This page has not been fully proofread.

ವಿವೇಕಚೂಡಾಮಣಿ
 
೩೬೮]
 
H
 
ಗಲೂ ಪ್ರಯತ್ನಾತ್ - ಪ್ರಯತ್ನದಿಂದ ಚಿತ್ರನಿರೋಧಃ ಏವ = ಚಿತ್ರನಿರೋಧವೇ
ಕಾರ್ಯಃ = ಕರ್ತವ್ಯವಾಗಿರುವುದು.
 
೩೬೭. ಏಕಾಂತವಾಸವು ಇಂದ್ರಿಯನಿಗ್ರಹಕ್ಕೆ ಕಾರಣವಾಗಿರುವುದು;
ಇಂದ್ರಿಯನಿಗ್ರಹವು ಚಿತ್ರದ ನಿರೋಧಕ್ಕೆ ಕಾರಣವಾಗಿರುವುದು; ಚಿತ್ರ
ನಿರೋಧದಿಂದ ಅಹಂ-ವಾಸನೆಯು ಲಯವನ್ನು ಹೊಂದುತ್ತದೆ; ಅಹಂ.
ವಾಸನೆಯ ಲಯದಿಂದ ಯೋಗಿಗೆ ಬ್ರಹ್ಮಾನಂದರಸದ ಅನುಭವವು ಯಾವಾ
ಗಲೂ ಆಗುತ್ತದೆ. ಆದುದರಿಂದ ಮುನಿಯು ಯಾವಾಗಲೂ ಚಿತ್ರನಿರೋಧ
ವನ್ನೇ ಪ್ರಯತ್ನದಿಂದ ಮಾಡಬೇಕು.
 
ವಾಚಂ ನಿಯಚ್ಛಾತ್ಮನಿ ತಂ ನಿಯಚ್ಛ
 
ಬುದ್ಧ ಧಿಯಂ ಯಚ್ಛ ಚ ಬುದ್ಧಿ ಸಾಕ್ಷಿಣಿ ।
ತಂ ಚಾಪಿ ಪೂರ್ಣಾತ್ಮನಿ ನಿರ್ವಿಕ
 
2
 
ವಿಲಾಪ್ಯ ಶಾಂತಿಂ ಪರಮಾಂ ಭಜಸ್ವ
 
೧೯೧
 
೩೬೮ ॥
 
ವಾಚಂ = ವಾಕ್ಕನ್ನು ಆತ್ಮನಿ – ಮನಸ್ಸಿನಲ್ಲಿ ನಿಯಚ್ಛ - ನಿಯಮಿಸಿಕೊ;
ತಂ – ಅದನ್ನು ಬುದ್ಧ - ಬುದ್ಧಿಯಲ್ಲಿ ನಿಯಚ್ಛ; ಧಿಯಂ ಚ - ಬುದ್ಧಿಯನ್ನು
ಬುದ್ಧಿ ಸಾಕ್ಷಿಣಿ- ಬುದ್ಧಿಯ ಸಾಕ್ಷಿಯಲ್ಲಿ ಯಚ್ಛ-ನಿಯಮಿಸಿಕೊ; ತಂ ಚ ಅಪಿ
ಅವನನ್ನೂ ನಿರ್ವಿಕ- ಕಲ್ಪನಾಶೂನ್ಯನಾದ ಪೂರ್ಣಾತ್ಮನಿ - ಪೂರ್ಣಾತ್ಮನಲ್ಲಿ
ವಿಲಾಸ್ಯ ಲಯಹೊಂದಿಸಿ ಪರಮಾಂ ಶಾಂತಿಂ - ವರಮಶಾಂತಿಯನ್ನು ಭಜಸ್ವ-
ಹೊಂದು.
 
೩೬೮, ವಾಕ್ಕನ್ನು ಮನಸ್ಸಿನಲ್ಲಿ ನಿಯಮಿಸಿಕೊ; ಮನಸ್ಸನ್ನು ಬುದ್ಧಿ
ಯಲ್ಲಿ ನಿಯಮಿಸಿಕೊ; ಬುದ್ಧಿಯನ್ನು ಬುದ್ಧಿ ಸಾಕ್ಷಿಯಲ್ಲಿ ನಿಯಮಿಸಿಕೊ
ಬುದ್ಧಿ ಸಾಕ್ಷಿಯನ್ನು ಕಲ್ಪನಾಶೂನ್ಯನಾದ ಪೂರ್ಣಾತ್ಮನಲ್ಲಿ ಲಯಹೊಂದಿಸಿ
ಪರಮಶಾಂತಿಯನ್ನು ಹೊಂದು.
 
[ಈ ಶ್ಲೋಕದಲ್ಲಿ ಕಠೋಪನಿಷತ್ತಿನ ೧. ೩, ೧೩ರ ಭಾವವಿದೆ: 'ವಿವೇಕಿಯು
ವಾಕ್ಕನ್ನು ಮನಸ್ಸಿನಲ್ಲಿ ಲಯಮಾಡಿಕೊಳ್ಳಬೇಕು; ಮನಸ್ಸನ್ನು ಪ್ರಕಾಶರೂಪವಾದ
ಬುದ್ಧಿಯಲ್ಲಿ ಲಯಮಾಡಿಕೊಳ್ಳಬೇಕು; ಬುದ್ಧಿಯನ್ನು ಮಹತ್ ಆತ್ಮನಲ್ಲಿ ಲಯ
ಮಾಡಿಕೊಳ್ಳಬೇಕು. ಮಹತ್-ಆತ್ಮನನ್ನು ಶಾಂತನಾದ ಆತ್ಮನಲ್ಲಿ ಲಯಮಾಡಿ
ಕೊಳ್ಳಬೇಕು.'
 
೧ ಇದು ಇತರ ಇಂದ್ರಿಯಗಳಿಗೆ ಉಪಲಕ್ಷಣವಾಗಿದೆ.
೨ ಬುದ್ಧಿಯಿಂದ ಉಪಹಿತನಾದ ಚೈತನ್ಯನಲ್ಲಿ ಎಂದರೆ ಜೀವಾತ್ಮನಲ್ಲಿ.