This page has not been fully proofread.

೩೬೦]
 
ವಿವೇಕಚೂಡಾಮಣಿ
 
೧೮೭
 
ಅತೀವ ಸೂಕ್ಷ್ಮಂ ಪರಮಾತ್ಮ-ತಂ
ನ ಸ್ಕೂಲದೃಷ್ಟಾ ಪ್ರತಿಪತ್ತು ಮರ್ಹತಿ ।
ಸಮಾಧಿನಾತ್ಯಂತ-ಸುಸೂಕ್ಷ್ಮವೃತ್ತಾ
ಜ್ಞಾತವ್ಯ ಮಾರ್ಯೆರತಿಶುದ್ಧ ಬುದ್ಧಿಭಿಃ II ೩೫೯
 
ಅತ
 
ಪರಮಾತ್ಮ-ತಮ್ಮ ಪರಮಾತ್ಮತತ್ತ್ವವು ಅತೀವ ಅತ್ಯಂತ ಸೂಕ್ಷ್ಮಂ =
ಸೂಕ್ಷ್ಮವಾದದ್ದು ; ಸ್ಕೂಲದೃಷ್ಟಾ - ಸ್ಕೂಲದೃಷ್ಟಿಯಿಂದ ಪ್ರತಿಪತ್ತು = ತಿಳಿಯು
ವುದಕ್ಕೆ ನ ಅರ್ಹತಿ – ಆಗುವುದಿಲ್ಲ; ಅತಿ ಶುದ್ಧ ಬುದ್ಧಿ ಭಿಃ = ಅತ್ಯಂತ ಶುದ್ಧವಾದ
ಬುದ್ಧಿಯುಳ್ಳ ಆಯೆ - ಆರ್ಯರಿಂದ ಅತ್ಯಂತ ಸುಸೂಕ್ಷ್ಮ ವೃತ್ತಾ = ಅತ್ಯಂತ
ಸೂಕ್ಷ್ಮವಾದ ವೃತ್ತಿಯುಳ್ಳ ಸಮಾಧಿನಾ - ಸಮಾಧಿಯಿಂದ ಜ್ಞಾತ ವ್ಯಂ - ತಿಳಿಯ
ತಕ್ಕದ್ದು.
 
೩೫೯. ಪರಮಾತ್ಮತತ್ತ್ವವು ಅತ್ಯಂತ ಸೂಕ್ಷ್ಮವಾದದ್ದು. ಸ್ಕೂಲ
ವಸ್ತುವನ್ನು ವಿಷಯೀಕರಿಸುವ ದೃಷ್ಟಿಯಿಂದ ಅದನ್ನು ತಿಳಿಯುವುದಕ್ಕೆ
ಆಗುವುದಿಲ್ಲ; ಅತ್ಯಂತ ಶುದ್ಧವಾದ ಬುದ್ಧಿಯುಳ್ಳ ಆರ್ಯರು ಅತಿ ಸೂಕ್ಷ್ಮ
ವಾದ ವೃತ್ತಿಯುಳ್ಳ ಸಮಾಧಿಯಿಂದ ಅದನ್ನು ತಿಳಿಯತಕ್ಕದ್ದು.
 
[೧ ಶ್ರುತಿ ಸ್ಮೃತಿ-ಇವುಗಳು ನಿರ್ದೇಶಿಸಿರುವ ಮಾರ್ಗದಲ್ಲಿ ಹೋಗುವವರು.]
 
ಯಥಾ ಸುವರ್ಣ೦ ಪುಟಪಾಕಶೋಧಿತಂ
 
ತ್ಯಾ ಮಲಂ ಸ್ವಾತಗುಣಂ ಸಮೃಚ್ಛತಿ ।
ತಥಾ ಮನಃ ಸರಜಸ್ತಮೋಮಲಂ
 
ಧ್ಯಾನೇನ ಸಂತ್ಯಜ್ಯ ಸಮೇತಿ ತತ್ತ್ವಮ್ ॥ ೩೬೦ ॥
ಯಥಾ - ಹೇಗೆ ಪುಟಪಾಕಶೋಧಿತಂ - ಪುಟಪಾಕದಿಂದ ಶೋಧಿಸಲ್ಪಟ್ಟ
ಸುವರ್ಣ೦ ಚಿನ್ನವು ಮಲಂ ಕಲ್ಮಲವನ್ನು ತ್ಯಾ ಬಿಟ್ಟು ಸ್ವ- ಆತ್ಮ.ಗುಣಂ-
ತನ್ನ ಗುಣವನ್ನು ಸಮೃಚ್ಛತಿ - ಹೊಂದುತ್ತದೆಯೊ ತಥಾ - ಹಾಗೆಯೇ ಮನಃ –
ಮನಸ್ಸು ಸರಜಸ್ತಮೋಮಲಂ- ಸರಜಸ್ಸು ತಮಸ್ಸು-ಇವುಗಳ ಕನ್ಮೂಲವನ್ನು
ಧ್ಯಾನೇನ - ಧ್ಯಾನದಿಂದ ಸಂತ್ಯಜ್ಯ = ಬಿಟ್ಟು ತತ್ತ್ವಂ = ಪರಮಾರ್ಥತತ್ತ್ವವನ್ನು
ಸಮೇತಿ - ಹೊಂದುತ್ತದೆ.
 
೩೬೦. ಹೇಗೆ ಪುಟಪಾಕದಿಂದ ಶೋಧಿಸಲ್ಪಟ್ಟ ಚಿನ್ನವು ತನ್ನ ಕಲ
ವನ್ನು ಬಿಟ್ಟು ನಿಜವಾದ ಗುಣವನ್ನು ಹೊಂದುತ್ತದೆಯೋ ಹಾಗೆಯೆ ಮನಸ್ಸು
ಸರಜಸ್ತಮೋಗುಣಗಳ ಕಲ್ಮಲವನ್ನು ಧ್ಯಾನದಿಂದ ಬಿಟ್ಟು ಪರಮಾರ್ಥ
ತತ್ತ್ವವನ್ನೇ ಹೊಂದುತ್ತದೆ.