This page has been fully proofread once and needs a second look.

ವಿವೇಕಚೂಡಾಮಣಿ
 
೩೬೮]
 
H
 
ಗಲೂ, ಪ್ರಯತ್ನಾತ್ -= ಪ್ರಯತ್ನದಿಂದ, ಚಿತ್ನಿರೋಧಃ ಏವ = ಚಿತ್ರನಿರೋಧವೇ
,
ಕಾರ್ಯಃ = ಕರ್ತವ್ಯವಾಗಿರುವುದು.
 

 
೩೬೭. ಏಕಾಂತವಾಸವು ಇಂದ್ರಿಯನಿಗ್ರಹಕ್ಕೆ ಕಾರಣವಾಗಿರುವುದು;

ಇಂದ್ರಿಯನಿಗ್ರಹವು ಚಿತ್ದ ನಿರೋಧಕ್ಕೆ ಕಾರಣವಾಗಿರುವುದು; ಚಿತ್

ನಿರೋಧದಿಂದ ಅಹಂ-ವಾಸನೆಯು ಲಯವನ್ನು ಹೊಂದುತ್ತದೆ; ಅಹಂ.
-
ವಾಸನೆಯ ಲಯದಿಂದ ಯೋಗಿಗೆ ಬ್ರಹ್ಮಾನಂದರಸದ ಅನುಭವವು ಯಾವಾ
-
ಗಲೂ ಆಗುತ್ತದೆ. ಆದುದರಿಂದ ಮುನಿಯು ಯಾವಾಗಲೂ ಚಿತ್ನಿರೋಧ
-
ವನ್ನೇ ಪ್ರಯತ್ನದಿಂದ ಮಾಡಬೇಕು.
 

 
ವಾಚಂ ನಿಯಚ್ಛಾತ್ಮನಿ ತಂ ನಿಯಚ್ಛ
 
ಬುದ್ಧ

ಬುದ್ಧೌ
ಧಿಯಂ ಯಚ್ಛ ಚ ಬುದ್ಧಿ ಸಾಕ್ಷಿಣಿ ।

ತಂ ಚಾಪಿ ಪೂರ್ಣಾತ್ಮನಿ ನಿರ್ವಿಕ
 
2
 
ಲ್ಪೇ
ವಿಲಾಪ್ಯ ಶಾಂತಿಂ ಪರಮಾಂ ಭಜಸ್ವ
 
೧೯೧
 
|| ೩೬೮
 
||
 
ವಾಚಂ = ವಾಕ್ಕನ್ನು, ಆತ್ಮನಿ = ಮನಸ್ಸಿನಲ್ಲಿ, ನಿಯಚ್ಛ -= ನಿಯಮಿಸಿಕೊ;

ತಂ = ಅದನ್ನು ಬುದ್ಧ - ಬುದ್ಧಿಯಲ್ಲಿ, ಬುದ್ಧೌ = ಬುದ್ಧಿಯಲ್ಲಿ, ನಿಯಚ್ಛ; ಧಿಯಂ ಚ - ಬುದ್ಧಿಯನ್ನು
= ಬುದ್ಧಿಯನ್ನು,
ಬುದ್ಧಿ ಸಾಕ್ಷಿಣಿ-= ಬುದ್ಧಿಯ ಸಾಕ್ಷಿಯಲ್ಲಿ, ಯಚ್ಛ-=ನಿಯಮಿಸಿಕೊ; ತಂ ಚ ಅಪಿ
=
ಅವನನ್ನೂ, ನಿರ್ವಿಕ-ಲ್ಪೇ= ಕಲ್ಪನಾಶೂನ್ಯನಾದ, ಪೂರ್ಣಾತ್ಮನಿ -= ಪೂರ್ಣಾತ್ಮನಲ್ಲಿ
,
ವಿಲಾಸ್ಯಪ್ಯ= ಲಯಹೊಂದಿಸಿ, ಪರಮಾಂ ಶಾಂತಿಂ - ವ= ಪರಮಶಾಂತಿಯನ್ನು, ಭಜಸ್ವ-
=
ಹೊಂದು.
 

 
೩೬೮,. ವಾಕ್ಕನ್ನು[^೧] ಮನಸ್ಸಿನಲ್ಲಿ ನಿಯಮಿಸಿಕೊ; ಮನಸ್ಸನ್ನು ಬುದ್ಧಿ
-
ಯಲ್ಲಿ ನಿಯಮಿಸಿಕೊ; ಬುದ್ಧಿಯನ್ನು ಬುದ್ಧಿ ಸಾಕ್ಷಿಯಲ್ಲಿ[^೨] ನಿಯಮಿಸಿಕೊ
;
ಬುದ್ಧಿ ಸಾಕ್ಷಿಯನ್ನು ಕಲ್ಪನಾಶೂನ್ಯನಾದ ಪೂರ್ಣಾತ್ಮನಲ್ಲಿ ಲಯಹೊಂದಿಸಿ

ಪರಮಶಾಂತಿಯನ್ನು ಹೊಂದು.
 

 
[ಈ ಶ್ಲೋಕದಲ್ಲಿ ಕಠೋಪನಿಷತ್ತಿನ ೧. ೩, ೧೩ರ ಭಾವವಿದೆ: 'ವಿವೇಕಿಯು

ವಾಕ್ಕನ್ನು ಮನಸ್ಸಿನಲ್ಲಿ ಲಯಮಾಡಿಕೊಳ್ಳಬೇಕು; ಮನಸ್ಸನ್ನು ಪ್ರಕಾಶರೂಪವಾದ

ಬುದ್ಧಿಯಲ್ಲಿ ಲಯಮಾಡಿಕೊಳ್ಳಬೇಕು; ಬುದ್ಧಿಯನ್ನು ಮಹತ್ -ಆತ್ಮನಲ್ಲಿ ಲಯ

ಮಾಡಿಕೊಳ್ಳಬೇಕು. ಮಹತ್-ಆತ್ಮನನ್ನು ಶಾಂತನಾದ ಆತ್ಮನಲ್ಲಿ ಲಯಮಾಡಿ
-
ಕೊಳ್ಳಬೇಕು.'
 

[^
] ಇದು ಇತರ ಇಂದ್ರಿಯಗಳಿಗೆ ಉಪಲಕ್ಷಣವಾಗಿದೆ.

[^
] ಬುದ್ಧಿಯಿಂದ ಉಪಹಿತನಾದ ಚೈತನ್ಯನಲ್ಲಿ ಎಂದರೆ ಜೀವಾತ್ಮನಲ್ಲಿ.
 
]