This page has not been fully proofread.

ವಿವೇಕಚೂಡಾಮಣಿ
 
[೩೫೭
 
ಆಗುತ್ತಾನೆ. ಆದುದರಿಂದ ಉಪಾಧಿಯ ನಾಶಕ್ಕಾಗಿ ಜ್ಞಾನಿಯು ಯಾವಾ
ಗಲೂ ನಿರ್ವಿಕಲ್ಪ ಸಮಾಧಿಯ ನಿಷ್ಠೆಯಲ್ಲಿಯೇ ಇರಬೇಕು.
 
೧೮೬
 
[೧ ಸ್ಪಟಿಕದ ಕೆಳಗಿರುವ ಹೂವನ್ನು ತೆಗೆದಾಗ ಅದು ಸ್ವಚ್ಛವಾಗಿ ಕಾಣುತ್ತದೆ.]
ಸತಿ ಸಕ್ಕೂ ನರೋ ಯಾತಿ ಸದ್ಭಾವಂ ಹೈಕನಿಷ್ಠಯಾ ।
ಕೀಟಿ ಕೋ ಭ್ರಮರಂ ಧ್ಯಾಯನ್ ಭ್ರಮರತ್ಯಾಯ ಕಲ್ಪತೇ ॥ ೩೫೭ ॥
 
ಸತಿ - ಬ್ರಹ್ಮದಲ್ಲಿ ಸಕ್ತ = ಆಸಕ್ತನಾಗಿರುವ ನರಃ = ಮನುಷ್ಯನು ಏಕ
ನಿಷ್ಠಯಾ ತದೇಕನಿಷ್ಠೆಯಿಂದಲೇ ಸದ್ಭಾವಂ ಬ್ರಹ್ಮಭಾವವನ್ನು ಯಾತಿ ಹೊಂದು
ತಾನೆ; ಕೀಟಕಃ – ಕೀಟವು ಭ್ರಮರ ಭ್ರಮರವನ್ನು ಧ್ಯಾಯನ್ = ಚಿಂತಿಸುತ್ತ
ಭ್ರಮರಾಯ ಕಲ್ಪತೇ = ಭ್ರಮರವೇ ಆಗುತ್ತದೆ.
 
13
 
೩೫೭. ಸದ್ರೂಪವಾದ ಬ್ರಹ್ಮದಲ್ಲಿ ಆಸಕ್ತನಾಗಿರುವ ಮನುಷ್ಯನು
ತದೇಕನಿಷ್ಠೆಯಿಂದ ತಾನೇ ಬ್ರಹ್ಮಭಾವವನ್ನು ಹೊಂದುತ್ತಾನೆ. ಕೀಟವು
ಭ್ರಮರವನ್ನೇ ಚಿಂತಿಸುತ್ತ ತಾನೂ ಭ್ರಮರವಾಗುತ್ತದೆ.
 
(ಸಮಾಧಿನಿಷ್ಠನಾದವನಿಗೆ ಹೇಗೆ ಬ್ರಹ್ಮಾಕಾರವುಂಟಾಗುತ್ತದೆಂದು ದೃಷ್ಟಾಂತದ
ಮೂಲಕ ಹೇಳಿದೆ.]
 
ಕ್ರಿಯಾಂತರಾಸಕ್ತಿಮಪಾಸ್ಯ ಕೀಟಕೊ
 
ಧ್ಯಾಯನ್ನಲಿತ್ವಂ ಹ್ಯಲಿಭಾವಮೃಚ್ಛತಿ ।
ತಥೈವ ಯೋಗೀ ಪರಮಾತ್ಮತಮ್ಮ
 
ಧ್ಯಾತ್ವಾ ಸಮಾಯಾತಿ ತದೇಕನಿಷ್ಠಯಾ ॥ ೩೫೮ ॥
ಕೀಟಕಃ = ಕೀಟವು ಕ್ರಿಯಾ. ಅಂತರ ಆಸಕ್ತಿ – ಬೇರೆ ಕೆಲಸದಲ್ಲಿ ಆಸಕ್ತಿ
ಯನ್ನು ಅಪಾಸ್ಯ - ಬಿಟ್ಟು ಅಲಿತ್ವಂ= ಭ್ರಮರಭಾವವನ್ನು ಧ್ಯಾಯನ್= ಚಿಂತಿಸುತ್ತ
fಹೇಗೆ] ಅಲಿಭಾವಂ = ಭ್ರಮರಭಾವವನ್ನು ಋಚ್ಛತಿ ಹಿ ಹೊಂದುತ್ತದೆಯೊ ತಥಾ
ಏವ ಹಾಗೆಯೇ ಯೋಗೀ ಯೋಗಿಯು ಪರಮಾತ್ಮಂತಂ ಪರಮಾತ್ಮತ
ವನ್ನು ತದೇಕನಿಷ್ಠಯಾ - ತದೇಕನಿಷ್ಠೆಯಿಂದಲೇ ಧ್ಯಾತ್ವಾ - ಧ್ಯಾನಿಸುತ್ತ [ಅದನ್ನೇ]
ಸಮಾಯಾತಿ - ಹೊಂದುತ್ತಾನೆ.
 
೩೫೮, ಹೇಗೆ ಕೀಟವು ಬೇರೆ ಕೆಲಸದಲ್ಲಿ ಆಸಕ್ತಿಯನ್ನು ಬಿಟ್ಟು ಭ್ರಮರ
ವನ್ನೇ ಚಿಂತಿಸುತ್ತ ಭ್ರಮರಭಾವವನ್ನೇ ಹೊಂದುತ್ತದೆಯೋ ಹಾಗೆಯೇ
ಯೋಗಿಯು ಪರಮಾತ್ಮತತ್ತ್ವವನ್ನು ತದೇಕ ನಿಷ್ಠೆಯಿಂದ ಧ್ಯಾನಿಸುತ್ತ ಅದೇ
ರೂಪವನ್ನು ಹೊಂದುತ್ತಾನೆ.