This page has not been fully proofread.

ವಿವೇಕಚೂಡಾಮಣಿ
 
ನಿರ್ಮಲ. ನಿರ್ವಿಕಲ್ಪ. ನಿಃಸೀಮ-ನಿಃಸ್ಪಂದನ.
ಪಾರವಿಲ್ಲದ ಸ್ಪಂದನವಿಲ್ಲದ
 
ನಿರ್ವಿಕಾರವ ನಿರ್ಮಲವಾದ ನಿರ್ವಿಕಲ್ಪವಾದ
ವಿಕಾರವಿಲ್ಲದ ಅಂತರ್ಬಹಿಃಶೂನ್ಯಂ = ಸ್ವಗತಭೇದರಹಿತವಾದ ಅನನ್ಯಂ ತನಗಿಂತ
ಬೇರೆಯಲ್ಲದ ಅದ್ವಯಂ- ಅದ್ವಯವಾದ ಪರಂ ಬ್ರಹ್ಮ – ಪರಬ್ರಹ್ಮವೇ ಸ್ವಯಂ-
ತಾನು; ಬೋಧ್ಯಂ ಕಿಮ್ ಅಸ್ತಿ - ತಿಳಿಯತಕ್ಕದ್ದು [ಬೇರೆ ಯಾವುದುಂಟು?
 
೩೯೨. ಆಕಾಶದಂತೆ ನಿರ್ಮಲವೂ ನಿರ್ವಿಕಲ್ಪವೂ ಪಾರವಿಲ್ಲದುದೂ
ಸ್ಪಂದನವಿಲ್ಲದುದೂ ನಿರ್ವಿಕಾರವೂ ಸ್ವಗತಭೇದರಹಿತವೂ ತನಗಿಂತ ಬೇರೆ
ಯಿಲ್ಲದುದೂ ಅನ್ವಯವೂ ಆದ ಪರಬ್ರಹ್ಮವು ತಾನೇ (ಆಗಿರುತ್ತಾನೆ).
ಇದಕ್ಕಿಂತ ಬೇರೆ ತಿಳಿಯತಕ್ಕದ್ದು ಯಾವುದುಂಟು? ೧
 
[೧ ಸರ್ವಾತ್ಮಕನಾದ ಪರಮಾತ್ಮನನ್ನು ಅರಿತುಕೊಂಡಮೇಲೆ ತಿಳಿಯತಕ್ಕದ್ದು
ಏನೂ ಇರುವುದಿಲ್ಲ ಎಂಬುದು ಭಾವ.]
 
೩೯೩]
 
ಆಕಾಶವತ್-ಆಕಾಶದಂತೆ
 
F
 
೨೦೩
 
ವಕ್ತವ್ಯಂ ಕಿಮು ವಿದ್ಯತೇಽತ್ರ ಬಹುಧಾ ಬ್ರಹ್ಮವ ಜೀವಃ ಸ್ವಯಂ
ಬ್ರಹ್ಮತಜ್ಜಗದಾತತಂ ನು ಸಕಲಂ ಬ್ರಹ್ಮಾದ್ವಿತೀಯಂ ಶ್ರುತಿಃ ।
ಬ್ರಹ್ಮವಾಹಮಿತಿ ಪ್ರಬುದ್ಧ ಮತಯಃ ಸಂತ್ಯಕ್ಕ ಬಾಹ್ಯಾಃ ಸ್ಪುಟಂ
ಬ್ರಹ್ಮಭೂಯ ವಸಂತಿ ಸಂತತ-ಚಿದಾನಂದಾತ್ಮನೈತದ ಧ್ರುವಮ್
 
॥ ೩೯೩ ।
 
ಅತ್ರ - ಇಲ್ಲಿ ಬಹುಧಾ - ಬಹುವಿಧವಾಗಿ ವಕ್ತವ್ಯಂ- ಹೇಳತಕ್ಕದ್ದು ಕಿ
ಉ ವಿದ್ಯತೇ - ಏನಿರುವುದು? ಜೀವಃ - ಜೀವನು ಸ್ವಯಂ - ತಾನೇ ಬ್ರಹ್ಮ ಏನ
ಬ್ರಹ್ಮವೇ, ಆತತಂ – ವ್ಯಾಪಿಸಿರುವ ಏತತ್ ಸಕಲಂ ಜಗತ್ – ಈ ಜಗತ್ತೆಲ್ಲವೂ
ಬ್ರಹ್ಮ ನು - ಬ್ರಹ್ಮವೇ, ಬ್ರಹ್ಮ - ಬ್ರಹ್ಮವು ಅದ್ವಿತೀಯಂ - ಅದ್ವಿತೀಯವು -
(ಇತಿ = ಎಂದು] ಶ್ರುತಿಃ =ಶ್ರುತಿಯು [ಹೇಳುತ್ತದೆ]; ಅಹಂ = ನಾನು ಬ್ರಹ್ಮ ಏ
ಬ್ರಹ್ಮವೇ ಇತಿ - ಎಂದು ಪ್ರಬುದ್ಧ ಮತಯಃ - ಪ್ರಬುದ್ಧವಾದ ಬುದ್ಧಿಯುಳ್ಳವರು
ಸಂತ್ಯಕ್ತ ಬಾಹ್ಯಾಃ - ಬಾಹ್ಯವಸ್ತುಗಳನ್ನು ಬಿಟ್ಟವರಾಗಿ ಸ್ಪುಟಂ ಸ್ಪುಟವಾಗಿ ಬ್ರಹ್ಮ
ಭೂಯ - ಬ್ರಹ್ಮಸ್ವರೂಪರಾಗಿ ಸಂತತ ಚಿದಾನಂದ ಆತ್ಮನಾ - ಸಂತತ ಚಿದಾನಂದ
ಸ್ವರೂಪದಿಂದಲೇ ವಸಂತಿ ಇರುತ್ತಾರೆ. ಏತತ್ - ಇದು ಧ್ರುವಂ - ನಿಶ್ಚಯವು.
 
೩೯೩. ಈ ವಿಷಯದಲ್ಲಿ ಬಹುವಿಧವಾಗಿ ಹೇಳತಕ್ಕದ್ದೇನಿದೆ? ಜೀವನು
ತಾನೇ ಬ್ರಹ್ಮವು, ವ್ಯಾಪಿಸಿರುವ ಈ ಜಗತ್ತೆಲ್ಲವೂ ಬ್ರಹ್ಮವೇ, ಬ್ರಹ್ಮವು
ಅದ್ವಿತೀಯವು- ಎಂದು ಶ್ರುತಿಯು ಹೇಳುತ್ತದೆ. 'ನಾನು ಬ್ರಹ್ಮವೇ' ಎಂದು
ತಿಳಿದುಕೊಂಡಿರುವ ಬುದ್ಧಿಯುಳ್ಳವರು ಬಾಹ್ಯ ವಸ್ತುಗಳನ್ನು ಬಿಟ್ಟು, ಸ್ಪುಟ
ವಾಗಿ ಬ್ರಹ್ಮಸ್ವರೂಪರಾಗಿ, ಸತತವೂ ಚಿದಾನಂದಸ್ವರೂಪದಿಂದಲೇ ಇರು
ತ್ತಾರೆ. ಇದು ನಿಶ್ಚಯವು.