರಮಾರ್ಥತಃ ।
ಇತಿ ಬೂತೇ ಶ್ರುತಿಃ ಸಾಕ್ಷಾತ್ ಸುಷುಪ್ತಾವನುಭೂಯತೇ
 
॥ ೪೦೪ ॥
 
ಇದಂ ತಂ - ಈ ದೈತವು ಮಾಯಾಮಾತ್ರಂ - ಮಾಯಾಮಾತ್ರವೇ,
ಪರಮಾರ್ಥತಃ - ಪರಮಾರ್ಥವಾಗಿ ಅದೈತಂ- ಅದೈತವು-ಇತಿ- ಎಂದು ಶ್ರುತಿಃ =
ಶ್ರುತಿಯು ಬೂತೇ = ಹೇಳುತ್ತದೆ; ಸುಷುಪ್ತ - ಸುಷುಪ್ತಿಯಲ್ಲಿ ಸಾಕ್ಷಾತ್ -
ಪ್ರತ್ಯಕ್ಷವಾಗಿ ಅನುಭೂಯತೇ - ಅನುಭವಿಸಲ್ಪಡುತ್ತದೆ.
 
೪೦೪. ಈ ದೈತವು ಮಾಯಾಮಾತ್ರವೇ, ಪರಮಾರ್ಥವಾಗಿ ಅ
ತವೇ' ಎಂದು ಶ್ರುತಿಯು ಹೇಳುತ್ತದೆ. ಸುಷುಪ್ತಿಯಲ್ಲಿ ಇದು ನೇರ
ವಾಗಿಯೇ ಅನುಭವಕ್ಕೆ ಬರುತ್ತದೆ.
 
ಪ್ರಪಂಚ-ನಿವೃತ್ತಿಯಿಂದ ಜ್ಞಾನವುಂಟಾಗುವುದಾದರೆ ಪ್ರಪಂಚವಿರುವಾಗ ಅದೈ
ತವು ಹೇಗಿರುವುದು? ಎಂಬುದಕ್ಕೆ ಇಲ್ಲಿ ಪರಿಹಾರವನ್ನು ಹೇಳಿದೆ. ಭ್ರಾಂತಿಯಿಂದ
ಹಗ್ಗದಲ್ಲಿ ಕಲ್ಪಿತವಾದ ಹಾವು ಸತ್ಯವಾಗಿದ್ದು ಕೊಂಡು ಅನಂತರ ಹೋಗುವುದಿಲ್ಲ.
ಹಾಗೆಯೇ ಈ ಪ್ರಪಂಚವೆಂಬ ದೈತವು ಮಾಯಾಮಾತ್ರವು. ಹಗ್ಗದ ಹಾಗೆ ಪರ
ಮಾರ್ಥವಾಗಿ ಅದೈತವೇ ಇರುವುದು. ಯಾವ ಪ್ರಪಂಚವೂ ಬರುವುದೂ ಇಲ್ಲ,
ಹೋಗುವುದೂ ಇಲ್ಲ.
 
೧ ಇದು ಯಾವ ಶ್ರುತಿಯೆಂಬುದು ತಿಳಿದಿಲ್ಲ. ಮಾಂಡೂಕ್ಯ ಕಾರಿಕೆಯ ೧. ೧೭ರ
ಉತ್ತರಭಾಗದಲ್ಲಿ ಇದು ಬಂದಿದೆ.]
 
ಅನನ್ಯತ್ವ ಮಧಿಷ್ಟಾನಾದಾರೋಪ್ಯ ಸ್ಯ ನಿರೀಕ್ಷಿತಮ್ ।
ಪಂಡಿತೈ ರಜ್ಜು-ಸರ್ಪಾದ್ ವಿಕ ಭ್ರಾಂತಿಜೀವನಃ ॥ ೪೦೫ ॥