This page has not been fully proofread.

ವಿವೇಕಚೂಡಾಮಣಿ
 
[೧೬
 
ವವನಿಗೆ ಗುರು ಎಂದು ಹೆಸರು.
 
ಗುಶಬ್ದ ಸಂಧ ಕಾರಾತ್ ರುಶಬ್ದ ಸ್ತನ್ನಿ-
ರೋಧಕಃ । ಅಂಧಕಾರನಿರೋಧಿತ್ವಾತ್ ಗುರುರಿತ್ಯಭಿಧೀಯತೇ ॥ ಎಂದು ಗುರು
ಗೀತೆಯು ಹೇಳುತ್ತದೆ.]
 
ಮೇಧಾವೀ ಪುರುಷೋ ವಿದ್ವಾನ್ ಊಹಾಪೋಹ-ವಿಚಕ್ಷಣಃ ।
ಅಧಿಕಾರ್ಯಾತ್ಮವಿದ್ಯಾಯಾಮುಕ್ತಲಕ್ಷಣ-ಲಕ್ಷಿತಃ
 
॥ ೧೬ ।
 
ಮೇಧಾವೀ ಮೇಧಾವಿಯಾದ ವಿದ್ವಾನ್ - ವಿದ್ವಾಂಸನಾದ ಊಹಾಪೋಹ.
ವಿಚಕ್ಷಣಃ- ಊಹಾಪೋಹಗಳಲ್ಲಿ ಚತುರನಾದ ಉಕ್ತ ಲಕ್ಷಣ-ಲಕ್ಷಿತಃ-ಇಲ್ಲಿಯ
ವರೆಗೆ ಹೇಳಲ್ಪಟ್ಟ ಲಕ್ಷಣಗಳನ್ನುಳ್ಳ ಪುರುಷಃ - ಪುರುಷನು ಆತ್ಮವಿದ್ಯಾಯಾಂ -
ಆತ್ಮವಿದ್ಯೆಯಲ್ಲಿ ಅಧಿಕಾರಿ – ಅಧಿಕಾರಿಯು.
 
೧೦
 
೧೬. ಮೇಧಾವಿಯ
 
ವಿದ್ವಾಂಸನೂ ಊಹಾಪೋಹಗಳಲ್ಲಿ ಚತು
ರನೂ ಇಲ್ಲಿಯ ವರೆಗೆ ಹೇಳಲ್ಪಟ್ಟ ಲಕ್ಷಣಗಳುಳ್ಳವನೂ ಆದ ಪುರುಷನು
ಆತ್ಮವಿದ್ಯೆಯಲ್ಲಿ ಅಧಿಕಾರಿಯಾಗಿರುತ್ತಾನೆ.
 
(ಬ್ರಹ್ಮಜ್ಞಾನವೆಂಬ ಫಲಕ್ಕೆ ಅಧಿಕಾರಿಯಾದ ಪುರುಷನ ಲಕ್ಷಣಗಳನ್ನು ಇಲ್ಲಿ
 
ಹೇಳಿದೆ.
 
೧ ಕೇಳಿದ ಅರ್ಥವನ್ನು ನೆನಪಿನಲ್ಲಿಡುವ ಸಾಮರ್ಥ್ಯವುಳ್ಳವನು.
 
೨ ತರ್ಕ- ಮೀಮಾಂಸೆಗಳಲ್ಲಿ ನುರಿತವನು.
೩ ೮ನೆಯ ಶ್ಲೋಕದಿಂದ ೧೫ನೆಯ
ವೈರಾಗ್ಯ ಮೊದಲಾದುವುಗಳಿಂದ ಕೂಡಿರುವವನು.
 
* ಆತ್ಮವಿದ್ಯಾಫಲವೆಂಬ ಮೋಕ್ಷವನ್ನು ಅನುಭವಿಸಲು ಅರ್ಹನಾಗಿರುತ್ತಾನೆ.
 
ಶ್ಲೋಕದ ವರೆಗೆ ಸೂಚಿಸಲ್ಪಟ್ಟ ವಿವೇಕ
 
ವಿವೇಕಿನೋ ವಿರಕ್ತಸ್ಯ ಶಮಾದಿಗುಣ-ಶಾಲಿನಃ ।
ಮುಮುರೇವ ಹಿ ಬ್ರಹ್ಮಜಿಜ್ಞಾಸಾ-ಯೋಗ್ಯತಾ ಮತಾ । ೧೭ ॥
 
ವಿವೇಕಿನಃ - ವಿವೇಕಿಯಾದ ವಿರಕ್ತಸ್ಯ - ವಿರಕ್ತನಾದ ಶಮಾದಿಗುಣ-
ಶಾಲಿನಃ- ಶಮಾದಿಗುಣಗಳಿಂದ ಕೂಡಿರುವ ಮುಮುಃ ಏವ ಹಿ ಮುಮುಕ್ಷು
ವಿಗೆ ಮಾತ್ರ ಬ್ರಹ್ಮಜಿಜ್ಞಾಸಾಯೋಗ್ಯತಾ - ಬ್ರಹ್ಮವಿಚಾರದಲ್ಲಿ ಅರ್ಹತೆ [ಇರುವು
ದೆಂಬುದು] ಮತಾ. - ಸಮ್ಮತವು.
 
೧೭. ವಿವೇಕಿಯೂ ವಿರಕ್ತನೂ ಶಮ ದಮ ಮೊದಲಾದ ಗುಣ
ಗಳಿಂದ ಕೂಡಿರುವವನೂ ಆದ ಮುಮುಕ್ಷುವಿಗೆ ಮಾತ್ರ ಬ್ರಹ್ಮವಿಚಾರ
ವನ್ನು ಮಾಡುವುದರಲ್ಲಿ ಅರ್ಹತೆಯಿರುತ್ತದೆ.
[೧ ನಿತ್ಯಾನಿತ್ಯ ವಸ್ತುಗಳನ್ನು ವಿವೇಚನೆ ಮಾಡುವವನು,
9 ವಿಷಯಗಳಲ್ಲಿ ಆಸಕ್ತನಾಗದವನು.