This page has not been fully proofread.

ವಿವೇಕಚೂಡಾಮಣಿ
 
ಸಮಾಹಿತಾ ಯೇ ಪ್ರವಿಲಾಪ್ಯ ಬಾಹ್ಯಂ
ಪ್ರೋತ್ರಾದಿ ಚೇತಃ ಸ್ವಮಹಂ ಚಿದಾತ್ಮನಿ ।
ತ ಏವ ಮುಕ್ತಾ ಭವಪಾಶಬಂಧ-
ರ್ನಾನ್ಯ ತು ಪಾರೋಕ್ಷ-ಕಥಾಭಿಧಾಯಿನಃ ॥ ೩೫೫ ।
ಯೇ = ಯಾರು ಬಾಹ್ಯಂ - ಹೊರಗಿನ ಪ್ರೋತ್ರಾದಿ = ಸ್ತೋತ್ರವೇ ಮೊದ
ಲಾದ ಸಮುದಾಯವನ್ನು ಚೇತಃ = ಚಿತ್ರವನ್ನು ಸ್ವಮ್ ಅಹಂ – ತನ್ನ ಅಹಂಕಾರ
ವನ್ನು ಚಿದಾತ್ಮನಿ- ಚಿದಾತ್ಮನಲ್ಲಿ ಪ್ರವಿಲಾ-ಲಯಮಾಡಿಕೊಂಡು ಸಮಾಹಿತಾಃ
ಸಮಾಹಿತರಾಗಿರುವರೋ ತೇ ಏವ ಅಂತಹವರೇ ಭವ ಪಾಶ ಬಂದ್ – ಸಂಸಾರ
ಪಾಶಗಳ ಬಂಧಗಳಿಂದ ಮುಕ್ತಾಃ ಮುಕ್ತಿಯನ್ನು ಹೊಂದಿರುವರು- ಪಾರೋಕ್ಷ.
ಕಥಾ ಅಭಿಧಾಯಿನಃ ಪರೋಕ್ಷವಾಗಿರುವ ಮಾತುಗಳನ್ನು ಆಡುವವರಾದ ಅನ್ಯ
ಇತರರು ನ ತು - ಅಲ್ಲ.
 
8 =
 
೩೫೬]
 
೧೮೫
 
೩೫೫. ಯಾರು ತಮ್ಮ ಹೊರಗಿನ ಪ್ರೋತ್ರಾದಿ ಇಂದ್ರಿಯಸಮೂಹ
ವನ್ನೂ ಚಿತ್ರವನ್ನೂ ಅಹಂಕಾರವನ್ನೂ ಚಿದಾತ್ಮನಲ್ಲಿ ಲಯಮಾಡಿಕೊಂಡು
ಸಮಾಹಿತರಾಗಿರುವರೋ ಅವರೇ ಸಂಸಾರಪಾಶದ ಬಂಧಗಳಿಂದ ಮುಕ್ತ
ರಾಗಿರುವರು- ಪರೋಕ್ಷವಾದ ಮಾತುಗಳನ್ನಾಡುವ ಇತರರಲ್ಲ.
 
[೧ ಸಮಾಧಿಯಿಲ್ಲದೆ ಕೇವಲ ಶ್ರವಣದಿಂದ ಬ್ರಹ್ಮಾನುಭವವು ಉಂಟಾಗುವುದಿಲ್ಲ
ಎಂಬುದು ತಾತ್ಪರ್ಯ.
 
ಉಪಾಧಿ-ಭೇದಾತ್ ಸ್ವಯಮೇವ ಭಿದ್ಯತೇ
ಚೋಪಾಧ್ಯಪೋಹೇ ಸ್ವಯಮೇವ ಕೇವಲಃ ।
ತಸ್ಮಾದುಪಾಧೆರ್ವಿಲಯಾಯ ವಿದ್ವಾನ್
 
ವಸೇತ್ ಸರ್ದಾಕಲ್ಪ ಸಮಾಧಿನಿಷ್ಠಯಾ ॥ ೩೫೬
 
ತಾನೇ
 
ಉಪಾಧಿ, ಭೇದಾತ್ = ಉಪಾಧಿಭೇದಗಳ ದೆಸೆಯಿಂದ ಸ್ವಯಮ್ ಏವ
ಭಿದ್ಯತೇ - ಭೇದಭಾವವನ್ನು ಹೊಂದುತ್ತಾನೆ, ಉಪಾಧಿ ಅಪೋಹೇ ಚ =
ಮತ್ತು ಉಪಾಧಿಗಳ ನಿರಸನವಾದಾಗ ಸ್ವಯಮ್ ಏವ ತಾನೇ ಕೇವಲಃ =
ಕೇವಲನಾಗುತ್ತಾನೆ; ತಸ್ಮಾತ್-ಆದುದರಿಂದ ವಿದ್ವಾನ್ - ಜ್ಞಾನಿಯು ಉಪಾಧೇಃ-
ಉಪಾಧಿಯ ವಿಲಯಾಯ-ನಾಶಕ್ಕಾಗಿ ಸದಾ-ಯಾವಾಗಲೂ ಆಕಲ್ಪ ಸಮಾಧಿ-
ನಿಷ್ಮಯಾ - ನಿರ್ವಿಕಲ್ಪ ಸಮಾಧಿ-ನಿಷ್ಠೆಯಿಂದ ವಸೇತ್ - ಇರಬೇಕು.
 
೩೫೬. ಆತ್ಮನು ಒಬ್ಬನೇ ಆಗಿದ್ದರೂ ಉಪಾಧಿಗಳ ಭೇದದಿಂದ ಭೇದ
ಭಾವವನ್ನು ಹೊಂದುತ್ತಾನೆ, ಉಪಾಧಿಗಳನ್ನು ತೆಗೆದುಹಾಕಿದಾಗ ಒಬ್ಬನೇ