This page has not been fully proofread.

ವಿವೇಕಚೂಡಾಮಣಿ
 
[೩೪೫
 
ತತ್ತ್ವವನ್ನು ವಿಂಗಡಿಸಿ, ಮಾಯಾಕೃತವಾದ ಮೋಹವೆಂಬ ಬಂಧವನ್ನು
ಕತ್ತರಿಸುತ್ತದೆ; ಅದರಿಂದ ಮುಕ್ತನಾದವನಿಗೆ ಪುನಃ ಸಂಸಾರವಿಲ್ಲ.
 
೧೮೦
 
[೧ ಶಾಸ್ತ್ರ ಆಚಾರ್ಯ-ಇವರ ಪ್ರಸಾದದಿಂದಲೂ ಮಹಾವಾಕ್ಯಾರ್ಥದ ಅನುಭವ
ದಿಂದಲೂ ಉತ್ಪನ್ನವಾದ.
 
೨ ಬ್ರಹ್ಮವು ಸತ್ಯ, ಜಗತ್ತು ಮಿಥ್ಯ ಎಂಬ ರೂಪದ ಸರಿಯಾದ ವಿವೇಕ.]
 
ಪರಾವಕತ್ವ-ವಿವೇಕವ
 
ರ್ದಹತ್ಯ ವಿದ್ಯಾಗಹನಂ ಶೇಷಮ್ ।
ಕಿಂ ಸ್ಯಾತ್ ಪುನಃ ಸಂಸರಣಸ್ಯ ಬೀಜ-
ಪರ. ಅವರ ಏಕತ್ವ-ವಿವೇಕ ವ
 
ಮತಭಾವಂ ಸಮುಪೇಯುಸ್ಯ ॥ ೩೪೫ ॥
ಜೀವ- ಪರಮಾತ್ಮರಿಬ್ಬರೂ ರೂ ಒ೦ದೇ
ಎಂಬ ವಿವೇಕಾಗ್ನಿಯು ಅವಿದ್ಯಾಗಹನಂ - ಅವಿದ್ಯೆಯೆಂಬ ಕಾಡನ್ನು ಅಶೇಷಂ =
ನಿಃಶೇಷವಾಗಿ ದಹತಿ ಸುಡುತ್ತದೆ: ಅದೈತಭಾವಂ ಅ ತಭಾವವನ್ನು ಸಮ
ಉಪೇಯುಷಃ- ಚೆನ್ನಾಗಿ ಪಡೆದಿರುವ ಅಸ್ಯ- ಇವನಿಗೆ ಪುನಃ ಮತ್ತೆ ಸಂಸರಣಸ್ಯ-
ಸಂಸಾರಕ್ಕೆ ಬೀಜಂ = ಕಾರಣವು ಕಿಂ ಸ್ಯಾತ್ - ಯಾವುದು ಇದ್ದೀತು?
 
HARR
 
೩೪೫, ಜೀವ ಈಶ್ವರ-ಇವರಿಬ್ಬರೂ ಒಂದೇ ಎಂಬ ವಿವೇಕಾಗ್ನಿಯು
ಅವಿದ್ಯೆಯೆಂಬ ಕಾಡನ್ನು ನಿಃಶೇಷವಾಗಿ ಸುಡುತ್ತದೆ. ಅದೈತಭಾವವನ್ನೇ
ಚೆನ್ನಾಗಿ ಪಡೆದಿರುವ ಜ್ಞಾನಿಗೆ ಪುನಃ ಸಂಸಾರಕ್ಕೆ ಬರಲು ಯಾವ ಕಾರಣವು
ಇದ್ದೀತು?
 
ಆವರಣಸ್ಯ ನಿವೃತ್ತಿರ್ಭವತಿ ಹಿ ಸಮ್ಯ ಕ್ಷದಾರ್ಥ-ದರ್ಶನತಃ ।
ಮಿಥ್ಯಾಜ್ಞಾನ-ವಿನಾಶದ್ವದ್ವಿಕ್ಷೇಪ-ಜನಿತ-ದುಃಖನಿವೃತ್ತಿಃ ॥೩೪೬॥
 
ಸಮ್ಯಕ್ ಪದಾರ್ಥ-ದರ್ಶನತಃ ವಸ್ತುವನ್ನು ಚೆನ್ನಾಗಿ ಸಾಕ್ಷಾತ್ಕರಿಸುವುದ
ರಿಂದ ಆವರಣಸ್ಯ . ಆವರಣದ ನಿವೃತ್ತಿಃ – ನಿವೃತ್ತಿಯು ಭವತಿ - ಉಂಟಾಗುತ್ತದೆ,
ಮಿಥ್ಯಾಜ್ಞಾನ ವಿನಾಶಃ - ಮಿಥ್ಯಾಜ್ಞಾನದ ನಾಶವು [ಆಗುತ್ತದೆ), ತದ್ವತ್ -
ಹಾಗೆಯೇ ವಿಕ್ಷೇಪಜನಿತ. ದುಃಖ ನಿವೃತ್ತಿ - ವಿಕ್ಷೇಪದಿಂದ ಆದ ದುಃಖದಿಂದ
ನಿವೃತ್ತಿಯೂ [ಆಗುತ್ತದೆ.
 
೩೪೬. ಪರಮಾರ್ಥವಸ್ತುವನ್ನು ಚೆನ್ನಾಗಿ ಸಾಕ್ಷಾತ್ಕರಿಸುವುದರಿಂದ
ಆವರಣವು ಹೋಗುತ್ತದೆ, ಮಿಥ್ಯಾಜ್ಞಾನವೂ ಹೋಗುತ್ತದೆ; ಹಾಗೆಯೇ
ವಿಕ್ಷೇಪದಿಂದ ಉಂಟಾದ ದುಃಖವೂ ಹೋಗುತ್ತದೆ.