This page has not been fully proofread.

ತತ್ತ್ವವನ್ನು ವಿಂಗಡಿಸಿ, ಮಾಯಾಕೃತವಾದ ಮೋಹವೆಂಬ ಬಂಧವನ್ನು
ಕತ್ತರಿಸುತ್ತದೆ; ಅದರಿಂದ ಮುಕ್ತನಾದವನಿಗೆ ಪುನಃ ಸಂಸಾರವಿಲ್ಲ.
 
[^೧] ಶಾಸ್ತ್ರ ಆಚಾರ್ಯ--ಇವರ ಪ್ರಸಾದದಿಂದಲೂ ಮಹಾವಾಕ್ಯಾರ್ಥದ ಅನುಭವ-
ದಿಂದಲೂ ಉತ್ಪನ್ನವಾದ.
[^೨] ಬ್ರಹ್ಮವು ಸತ್ಯ, ಜಗತ್ತು ಮಿಥ್ಯ ಎಂಬ ರೂಪದ ಸರಿಯಾದ ವಿವೇಕ.]
 
ಪರಾವಕತ್ವ-ವಿವೇಕವಹ್ನಿ -
ರ್ದಹತ್ಯವಿದ್ಯಾಗಹನಂ ಹ್ಯಶೇಷಮ್ ।
ಕಿಂ ಸ್ಯಾತ್ ಪುನಃ ಸಂಸರಣಸ್ಯ ಬೀಜ-
ಮದ್ವೈತಭಾವಂ ಸಮುಪೇಯುಷೋಽಸ್ಯ ॥ ೩೪೫ ॥
 
ಪರ-ಅವರ-ಏಕತ್ವ-ವಿವೇಕ-ವಹ್ನಿಃ = ಜೀವ- ಪರಮಾತ್ಮರಿಬ್ಬರೂ ಒಂದೇ
ಎಂಬ ವಿವೇಕಾಗ್ನಿಯು, ಅವಿದ್ಯಾಗಹನಂ = ಅವಿದ್ಯೆಯೆಂಬ ಕಾಡನ್ನು, ಅಶೇಷಂ =
ನಿಃಶೇಷವಾಗಿ, ದಹತಿ = ಸುಡುತ್ತದೆ; ಅದೈತಭಾವಂ = ಅದ್ವೈತಭಾವವನ್ನು, ಸಮ-
ಉಪೇಯುಷಃ = ಚೆನ್ನಾಗಿ ಪಡೆದಿರುವ, ಅಸ್ಯ = ಇವನಿಗೆ, ಪುನಃ = ಮತ್ತೆ, ಸಂಸರಣಸ್ಯ =
ಸಂಸಾರಕ್ಕೆ, ಬೀಜಂ = ಕಾರಣವು, ಕಿಂ ಸ್ಯಾತ್ = ಯಾವುದು ಇದ್ದೀತು?
 
೩೪೫. ಜೀವ ಈಶ್ವರ--ಇವರಿಬ್ಬರೂ ಒಂದೇ ಎಂಬ ವಿವೇಕಾಗ್ನಿಯು
ಅವಿದ್ಯೆಯೆಂಬ ಕಾಡನ್ನು ನಿಃಶೇಷವಾಗಿ ಸುಡುತ್ತದೆ. ಅದ್ವೈತಭಾವವನ್ನೇ
ಚೆನ್ನಾಗಿ ಪಡೆದಿರುವ ಜ್ಞಾನಿಗೆ ಪುನಃ ಸಂಸಾರಕ್ಕೆ ಬರಲು ಯಾವ ಕಾರಣವು
ಇದ್ದೀತು?
 
ಆವರಣಸ್ಯ ನಿವೃತ್ತಿರ್ಭವತಿ ಹಿ ಸಮ್ಯಕ್ಪದಾರ್ಥ-ದರ್ಶನತಃ ।
ಮಿಥ್ಯಾಜ್ಞಾನ-ವಿನಾಶಸ್ತದ್ವದ್ವಿಕ್ಷೇಪ-ಜನಿತ-ದುಃಖನಿವೃತ್ತಿಃ ॥೩೪೬॥
 
ಸಮ್ಯಕ್-ಪದಾರ್ಥ-ದರ್ಶನತಃ = ವಸ್ತುವನ್ನು ಚೆನ್ನಾಗಿ ಸಾಕ್ಷಾತ್ಕರಿಸುವುದ-
ರಿಂದ, ಆವರಣಸ್ಯ = ಆವರಣದ, ನಿವೃತ್ತಿಃ = ನಿವೃತ್ತಿಯು, ಭವತಿ = ಉಂಟಾಗುತ್ತದೆ,
ಮಿಥ್ಯಾಜ್ಞಾನ-ವಿನಾಶಃ = ಮಿಥ್ಯಾಜ್ಞಾನದ ನಾಶವು [ಆಗುತ್ತದೆ], ತದ್ವತ್ =
ಹಾಗೆಯೇ, ವಿಕ್ಷೇಪಜನಿತ-ದುಃಖನಿವೃತ್ತಿಃ = ವಿಕ್ಷೇಪದಿಂದ ಆದ ದುಃಖದಿಂದ
ನಿವೃತ್ತಿಯೂ [ಆಗುತ್ತದೆ].
 
೩೪೬. ಪರಮಾರ್ಥವಸ್ತುವನ್ನು ಚೆನ್ನಾಗಿ ಸಾಕ್ಷಾತ್ಕರಿಸುವುದರಿಂದ
ಆವರಣವು ಹೋಗುತ್ತದೆ, ಮಿಥ್ಯಾಜ್ಞಾನವೂ ಹೋಗುತ್ತದೆ; ಹಾಗೆಯೇ
ವಿಕ್ಷೇಪದಿಂದ ಉಂಟಾದ ದುಃಖವೂ ಹೋಗುತ್ತದೆ.