This page has not been fully proofread.

೧೯೨
 
ವಿವೇಕಚೂಡಾಮಣಿ
 
ದೇಹ-ಪ್ರಾಣೇಂದ್ರಿಯ-ಮನೋಬುದ್ದಾದಿಭಿರುಪಾಧಿಭಿಃ ।
ಹೈರ್ಯೆವಃ ಸಮಾಯೋಗಸ್ತತಾವೋಽಸ್ಯ
 
ಅಸ್ಯ ಯೋಗಿನಃ ಈ ಯೋಗಿಗೆ ದೇಹ ಪ್ರಾಣ. ಇಂದ್ರಿಯ. ಮನಃ-
ಬುದ್ಧಿ. ಆದಿಭಿಃ - ದೇಹ ಪ್ರಾಣ ಇಂದ್ರಿಯಗಳು ಮನಸ್ಸು ಬುದ್ಧಿ ಮೊದಲಾದ
ಉಪಾಧಿಭಿಃ ಉಪಾಧಿಗಳಲ್ಲಿ ದೈಃ ತೈಃ = ಯಾವಯಾವುದರೊಂದಿಗೆ ವೃತ್ತೇ
ವೃತ್ತಿಯ ಸಮಾಯೋಗಃ = ಸಂಬಂಧವು [ಆಗುತ್ತದೆಯೆ) ತದ್-ಭಾವಃ =
ಆಯಾ ಭಾವವು ಉಂಟಾಗುತ್ತದೆ).
 
೩೬೯. ಈ ಯೋಗಿಗೆ ದೇಹ ಪ್ರಾಣ ಇಂದ್ರಿಯಗಳು ಮನಸ್ಸು ಬುದ್ಧಿ
ಮೊದಲಾದ ಉಪಾಧಿಗಳಲ್ಲಿ ಯಾವಯಾವುದರೊಂದಿಗೆ ಅಂತಃಕರಣವೃತ್ತಿಯ
ಸಂಬಂಧವಾಗುತ್ತದೆಯೋ ಆಯಾ ಭಾವವುಂಟಾಗುತ್ತದೆ.
 
-
 
[೩೬೯
 

 
ಯೋಗಿನಃ
 
II ೩೬೯
 
{ ಯೋಗಿಯ ಮನಸ್ಸು ಸ್ಕೂಲಶರೀರದಲ್ಲಿ ನೆಲೆಗೊಂಡಿದ್ದರೆ ಅವನು ದೇಹಾತ್ಮ
ಭಾವವನ್ನು ಹೊಂದುತ್ತಾನೆ. ಹೀಗೆಯೇ ಆತ್ಮನಲ್ಲಿ ನೆಲೆಗೊಂಡರೆ ಆತ್ಮಭಾವವನ್ನು
ಹೊಂದುತ್ತಾನೆ ಎಂದು ತಿಳಿದುಕೊಳ್ಳುತ್ತಾನೆ.]
 
ತನ್ನಿವೃತ್ತಾ ಮುನೇ ಸಮ್ಯಕ್ ಸರ್ವೋಪರಮಣಂ ಸುಖಮ್ ।
ಸಂದೃಶ್ಯತೇ ಸದಾನಂದ-ರಸಾನುಭವ-ವಿಪ್ಲವಃ
 
II ೩೭೦ II
 
ತತ್- ನಿವೃತಾ = ಅವುಗಳ ಪರಿಹಾರದಿಂದ ಮುನೇಃ = ಮುನಿಗೆ ಸರ್ವ
ಉಪರಮಣಂ = ಸರ್ವೆಂದ್ರಿಯ ಉಪರತಿ ರೂಪದ ಸುಖಂ - ಸುಖವು ಸಮ್ಯಕ್
ಚೆನ್ನಾಗಿ [ಉಂಟಾಗುತ್ತದೆ, ಸದಾನಂದ-ರಸಾನುಭವ- ವಿಪ್ಲವಃ ಸದಾನ೦ದ
ರಸಾನುಭವದ ಪರಿಪೂರ್ಣತೆಯು ಸಂದೃಶ್ಯತೇ – ಕಂಡುಬರುತ್ತದೆ.
 
E
 
೩೭೦. ಅವುಗಳ ಪರಿಹಾರದಿಂದ ಮುನಿಗೆ ಸರ್ವೆಂದ್ರಿಯಗಳ ಉಪರತಿ
ರೂಪವುಳ್ಳ ಸುಖವು ಚೆನ್ನಾಗಿ ಉಂಟಾಗುತ್ತದೆ, ಸದಾನಂದ ರಸಾನುಭವದ
ಪರಿಪೂರ್ಣತೆಯು ಕಂಡುಬರುತ್ತದೆ.
 
ಅಂತಸ್ತಾಗೋ ಬಹಿಸ್ಸಾಗೋ ವಿರಕವ ಯುಜ್ಯತೇ ।
ತ್ಯಜತ್ಯಂತರ್ಬಹಿಸಂಗಂ ವಿರಕ್ತಸ್ತು ಮುಮುಕ್ತಯಾ
 
ಅಂತಸ್ವಾಗಃ = ಒಳಗಿನ ತ್ಯಾಗವೂ ಬಹಿಸ್ಯಾಗಃ = ಹೊರಗಿನ ತ್ಯಾಗವೂ
ವಿರಕ್ತಸ್ಯ ಏವ - ವಿರಕ್ತನಾದವನಿಗೇ ಯುಜ್ಯತೇ = ಯುಕ್ತವಾಗುತ್ತದೆ; ವಿರಕ್ತ
ತು = ವಿರಕ್ತನಾದವನೇ ುಮುಕ್ಷಯಾ - ಮೋಚ್ಛೆಯಿಂದ ಅಂತಃ = ಒಳಗಿನ
ಬಹಿಃ = ಹೊರಗಿನ ಸಂಗಂ = ಆಸಕ್ತಿಯನ್ನು ತ್ಯಜತಿ = ಬಿಡುತ್ತಾನೆ.
 
II ೩೭೧ ॥