This page has been fully proofread once and needs a second look.

೩೭೧. ಒಳಗಿನ ತ್ಯಾಗ ಮತ್ತು ಹೊರಗಿನ ತ್ಯಾಗ-- ಇವೆರಡೂ ವಿರಕ್ತ-
ನಾದವನಿಗೇ ಯುಕ್ತವಾಗಿರುತ್ತವೆ. ವಿರಕ್ತನಾದವನೇ ಮೋಕ್ಷೇಚ್ಛೆಯಿಂದ
ಒಳಗಿನ ಮತ್ತು ಹೊರಗಿನ ಆಸಕ್ತಿಯನ್ನು ಬಿಡುತ್ತಾನೆ.
 
ಬಹಿಸ್ತು ವಿಷಯ್ಕೆಃಯೈಃ ಸಂಗಂ ತಥಾಂಥಾಽಂತರಹನಾದಿಭಿಃ ।
ವಿರಕ್ತ ಏವ ಶಜ್ಯೋತಿ ಕ್ನೋತಿ ತ್ಯಕ್ತುಂ ಬ್ರಹ್ಮಣಿ ನಿಷ್ಠಿತಃ ॥ ೩೭೨ ||
 
ಬ್ರಹ್ಮಣಿ -= ಬ್ರಹ್ಮದಲ್ಲಿ, ನಿಮ್ಮಿಷ್ಠಿತಃ = ನೆಲೆಗೊಂಡಿರುವ, ವಿರಕ್ತಃ ಏವ ವಿರಕ್ತ= ವಿರಕ್ತ-
ನಾದವನೇ, ಬಹಿಃ ತು-= ಹೊರಗೆ, ವಿಷ²ಃಯೈಃ = ವಿಷಯಗಳೊಡನೆ, ಸಂಗಂ -= ಸಂಗ-
ವನ್ನು, ಅಂತಃ = ಒಳಗೆ, ಅಹಮ್- ಆದಿಭಿಃ = ಅಹಂಕಾರಾದಿಗಳೊಡನೆ, [ಸಂಗವನ್ನು]
ತ್ಯಕುಂ –ಕ್ತುಂ = ಬಿಡಲು,ತಿ -ಕ್ನೋತಿ = ಸಮರ್ಥನಾಗುತ್ತಾನೆ.
 
೩೭೨. ಬ್ರಹ್ಮದಲ್ಲಿ ನೆಲೆಗೊಂಡಿರುವ ವಿರಕ್ತನಾದವನೇ ಹೊರಗೆ
ವಿಷಯಗಳ ಸಂಗವನ್ನೂ ಒಳಗೆ ಅಹಂಕಾರಾದಿಗಳ ಸಂಗವನ್ನೂ ಬಿಡಲು
ಸಮರ್ಥನಾಗುತ್ತಾನೆ.
 
ವೈರಾಗ್ಯ-ಬೋಧೌ ಪುರುಷಸ್ಯ ಪಕ್ಷಿವತ್
ಪಕ್ಸ್ಷೌ ವಿಜಾನೀಹಿ ವಿಚಕ್ಷಣ ತ್ವಮ್ ।
ವಿಮುಕ್ತಿ-ಸೌಧಾಗ್ರ-ತಲಾಧಿರೋಹಣಂ
ತಾಭ್ಯಾಂ ವಿನಾ ನಾನ್ಯತರೇಣ ಸಿದ್ಧಧ್ಯತಿ ॥ ೩೭೩ ॥
 
ವಿಚಕ್ಷಣ -= ಎಲೈ ವಿವೇಕಿಯೆ, ವೈರಾಗ್ಯ-= ಬೋದ್ -ಧೌ = ವೈರಾಗ್ಯ-ಜ್ಞಾನಗಳೆ-
ರಡೂ, ಪುರುಷಸ್ಯ -= ಮನುಷ್ಯನ, ಪಕ್ಷ -ಷೌ = ರೆಕ್ಕೆಗಳು, ಪಕ್ಷಿವತ್ -= ಪಕ್ಷಿಗೆ ಹೇಗೋ
ಹಾಗೆ, [ಎಂದು] ತ್ವಂ = ನೀನು, ವಿಜಾನೀಹಿ = ತಿಳಿದುಕೊ; ವಿಮುಕ್ತಿ-ಸೌಧಾಗ್ರ.-
ತಲ.- ಅಧಿರೋಹಣಂ -= ಮುಕ್ತಿಯೆಂಬ ಸೌಧದ ಮೇಲಕ್ಕೆ ಹತ್ತು ವಿಕೆಯು, ತಾಭ್ಯಾಂ
ವಿನಾ -= ಅವೆರಡನ್ನು ಬಿಟ್ಟು, ಅನ್ಯತರೇಣ -= ಒಂದರಿಂದ, ನ ಸಿದ್ಧತಿ –ಧ್ಯತಿ = ಸಿದ್ಧಿಸುವುದಿಲ್ಲ.
 
೩೭೩. ಎಲೈ ವಿವೇಕಿಯಾದ ಶಿಷ್ಯನೆ, ವೈರಾಗ್ಯವೂ ಜ್ಞಾನವೂ-- ಪಕ್ಷಿಗೆ
ಹೇಗೋ ಹಾಗೆ ಮನುಷ್ಯನ ಎರಡು ರೆಕ್ಕೆಗಳೆಂದು ತಿಳಿ. ಇವೆರಡರಲ್ಲಿ
ಒಂದಿಲ್ಲದಿದ್ದರೂ ಮುಕ್ತಿಸೌಧದ ಮೇಲಕ್ಕೆ ಹತ್ತುವುದು ಸಾಧ್ಯವಾಗುವುದಿಲ್ಲ.
 
ಅತ್ಯಂತ-ವೈರಾಗ್ಯವತಃ ಸಮಾಧಿಃ
ಸಮಾಹಿತಸ್ಯೈವ ದೃಢಪ್ರಬೋಧಃ ।
ಪ್ರಬುದ್ಧ ತತ್ತ್ವ-ತತ್ತ್ವಸ್ಯ ಹಿ ಬಂಧಮುಕ್ತಿ-
ರ್ಮುಕ್ತಾತ್ಮನೋ ನಿತ್ಯಸುಖಾನುಭೂತಿಃ || ೩೭೪ ||