This page has been fully proofread once and needs a second look.

ನಿರಂತರಾಭ್ಯಾಸವಶಾತ್ ತದಿತ್ಥಂ
ಪಕ್ವಂ ಮನೋ ಬ್ರಹ್ಮಣಿ ಲೀಯತೇ ಯದಾ ।
ತದಾ ಸಮಾಧಿಃ ಸವಿಕಲ್ಪವರ್ಜಿತಃ
ಸ್ವತೋಽದ್ವಯಾನಂದ-ರಸಾನುಭಾವಕಃ ॥ ೩೬೧ ॥
 
ಇತ್ಥಂ = ಹೀಗೆ, ನಿರಂತರ-ಅಭ್ಯಾಸ-ವಶಾತ್ = ನಿರಂತರ-ಧ್ಯಾನಾಭ್ಯಾಸದ ವಶ-
ದಿಂದ, ತತ್ ಮನಃ = ಆ ಮನಸ್ಸು, ಪಕ್ವಂ = ಪಕ್ವವಾಗಿ, ಯದಾ = ಯಾವಾಗ,
ಬ್ರಹ್ಮಣಿ = ಬ್ರಹ್ಮದಲ್ಲಿ, ಲೀಯತೇ = ಲಯವಾಗುತ್ತದೆಯೊ, ತದಾ = ಆಗ, ಸ್ವತಃ = ತಾನೇ,
ಅದ್ವಯಾನಂದ-ರಸ-ಅನುಭಾವಕಃ = ಬ್ರಹ್ಮಾನಂದ-ರಸಾನುಭವಕ್ಕೆ ಕಾರಣವಾದ,
ಸವಿಕಲ್ಪವರ್ಜಿತಃ = ವಿಕಲ್ಪರಹಿತವಾದ, ಸಮಾಧಿಃ = ಸಮಾಧಿಯಾಗುತ್ತದೆ.
 
೩೬೧. ಹೀಗೆ ನಿರಂತರಧ್ಯಾನಾಭ್ಯಾಸದ ವಶದಿಂದ ಆ ಮನಸ್ಸು ಪಕ್ವ-
ವಾಗಿ ಯಾವಾಗ ಬ್ರಹ್ಮದಲ್ಲಿ ಲಯವಾಗುತ್ತದೆಯೋ ಆಗ ತಾನೇ ಬ್ರಹ್ಮಾನಂದ
ರಸದ ಅನುಭವಕ್ಕೆ ಕಾರಣವಾದ ನಿರ್ವಿಕಲ್ಪ ಸಮಾಧಿಯಾಗುತ್ತದೆ.
 
ಸಮಾಧಿನಾಽನೇನ ಸಮಸ್ತ-ವಾಸನಾ-
ಗ್ರಂಥೇರ್ವಿನಾಶೋಽಖಿಲಕರ್ಮನಾಶಃ ।
ಅಂತರ್ಬಹಿಃ ಸರ್ವತ ಏವ ಸರ್ವದಾ
ಸ್ವರೂಪ-ವಿಸ್ಫೂರ್ತಿರಯತ್ನತಃ ಸ್ಯಾತ್ ॥ ೩೬೨ ॥
 
ಅನೇನ ಸಮಾಧಿನಾ = ಈ ಸಮಾಧಿಯಿಂದ, ಸಮಸ್ತ-ವಾಸನಾ-ಗ್ರಂಥೇಃ =
ಸಮಸ್ತ ವಾಸನಾ-ಗ್ರಂಥಿಯ, ವಿನಾಶಃ = ನಾಶವೂ, ಅಖಿಲ-ಕರ್ಮ-ನಾಶಃ = ಸಮಸ್ತ
ಕರ್ಮಗಳ ನಾಶವೂ, [ಆಗಿ] ಅಂತಃ = ಒಳಗೂ, ಬಹಿಃ = ಹೊರಗೂ, ಸರ್ವತಃ ಏವ =
ಎಲ್ಲಾ ಕಡೆಗಳಲ್ಲಿಯೂ, ಸರ್ವದಾ = ಯಾವಾಗಲೂ, ಅಯತ್ನತಃ = ಯಾವ ಪ್ರಯ-
ತ್ನವೂ ಇಲ್ಲದೆ, ಸ್ವರೂಪ-ವಿಸ್ಪೂರ್ತಿಃ = ಆತ್ಮಸ್ವರೂಪದ ಪ್ರಕಾಶವು, ಸ್ಯಾತ್ =
ಉಂಟಾಗುತ್ತದೆ.
 
೩೬೨. ಈ ನಿರ್ವಿಕಲ್ಪ-ಸಮಾಧಿಯಿಂದ ಸಮಸ್ತ ವಾಸನಾ-ಗ್ರಂಥಿಯ
ನಾಶವೂ (ಸಂಚಿತವಾದ) ಸಮಸ್ತಕರ್ಮಗಳ ನಾಶವೂ ಆಗಿ, ಒಳಗೂ
ಹೊರಗೂ ಎಲ್ಲಾ ಕಡೆಗಳಲ್ಲಿಯೂ ಯಾವಾಗಲೂ ಯಾವ ಪ್ರಯತ್ನವೂ
ಇಲ್ಲದೆ ಆತ್ಮಸ್ವರೂಪದ ಪ್ರಕಾಶವು ಉಂಟಾಗುತ್ತದೆ.
 
ಶ್ರುತೇಃ ಶತಗುಣಂ ವಿದ್ಯಾನ್ಮನನಂ ಮನನಾದಪಿ ।
ನಿದಿಧ್ಯಾಸಂ ಲಕ್ಷಗುಣಮನಂತಂ ನಿರ್ವಿಕಲ್ಪ ಕಮ್ ॥ ೩೬೩ ॥