This page has been fully proofread once and needs a second look.

ನಿತ್ಯ-ಆತ್ಮ-ನಿಷ್ಠಾ-ಪರೈಃ = ನಿತ್ಯಾತ್ಮ-ನಿಷ್ಠೆಯಲ್ಲಿ ಆಸಕ್ತರಾದ, ಆತ್ಮನಿ = ತನ್ನಲ್ಲಿ,
ಸದಾನಂದ-ಇಚ್ಛುಭಿಃ = ನಿತ್ಯಾನಂದವನ್ನು ಬಯಸುವ, ತತ್ತ್ವಜ್ಞೈಃ = ಜ್ಞಾನಿಗಳಿಂದ,
ಯತ್ನತಃ = ಪ್ರಯತ್ನಪೂರ್ವಕವಾಗಿ, ಕರಣೀಯಂ = [ದೃಶ್ಯದ ಅಗ್ರಹಣವು] ಮಾಡ-
ಲ್ಪಡತಕ್ಕದ್ದು.
 
೩೩೯. ದೇಹಾತ್ಮಭಾವದಿಂದ ಕೂಡಿ, ವಿಷಯಾನುಭವದಲ್ಲಿ ನೆಲೆಗೊಂಡ
ಮನಸ್ಸುಳ್ಳವನಾಗಿ, ಆಯಾ ಕರ್ಮವನ್ನು ಮಾಡುತ್ತಿರುವವನಿಗೆ[^೧] ದೃಶ್ಯ
ಜಗತ್ತನ್ನು ವರಿಗ್ರಹಿಸದಿರುವಿಕೆಯು ಹೇಗೆ ಸಾಧ್ಯವಾಗುತ್ತದೆ? ಸಮಸ್ತ
ಧರ್ಮಗಳನ್ನೂ[^೨] ಕರ್ಮಗಳನ್ನೂ[^೩] ವಿಷಯಗಳನ್ನೂ[^೪] ತೊರೆದು ನಿತ್ಯಾತ್ಮ
ನಿಷ್ಠೆಯಲ್ಲಿ ಆಸಕ್ತರಾಗಿ ತಮ್ಮಲ್ಲಿ ಸದಾನಂದವನ್ನು ಬಯಸುವ ತತ್ತ್ವಜ್ಞ-
ರಿಂದಲೇ (ಈ ದೃಶ್ಯ ಜಗತ್ತಿನ ಅವರಿಗ್ರಹವು) ಪ್ರಯತ್ನ ಪೂರ್ವಕವಾಗಿ ಮಾಡ-
ಲ್ಪಡತಕ್ಕದ್ದು.
 
[^೧] ವಿಷಯಲಾಭಕ್ಕೋಸ್ಕರ.
[^೨] ವೈದಿಕ -ಧರ್ಮಗಳನ್ನು,
[^೩] ಲೌಕಿಕ-ಕರ್ಮಗಳನ್ನು,
[^೪] ಇಶಬ್ದಾದಿ. -ವಿಷಯಗಳನ್ನು.]
 
ಸರ್ವಾತ್ಮಸಿದ್ಧಯೇ ಭಿಕ್ಷೋಃ ಕೃತ-ಶ್ರವಣ-ಕರ್ಮಣಃ ।
ಸಮಾಧಿಂ ವಿದಧಾತ್ಯೇಷಾ ಶಾಂತೋ ದಾಂತ ಇತಿ ಶ್ರುತಿಃ ॥ ೩೪೦ ॥
 
ಕೃತ-ಶ್ರವಣ-ಕರ್ಮಣಃ = ವೇದಾಂತಶ್ರವಣವನ್ನು ಮಾಡಿರುವ, ಭಿಕ್ಷೋಃ =
ಭಿಕ್ಷುವಿಗೆ, ಸರ್ವಾತ್ಮ-ಸಿದ್ಧಯೇ = ಸರ್ವಾತ್ಮಭಾವದ ಸಿದ್ಧಿಗೋಸ್ಕರ, ಶಾಂತಃ
ದಾಂತಃ = ಶಾಂತನು, ದಾಂತನು, ಇತಿ = ಎಂಬ, ಏಷಾ ಶ್ರುತಿಃ = ಈ ಶ್ರುತಿಯು,
ಸಮಾಧಿಂ = ಸಮಾಧಿಯನ್ನು, ವಿದಧಾತಿ = ವಿಧಿಸುತ್ತದೆ.
 
೩೪೦. ವೇದಾಂತವಾಕ್ಯದ ಶ್ರವಣವನ್ನು ಮಾಡಿರುವ ಭಿಕ್ಷುವಿಗೆ
ಸರ್ವಾತ್ಮಭಾವದ ಸಿದ್ಧಿಗೋಸ್ಕರ 'ಶಾಂತನೂ ದಾಂತನ[^೧] ಎಂಬ ಈ
ಶ್ರುತಿಯು ಸಮಾಧಿಯನ್ನು ವಿಧಿಸುತ್ತದೆ.
 
[^೧] 'ಆದುದರಿಂದ ಹೀಗೆ ಅರಿತುಕೊಂಡಿರುವವನು ಶಾಂತನ ದಾಂತನೂ ಉಪ-
ರತನೂ ತಿತಿಕ್ಷುವೂ ಸಮಾಹಿತನೂ ಆಗಿ ತನ್ನ ಶರೀರದಲ್ಲಿಯೇ ಆತ್ಮನನ್ನು ನೋಡು-
ತ್ತಾನೆ, ಸರ್ವವನ್ನೂ ಆತ್ಮನನ್ನಾಗಿ ನೋಡುತ್ತಾನೆ' ತಸ್ಮಾದೇವಂವಿಚ್ಛಾಂತೋ
ದಾಂತ ಉಪರತಸ್ತಿತಿಕ್ಷುಃ ಸಮಾಹಿತೋ ಭೂತ್ವಾಽಽತ್ಮನ್ಯೇವಾತ್ಮಾನಂ ಪಶ್ಯತಿ,
ಸರ್ವಮಾತ್ಮಾನಂ ಪಶ್ಯತಿ (ಬೃಹದಾರಣ್ಯಕ ಉ. ೪. ೪. ೨೩). ]